ಬಾಗಲಕೋಟೆ: ‘ರಾಜಕಾರಣಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಯಾರಿಗೆ ಶಿಕ್ಷೆ ಆಗಿದೆ? ಬಿಜೆಪಿ, ಕಾಂಗ್ರೆಸ್ ನಾಯಕರ ಬೆಂಬಲವಿರುವಾಗ ತನಿಖೆಯಿಂದ ಸತ್ಯಾಂಶ ಹೊರಬರುವುದೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಮಂಗಳವಾರ ಬಾದಾಮಿ ತಾಲ್ಲೂಕಿನ ಆಡಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಾದ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ಲಾಲೂ ಪ್ರಸಾದ ಯಾದವ್ ಬಿಟ್ಟರೆ ಯಾರಿಗೂ ಶಿಕ್ಷೆಯಾಗಿಲ್ಲ’ ಎಂದರು.
‘ಪಿಎಸ್ಐ ಹಗರಣದಲ್ಲಿ ಬಂಧಿತ ವ್ಯಕ್ತಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸ್ವಾಗತದ ಫ್ಲೆಕ್ಸ್ ಹಾಕುತ್ತಾನೆ. ಕಾಂಗ್ರೆಸ್ ಮುಖಂಡರದ್ದೂ ಇದೆ. ಅವರ ರಕ್ಷಣೆ ಇರುವಾಗ ತನಿಖೆಯಿಂದ ಯಾವ ಫಲಿತಾಂಶವೂ ಬರುವುದಿಲ್ಲ’ ಎಂದರು.