ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಂಘಟನೆಯಿಂದ ಮೂಲಕ ಬಂದವಳು. ಸಚಿವ ಸ್ಥಾನ ತ್ಯಾಗದ ವಿಚಾರವಾಗಿ ನನಗೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಂದ ಯಾವುದೇ ಸೂಚನೆಗಳೂ ಬಂದಿಲ್ಲ. ಆದರೂ ತ್ಯಾಗದ ವಿಚಾರದಲ್ಲಿ ನನ್ನ ಹೆಸರು ಮಾಧ್ಯಮಗಳಲ್ಲಿ ಕೇಳಿ ಬರುತ್ತದೆ. ಮಾಧ್ಯಮಗಳಲ್ಲಿ ಈ ಹಿಂದೆ ಎರಡು ಬಾರಿ ನನ್ನ ಹೆಸರು ಬಂದಾಗಲೂ ಈ ಸುದ್ದಿ ಸುಳ್ಳಾಗಿತ್ತು. ಮೂರನೇ ಬಾರಿಯೂ ಸುಳ್ಳಾಗಲಿದೆ. ಏಕೆ ಮಹಿಳೆಯರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.