ಬೆಂಗಳೂರು: ಗುರುವಾರ ಸಂಜೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಗುರುವಾರ ಸಂಜೆ ಆಲಿಕಲ್ಲು ಮಳೆಯಾಗಿದೆ. ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಸಂಜೆ ಆಲಿಕಲ್ಲು ಗಾಳಿ ಸಮೇತ 15 ನಿಮಿಷಗಳ ಕಾಲ ಮಳೆ ಸುರಿಯಿತು. ಕೂಡ್ಲಿಗಿ ಮತ್ತು ಸಂಡೂರಿನಲ್ಲೂ ಮಳೆಯಾಯಿತು.
ಹುಬ್ಬಳ್ಳಿಯಲ್ಲಿ ಕೂಡ ಸಂಜೆಯಾಗುತ್ತಿದ್ದಂತೆ ಜೋರು ಮಳೆ ಆರಂಭವಾಗಿದೆ.
ಸಂಡೂರು ತಾಲ್ಲೂಕಿನ ಡಿ. ಮಲ್ಲಾಪುರ ಗ್ರಾಮದ ಜಮೀನಿನಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.
ಬೆಳಗಾವಿ ನಗರವೂ ಸೇರಿದಂತೆ ತಾಲ್ಲೂಕಿನವಿವಿಧೆಡೆ ಮತ್ತು ಹುಕ್ಕೇರಿ,ಗೋಕಾಕ, ಚಿಕ್ಕೋಡಿ,ಎಂ.ಕೆ.ಹುಬ್ಬಳ್ಳಿಭಾಗದಲ್ಲಿಗುಡುಗುಸಹಿತಮಳೆಯಾಗುತ್ತಿದೆ.