‘ಕಾರ್ಪೊರೇಟ್ಗಳಿಗೆ ಜಗತ್ತಿನಲ್ಲೇ ಅತಿ ಕಡಿಮೆ ತೆರಿಗೆ ಇರುವ ರಾಷ್ಟ್ರಗಳಲ್ಲಿ ನಮ್ಮದೂ ಒಂದು. ಇಷ್ಟಾದ ಮೇಲೂ ನಾವು ತೆರಿಗೆ ಕಟ್ಟೋರು. ಮಿಕ್ಕವರು ಕುಂತು ತಿನ್ನೋರು ಎಂದು ಬಾಯಿ ಬಡಿದುಕೊಳ್ಳುವ ಮೇಲ್ಮಧ್ಯಮ ವರ್ಗದ ತುಂಡುಗಳು ಮತ್ತು ‘ಪರಿವಾರಿ’ಗಳಿಂದ ಪ್ರಚಾರ ನಡೆದಿದೆ. ಇದಕ್ಕೆ ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರು ಮುನ್ನುಡಿ ಬರೆದರು. ಬಿಜೆಪಿ ಸರ್ಕಾರ ದೇಶದ ಜನಸಾಮಾನ್ಯರನ್ನು ಹಿಂಡಿ ಕಾರ್ಪೊರೇಟ್ಗಳಿಗೆ, ಅತಿ ಶ್ರೀಮಂತರಿಗೆ ಮಣೆ ಹಾಕುವುದರಲ್ಲಿ ಮಿಕ್ಕವರನ್ನು ಮೀರಿಸಿದೆ. ಒಂದು ರಾಷ್ಟ್ರ– ಒಂದು ತೆರಿಗೆಯಲ್ಲ; ಒಂದು ರಾಷ್ಟ್ರ ಜನಸಾಮಾನ್ಯರಿಗೆ ತೆರಿಗೆ, ಶ್ರೀಮಂತರಿಗೆ ವಿನಾಯಿತಿ ಎನ್ನಬಹುದು. ಅಂಕಿ–ಅಂಶ, ಪುರಾವೆಗಳನ್ನು ಬಿಟ್ಟು ಫೇಕ್ ಫಾರ್ವರ್ಡ್ ಮಾಡಿಕೊಂಡು ದೇಶ ದ್ರೋಹ ಎಸಗುತ್ತಿರುವ ನಾವು ಟ್ಯಾಕ್ಸ್ಪೇಯರ್ಸ್ ಮನಸ್ಥಿತಿಯವರಿಗೆ ಅರ್ಥವಾದೀತೆ’ ಎಂದುಡಾ. ವಾಸು ಎಚ್.ವಿ ಪ್ರಶ್ನಿಸಿದ್ದಾರೆ.