‘ತುಳು-ಕನ್ನಡ ಎನ್ನುವ ನೆಲೆಯಲ್ಲಿ ಕನ್ನಡ ಚಳವಳಿ ಒಡೆಯವ ಹುನ್ನಾರ ನಡೆದಾಗ ಇಬ್ಬರನ್ನೂ ಒಗ್ಗೂಡಿಸುವಲ್ಲಿ ಸ್ವಾಮೀಜಿ ಯಶಸ್ವಿಯಾಗಿದ್ದರು. ಕೇರಳ ಸರ್ಕಾರ ಕನ್ನಡದ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆಸಿದಾಗಲೆಲ್ಲಾ, ನಡೆಯುತ್ತಿದ್ದ ಹೋರಾಟದಲ್ಲಿ ಸ್ವಾಮೀಜಿಯೂ ಇರುತ್ತಿದ್ದರು. ಇವರ ನಿಧನದಿಂದ ಕಾಸರಗೋಡು ಕನ್ನಡ ಚಳವಳಿಯ ಆಧಾರಸ್ತಂಭವೊಂದು ಕಳಚಿದಂತಾಗಿದೆ’ ಎಂದು ಕನ್ನಡ ಗೆಳೆಯರ ಬಳಗ ಕಂಬನಿ ಮಿಡಿದಿದೆ.