<p><strong>ಬೆಂಗಳೂರು:</strong> ‘ಹಂತಕರು ಮೇ 1ಕ್ಕೆ ನನಗೆ ಮುಹೂರ್ತ ಇಟ್ಟಿದ್ದಾರಂತೆ. ಅದೇ ದಿನ ನಟ ಶಿವರಾಜ್ಕುಮಾರ್, ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್.ರಂಗನಾಥ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹತ್ಯೆ ಮಾಡುತ್ತಾರಂತೆ. ಈ ಬಗ್ಗೆ ಕರೀಂ ಚಳ್ಳಕೆರೆ ಎಂಬ ವ್ಯಕ್ತಿ ನನಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಅವರು ಭದ್ರತೆ ಒದಗಿಸಿದ್ದಾರೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯ್ಕ್ ಹೇಳಿದರು.</p>.<p>ಭಾನುವಾರ ಬಿಡುಗಡೆಗೊಂಡ ಎಚ್.ಎಂ.ರೇವಣ್ಣ ಕುರಿತ ‘ಸಂಗತ’ ಕೃತಿಯ ಬಗ್ಗೆ ಮಾತನಾಡುವಾಗ ಅವರು ಈ ವಿಷಯ ಪ್ರಸ್ತಾಪಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/entertainment/cinema/sandalwood-actor-kiccha-sudeep-fans-attack-on-ahorathra-815274.html" target="_blank">ಲೇಖಕ ಅಹೋರಾತ್ರ ಮನೆಗೆ ನುಗ್ಗಿ ನಟ ಸುದೀಪ್ ಅಭಿಮಾನಿಗಳಿಂದ ದಾಂದಲೆ</a></strong></p>.<p>‘ಸಿ.ಟಿ.ರವಿ ಇಲ್ಲವೇ ನನ್ನನ್ನು ಕೊಲ್ಲಬೇಕು. ಇಬ್ಬರನ್ನೂ ಒಟ್ಟಿಗೆ ಕೊಲ್ತೀವಿ ಅಂತ ಬರೆದಿದ್ದಾರೆ. ಇದನ್ನು ನೋಡಿದಾಗ ಯಾರೊ ಹುಡುಗಾಟಿಕೆಗೆ ಇದನ್ನು ಬರೆದಿರಬಹುದು ಅಂತ ಅನಿಸುತ್ತಿದೆ. ಗೌರಿ ಲಂಕೇಶ್ ಹಾಗೂ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆಗೈದ ವ್ಯಕ್ತಿಗಳಿಗೇ ಸುಫಾರಿ ಕೊಡಲಾಗಿದೆ.ಹಂತಕರು ಕೇರಳದ ಮಹಮ್ಮದ್ ರಸೂಲ್ ಹಾಗೂ ಹಾಸನದ ಮುಸ್ತಾಫ ಅಲಿಖಾನ್ರಿಂದ ಸುಫಾರಿ ಪಡೆದಿದ್ದಾರೆ. ಹೀಗಾಗಿ ನಾಲ್ಕು ಜನಕ್ಕೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.</p>.<p><strong>ಇದನ್ನೂ ಓದಿ... <a href="https://www.prajavani.net/entertainment/cinema/priyanka-chopra-scared-to-filmmaker-who-asked-her-to-strip-to-underwear-815281.html" target="_blank">ಒಳ ಉಡುಪು ಕಳಚಲು ಹೇಳಿದ್ದ ನಿರ್ದೇಶಕ: ಕಹಿ ನೆನಪು ತೆರೆದಿಟ್ಟ ಪ್ರಿಯಾಂಕಾ ಚೋಪ್ರಾ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಹಂತಕರು ಮೇ 1ಕ್ಕೆ ನನಗೆ ಮುಹೂರ್ತ ಇಟ್ಟಿದ್ದಾರಂತೆ. ಅದೇ ದಿನ ನಟ ಶಿವರಾಜ್ಕುಮಾರ್, ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್.ರಂಗನಾಥ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹತ್ಯೆ ಮಾಡುತ್ತಾರಂತೆ. ಈ ಬಗ್ಗೆ ಕರೀಂ ಚಳ್ಳಕೆರೆ ಎಂಬ ವ್ಯಕ್ತಿ ನನಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಅವರು ಭದ್ರತೆ ಒದಗಿಸಿದ್ದಾರೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯ್ಕ್ ಹೇಳಿದರು.</p>.<p>ಭಾನುವಾರ ಬಿಡುಗಡೆಗೊಂಡ ಎಚ್.ಎಂ.ರೇವಣ್ಣ ಕುರಿತ ‘ಸಂಗತ’ ಕೃತಿಯ ಬಗ್ಗೆ ಮಾತನಾಡುವಾಗ ಅವರು ಈ ವಿಷಯ ಪ್ರಸ್ತಾಪಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/entertainment/cinema/sandalwood-actor-kiccha-sudeep-fans-attack-on-ahorathra-815274.html" target="_blank">ಲೇಖಕ ಅಹೋರಾತ್ರ ಮನೆಗೆ ನುಗ್ಗಿ ನಟ ಸುದೀಪ್ ಅಭಿಮಾನಿಗಳಿಂದ ದಾಂದಲೆ</a></strong></p>.<p>‘ಸಿ.ಟಿ.ರವಿ ಇಲ್ಲವೇ ನನ್ನನ್ನು ಕೊಲ್ಲಬೇಕು. ಇಬ್ಬರನ್ನೂ ಒಟ್ಟಿಗೆ ಕೊಲ್ತೀವಿ ಅಂತ ಬರೆದಿದ್ದಾರೆ. ಇದನ್ನು ನೋಡಿದಾಗ ಯಾರೊ ಹುಡುಗಾಟಿಕೆಗೆ ಇದನ್ನು ಬರೆದಿರಬಹುದು ಅಂತ ಅನಿಸುತ್ತಿದೆ. ಗೌರಿ ಲಂಕೇಶ್ ಹಾಗೂ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆಗೈದ ವ್ಯಕ್ತಿಗಳಿಗೇ ಸುಫಾರಿ ಕೊಡಲಾಗಿದೆ.ಹಂತಕರು ಕೇರಳದ ಮಹಮ್ಮದ್ ರಸೂಲ್ ಹಾಗೂ ಹಾಸನದ ಮುಸ್ತಾಫ ಅಲಿಖಾನ್ರಿಂದ ಸುಫಾರಿ ಪಡೆದಿದ್ದಾರೆ. ಹೀಗಾಗಿ ನಾಲ್ಕು ಜನಕ್ಕೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.</p>.<p><strong>ಇದನ್ನೂ ಓದಿ... <a href="https://www.prajavani.net/entertainment/cinema/priyanka-chopra-scared-to-filmmaker-who-asked-her-to-strip-to-underwear-815281.html" target="_blank">ಒಳ ಉಡುಪು ಕಳಚಲು ಹೇಳಿದ್ದ ನಿರ್ದೇಶಕ: ಕಹಿ ನೆನಪು ತೆರೆದಿಟ್ಟ ಪ್ರಿಯಾಂಕಾ ಚೋಪ್ರಾ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>