<p><em><strong>ಮನುಷ್ಯರ ನಡುವೆ ಅಪನಂಬಿಕೆ ಹೆಚ್ಚುತ್ತಿರುವ ವಿಷಮ ಕಾಲಘಟ್ಟದಲ್ಲಿ ಮನಸ್ಸಿಗೆ ಮುದ ನೀಡುವ ಯುಗಾದಿ ಬಂದಿದೆ. ಹೊಸ ವರ್ಷದ ಹರ್ಷದ ಜತೆಗೆ ಈ ಯುಗಾದಿಯು ಮನಸ್ಸುಗಳನ್ನು ಬೆಸೆಯುವ ಸಂದರ್ಭವೂ ಹೌದು. ರಾಜ್ಯದ ಕೆಲವೆಡೆಗಳಲ್ಲಿರುವ ಮಾದರಿ ಎನ್ನಬಹುದಾದ ಸಾಮರಸ್ಯದ ನಿದರ್ಶನಗಳನ್ನು ಹೆಕ್ಕಿ ತಂದು ನಿಮ್ಮ ಮುಂದಿರಿಸಿದ್ದೇವೆ</strong></em></p>.<p><strong>ಯಾದಗಿರಿ:</strong> ಹುಣಸಗಿ ತಾಲ್ಲೂಕಿನ ಪುಟ್ಟ ಗ್ರಾಮ ಕೋಡೆಕಲ್ಲ, ಕಾಲಜ್ಞಾನಿ ಬಸವೇಶ್ವರ ದೇವಸ್ಥಾನದಿಂದ ಪ್ರಸಿದ್ಧ. ಇದು ಭಾವೈಕ್ಯದ ತಾಣವಾಗಿಯೂ ಹೆಸರು ಪಡೆದಿದೆ. ಯುಗಾದಿ ಹಬ್ಬದ ವೇಳೆ ಇಲ್ಲಿ ವಿಶಿಷ್ಟ ಪೂಜೆ ಜರುಗುತ್ತದೆ.</p>.<p>ಗ್ರಾಮದ ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ಪರಿಶಿಷ್ಟ ಸಮುದಾಯದವರು ತರುವ ನೀರಿನಿಂದ ಕೋಡೆಕಲ್ಲ ಕಾಲಜ್ಞಾನಿ ಬಸವೇಶ್ವರ ಗದ್ದುಗೆಗೆ ಗಂಧದ ಲೇಪನ ಮಾಡಲಾಗುತ್ತದೆ. ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದು.</p>.<p>ಯುಗಾದಿ ಅಮಾವಾಸ್ಯೆ ದಿನ ನಸುಕಿನ 5 ಗಂಟೆಗೆ ಪರಿಶಿಷ್ಟರು ನದಿಯಲ್ಲಿ ಸ್ನಾನ ಮಾಡಿಕೊಂಡು ಅಲ್ಲಿಂದ ಮಡಿ ನೀರು ಹೊತ್ತು ತರುತ್ತಾರೆ. ಅವರೆಲ್ಲ ಗ್ರಾಮದ ಸಮೀಪದ ಒಂದು ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ಗ್ರಾಮಸ್ಥರು ಅವರನ್ನು ವಾದ್ಯಮೇಳ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.</p>.<p>ಆ ನೀರಿನಿಂದಲೇಸ್ನಾನ ಮಾಡಿ ಬಸವೇಶ್ವರ ಗದ್ದುಗೆಗೆ ಗಂಧ ಲೇಪನ ಮಾಡುತ್ತಾರೆ. ಆ ನಂತರ ಮತ್ತೊಮ್ಮೆ ಸ್ನಾನ ಮಾಡುತ್ತಾರೆ. ಹೀಗೆ ಎಲ್ಲ ಪೂಜೆ ಮುಗಿದ ನಂತರ ಮುಸ್ಲಿಮರಿಂದ ಕುರಾನ್ ಪಠಣವೂ ನಡೆಯುತ್ತದೆ. ಈ ಮೂಲಕ ಕೋಡೆಕಲ್ಲ ಮಠದಲ್ಲಿ ಭಾವೈಕ್ಯದ ಆರಾಧನೆ ನಡೆಯುತ್ತದೆ.</p>.<p>‘ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಬಸವೇಶ್ವರರ ಲೆಕ್ಕದಲ್ಲಿ ಎಲ್ಲ ಸಮುದಾಯವರು ಒಂದೇ. ಹೀಗಾಗಿ ಒಂದೊಂದು ಸಮುದಾಯಕ್ಕೆ ಒಂದೊಂದು ಸೇವೆ ಸಲ್ಲಿಸುವ ಅವಕಾಶ ಇಲ್ಲಿದೆ. ಈ ಬಾರಿ ಕೊರೊನಾ ಕಾರಣದಿಂದ ಸರಳವಾಗಿ ಪೂಜೆ ನೆರವೇರಿಸಲಾಗುವುದು’ ಎಂದುಮಹಲಿನಮಠ ದೇವಸ್ಥಾನದ ವೃಷಭೇಂದ್ರ ಅಪ್ಪ ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಮನುಷ್ಯರ ನಡುವೆ ಅಪನಂಬಿಕೆ ಹೆಚ್ಚುತ್ತಿರುವ ವಿಷಮ ಕಾಲಘಟ್ಟದಲ್ಲಿ ಮನಸ್ಸಿಗೆ ಮುದ ನೀಡುವ ಯುಗಾದಿ ಬಂದಿದೆ. ಹೊಸ ವರ್ಷದ ಹರ್ಷದ ಜತೆಗೆ ಈ ಯುಗಾದಿಯು ಮನಸ್ಸುಗಳನ್ನು ಬೆಸೆಯುವ ಸಂದರ್ಭವೂ ಹೌದು. ರಾಜ್ಯದ ಕೆಲವೆಡೆಗಳಲ್ಲಿರುವ ಮಾದರಿ ಎನ್ನಬಹುದಾದ ಸಾಮರಸ್ಯದ ನಿದರ್ಶನಗಳನ್ನು ಹೆಕ್ಕಿ ತಂದು ನಿಮ್ಮ ಮುಂದಿರಿಸಿದ್ದೇವೆ</strong></em></p>.<p><strong>ಯಾದಗಿರಿ:</strong> ಹುಣಸಗಿ ತಾಲ್ಲೂಕಿನ ಪುಟ್ಟ ಗ್ರಾಮ ಕೋಡೆಕಲ್ಲ, ಕಾಲಜ್ಞಾನಿ ಬಸವೇಶ್ವರ ದೇವಸ್ಥಾನದಿಂದ ಪ್ರಸಿದ್ಧ. ಇದು ಭಾವೈಕ್ಯದ ತಾಣವಾಗಿಯೂ ಹೆಸರು ಪಡೆದಿದೆ. ಯುಗಾದಿ ಹಬ್ಬದ ವೇಳೆ ಇಲ್ಲಿ ವಿಶಿಷ್ಟ ಪೂಜೆ ಜರುಗುತ್ತದೆ.</p>.<p>ಗ್ರಾಮದ ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ಪರಿಶಿಷ್ಟ ಸಮುದಾಯದವರು ತರುವ ನೀರಿನಿಂದ ಕೋಡೆಕಲ್ಲ ಕಾಲಜ್ಞಾನಿ ಬಸವೇಶ್ವರ ಗದ್ದುಗೆಗೆ ಗಂಧದ ಲೇಪನ ಮಾಡಲಾಗುತ್ತದೆ. ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದು.</p>.<p>ಯುಗಾದಿ ಅಮಾವಾಸ್ಯೆ ದಿನ ನಸುಕಿನ 5 ಗಂಟೆಗೆ ಪರಿಶಿಷ್ಟರು ನದಿಯಲ್ಲಿ ಸ್ನಾನ ಮಾಡಿಕೊಂಡು ಅಲ್ಲಿಂದ ಮಡಿ ನೀರು ಹೊತ್ತು ತರುತ್ತಾರೆ. ಅವರೆಲ್ಲ ಗ್ರಾಮದ ಸಮೀಪದ ಒಂದು ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ಗ್ರಾಮಸ್ಥರು ಅವರನ್ನು ವಾದ್ಯಮೇಳ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.</p>.<p>ಆ ನೀರಿನಿಂದಲೇಸ್ನಾನ ಮಾಡಿ ಬಸವೇಶ್ವರ ಗದ್ದುಗೆಗೆ ಗಂಧ ಲೇಪನ ಮಾಡುತ್ತಾರೆ. ಆ ನಂತರ ಮತ್ತೊಮ್ಮೆ ಸ್ನಾನ ಮಾಡುತ್ತಾರೆ. ಹೀಗೆ ಎಲ್ಲ ಪೂಜೆ ಮುಗಿದ ನಂತರ ಮುಸ್ಲಿಮರಿಂದ ಕುರಾನ್ ಪಠಣವೂ ನಡೆಯುತ್ತದೆ. ಈ ಮೂಲಕ ಕೋಡೆಕಲ್ಲ ಮಠದಲ್ಲಿ ಭಾವೈಕ್ಯದ ಆರಾಧನೆ ನಡೆಯುತ್ತದೆ.</p>.<p>‘ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಬಸವೇಶ್ವರರ ಲೆಕ್ಕದಲ್ಲಿ ಎಲ್ಲ ಸಮುದಾಯವರು ಒಂದೇ. ಹೀಗಾಗಿ ಒಂದೊಂದು ಸಮುದಾಯಕ್ಕೆ ಒಂದೊಂದು ಸೇವೆ ಸಲ್ಲಿಸುವ ಅವಕಾಶ ಇಲ್ಲಿದೆ. ಈ ಬಾರಿ ಕೊರೊನಾ ಕಾರಣದಿಂದ ಸರಳವಾಗಿ ಪೂಜೆ ನೆರವೇರಿಸಲಾಗುವುದು’ ಎಂದುಮಹಲಿನಮಠ ದೇವಸ್ಥಾನದ ವೃಷಭೇಂದ್ರ ಅಪ್ಪ ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>