‘ಟೀಕೆ ಮಾಡುವ ಮುನ್ನ ಹಿನ್ನೆಲೆ– ಮುನ್ನೆಲೆ ತಿಳಿದುಕೊಳ್ಳಬೇಕು. ಆರ್ಎಸ್ಎಸ್ ಏನು ಕೆಲಸ ಮಾಡುತ್ತಿದೆ, ಆರ್ಎಸ್ಎಸ್ನಲ್ಲಿರುವ ನಾಯಕರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಂಡು ಮಾತಾಡಬೇಕು. ‘ವೋಟ್ಬ್ಯಾಂಕ್’ ರಾಜಕಾರಣಕ್ಕಾಗಿ, ಧರ್ಮ, ಜಾತಿ ಓಲೈಕೆಗಾಗಿ ಅವಸರಿಸಿ ಮಾತನಾಡಿದರೆ ಜನರು ಪಾಠ ಕಲಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ’ ಎಂದು ಅವರು ಹೇಳಿದರು.