ಏ. 1ರಂದು ಸಂಜೆ 5 ಗಂಟೆಗೆ ಮಠದ ಆವರಣದಲ್ಲಿ ಹಿನ್ನೆಲೆ ಗಾಯಕರಾದ ಕೆ.ಎಸ್. ಚಿತ್ರಾ, ಎಸ್.ಪಿ. ಚರಣ್, ಮಧು ಬಾಲಕೃಷ್ಣನ್, ಹೇಮಂತ್ ಕುಮಾರ್, ಅನುರಾಧ ಭಟ್, ಲತಾ ಹಂಸಲೇಖ ಅವರು ಶಿವಕುಮಾರ ಸ್ವಾಮೀಜಿ ನೆನಪಿನಲ್ಲಿ ಗಾನಸುಧೆ ಹರಿಸಲಿದ್ದಾರೆ. ನಾಡಿನ ವಿವಿಧೆಡೆಗಳ ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಗಾನಸುಧೆಯನ್ನು ಮನ ತುಂಬಿಕೊಳ್ಳಲಿದ್ದಾರೆ.