‘ವಿರೋಧ ಪಕ್ಷಗಳನ್ನು ಟೀಕಿಸುವ ಬಿಜೆಪಿ ಮುಖಂಡರು ಹಾಗೂ ಸ್ವತಃ ಪ್ರಧಾನಮಂತ್ರಿಗಳು, ‘ನಾವು ಕೊರೊನಾ ವಿರುದ್ಧದ ಯುದ್ಧ ಗೆದ್ದು ಬಿಟ್ಟಿದ್ದೇವೆ’ ಎಂದು ನಾಲ್ಕು ತಿಂಗಳ ಹಿಂದೆ ಹೇಳಿದ್ದರು. ಈ ಮಾತುನಂಬಿದ ಜನರು, ದುಡಿಮೆಯಲ್ಲಿ ತೊಡಗಿಕೊಂಡರು. ಆಗಲೇ ಕೊರೊನಾದ ಎರಡನೇ ಅಲೆ ಬಂದು ಅಪ್ಪಳಿಸಿತು. ಅಸಂಖ್ಯಾತ ಜನರು ಮೃತಪಟ್ಟರು. ಈ ಸಾವುಗಳನ್ನು ಆಡಳಿತ ನಡೆಸುತ್ತಿರುವ ಸರ್ಕಾರಗಳೇ ಮಾಡಿದ ಕೊಲೆ ಎಂದರೆ ತಪ್ಪೇನು? ತಜ್ಞರು ನೀಡಿದ ಎಚ್ಚರಿಕೆ, ಸಲಹೆಗಳನ್ನು ಕಸದ ಬುಟ್ಟಿಗೆ ಎಸೆದು ಜನರನ್ನು ಕೊಂದವರೇ ಹೊರಬೇಕಲ್ಲವೇ?’ ಎಂದೂ ಅವರು ಪ್ರಶ್ನಿಸಿದ್ದಾರೆ.