<p><strong>ಬಾಗಲಕೋಟೆ:</strong> ‘ಜಮಖಂಡಿಯಲ್ಲಿ ನಡೆದ ಸಭೆಯ ಹಿಂದೆ ಯಾರಿದ್ದಾರೆ ಎಂಬುದು ಸಮಾಜದ ಎಲ್ಲರಿಗೂ ಗೊತ್ತಿದೆ. ಶೀಘ್ರ ಅದು ಬಹಿರಂಗವಾಗಲಿದೆ. ಮೂರನೇ ಪೀಠದ ನಿರ್ಧಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳೊಲ್ಲ. ಆ ಬಗ್ಗೆ ಏನೂ ಮಾತಾಡೊಲ್ಲ’ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.</p>.<p class="Subhead">‘2ಎ ಮೀಸಲಾತಿ ಚಳವಳಿ ಹತ್ತಿಕ್ಕಲು ಬೇರೆ ಬೇರೆ ಬೆಳವಣಿಗೆ ನಡೆಯುತ್ತಿವೆ. ಇದು ಕೂಡ ಅದರ ಭಾಗ. ಸಮಾಜದ ಏಳಿಗೆಗೆ ನಾನು ದುಡಿಯುವುದು ಸಹಿಸಲು ಆಗದೇ ಹೊಟ್ಟೆಕಿಚ್ಚಿನಿಂದ ಹೀಗೆ ಮಾಡಲಾಗುತ್ತಿದೆ’ ಎಂದರು.</p>.<p class="Subhead"><strong>ಪ್ರತಿಕ್ರಿಯಿಸಲ್ಲ:</strong> ‘ನಮ್ಮ ಹರಿಹರ ಪೀಠದ ಬಗ್ಗೆ ಏನಾದರೂ ಕೇಳಿ ನಾನು ಉತ್ತರಿಸುವೆ. ಆದರೆ ಬೇರೆ ಸಂಗತಿಗಳ ಬಗ್ಗೆ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ‘ಜಮಖಂಡಿಯಲ್ಲಿ ನಡೆದ ಸಭೆಯ ಹಿಂದೆ ಯಾರಿದ್ದಾರೆ ಎಂಬುದು ಸಮಾಜದ ಎಲ್ಲರಿಗೂ ಗೊತ್ತಿದೆ. ಶೀಘ್ರ ಅದು ಬಹಿರಂಗವಾಗಲಿದೆ. ಮೂರನೇ ಪೀಠದ ನಿರ್ಧಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳೊಲ್ಲ. ಆ ಬಗ್ಗೆ ಏನೂ ಮಾತಾಡೊಲ್ಲ’ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.</p>.<p class="Subhead">‘2ಎ ಮೀಸಲಾತಿ ಚಳವಳಿ ಹತ್ತಿಕ್ಕಲು ಬೇರೆ ಬೇರೆ ಬೆಳವಣಿಗೆ ನಡೆಯುತ್ತಿವೆ. ಇದು ಕೂಡ ಅದರ ಭಾಗ. ಸಮಾಜದ ಏಳಿಗೆಗೆ ನಾನು ದುಡಿಯುವುದು ಸಹಿಸಲು ಆಗದೇ ಹೊಟ್ಟೆಕಿಚ್ಚಿನಿಂದ ಹೀಗೆ ಮಾಡಲಾಗುತ್ತಿದೆ’ ಎಂದರು.</p>.<p class="Subhead"><strong>ಪ್ರತಿಕ್ರಿಯಿಸಲ್ಲ:</strong> ‘ನಮ್ಮ ಹರಿಹರ ಪೀಠದ ಬಗ್ಗೆ ಏನಾದರೂ ಕೇಳಿ ನಾನು ಉತ್ತರಿಸುವೆ. ಆದರೆ ಬೇರೆ ಸಂಗತಿಗಳ ಬಗ್ಗೆ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>