ದೇವಸ್ಥಾನ ಖಾಸಗಿ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಸರ್ಕಾರದ ಪಾತ್ರ ಏಕೆ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಮುಂದಿನ ವಿಚಾರಣೆವರೆಗೂ ಧರ್ಮದರ್ಶಿ ರಾಮಪ್ಪ ನೇತೃತ್ವದ ಆಡಳಿತ ಮಂಡಳಿಯೇ ದೇವಸ್ಥಾನದ ಉಸ್ತುವಾರಿ ಮುಂದುವರಿಸಿಕೊಂಡು ಹೋಗಬೇಕು. ದೇವಸ್ಥಾನದ ನಿತ್ಯದ ಆಡಳಿತದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಮೌಖಿಕವಾಗಿ ತಿಳಿಸಿದರು.