‘ದೇಗುಲದೊಳಗೆ ಪ್ರವೇಶಿಸಿದ ಸೂರ್ಯದೇವ ಮೊದಲು ನಂದಿಯ ಎಡ ಕಾಲಿಗೆ ನಮಸ್ಕರಿಸಿದ. ಬಳಿಕ ಅದರ ಕಿವಿಯ ಹತ್ತಿರ ಬಂದು ನಂದಿಯನ್ನು ಪ್ರಾರ್ಥಿಸಿದ. ನಂತರ ಅದರ ಎರಡು ಶೃಂಗಗಳ ಮಧ್ಯಭಾಗದಿಂದ ಸ್ವಾಮಿಯ ಗರ್ಭಗೃಹ ಪ್ರವೇಶಿಸಿದ.ಶಿವ ಮತ್ತು ಪಾರ್ವತಿ ಒಂದೇ ಪೀಠದಲ್ಲಿರುವುದು ಈ ದೇಗುಲದ ವೈಶಿಷ್ಟ್ಯ. ಗರ್ಭಗುಡಿ ಪ್ರವೇಶಿಸುತ್ತಿದ್ದಂತೆ ಸೋಮಸೂತ್ರದ ಪಾರ್ವತಿಯ ದರ್ಶನ ಮಾಡಿ ಆಕೆಯ ಅನುಗ್ರಹ ಪಡೆದ. ಅನಂತರ ಲಿಂಗದ ಪಾದ ಸ್ಪರ್ಶಿಸಿದ ಸೂರ್ಯದೇವ, ಕ್ರಮೇಣ ಇಡೀ ಲಿಂಗಕ್ಕೆ ಕಿರಣಾಭಿಷೇಕ ಮಾಡಿ ಉತ್ತರಾಯಣಕ್ಕೆ ಪ್ರವೇಶ ಮಾಡಿದ್ದಾನೆ’ ಎಂದುದೇವಸ್ಥಾನದ ಪ್ರಧಾನ ಅರ್ಚಕಸೋಮಸುಂದರ್ ದೀಕ್ಷಿತ್ ಹೇಳಿದರು.