<p><strong>ಬೆಂಗಳೂರು:</strong> ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ, ಅವುಗಳ ಮಾಲೀಕರಿಗೆ ನೀಡುತ್ತಿರುವ ಪರಿಹಾರಧನವನ್ನು ₹ 10 ಸಾವಿರದಿಂದ ಗರಿಷ್ಠ ₹ 75 ಸಾವಿರಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.</p>.<p>ಕುರಿ, ಮೇಕೆ ಅಥವಾ ಆಡು ಮೃತಪಟ್ಟರೆ ಪಾವತಿಸುವ ಪರಿಹಾರ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ತಕ್ಷಣವೇ ಪೂರ್ಣ ಮೊತ್ತ ಪಾವತಿಸಬಹುದು.</p>.<p>ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟ ತಕ್ಷಣ ಅವುಗಳ ಮಾಲೀಕರಿಗೆ ₹ 20 ಸಾವಿರ ಪರಿಹಾರ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಉಳಿದ ಮೊತ್ತವನ್ನು (ಗರಿಷ್ಠ ₹ 75 ಸಾವಿರ) ಪಶುಸಂಗೋಪನೆ ಇಲಾಖೆಯ ತಾಲ್ಲೂಕು ಅಧಿಕಾರಿಗಳ ಶಿಫಾರಸಿಗೆ ಅನುಗುಣವಾಗಿ ಪಾವತಿಸಬಹುದು.</p>.<p>2014 ಆಗಸ್ಟ್ 8ರಂದು ಪರಿಷ್ಕೃತ ಆದೇಶದಲ್ಲಿ ಮಾನವ–ವನ್ಯಜೀವಿ ಸಂಘರ್ಷದಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ₹ 10 ಸಾವಿರ, ಮೇಕೆ, ಕುರಿ ಮೃತಪಟ್ಟರೆ ₹ 5 ಸಾವಿರ ಪರಿಹಾರಧನ ನಿಗದಿ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ, ಅವುಗಳ ಮಾಲೀಕರಿಗೆ ನೀಡುತ್ತಿರುವ ಪರಿಹಾರಧನವನ್ನು ₹ 10 ಸಾವಿರದಿಂದ ಗರಿಷ್ಠ ₹ 75 ಸಾವಿರಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.</p>.<p>ಕುರಿ, ಮೇಕೆ ಅಥವಾ ಆಡು ಮೃತಪಟ್ಟರೆ ಪಾವತಿಸುವ ಪರಿಹಾರ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ತಕ್ಷಣವೇ ಪೂರ್ಣ ಮೊತ್ತ ಪಾವತಿಸಬಹುದು.</p>.<p>ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟ ತಕ್ಷಣ ಅವುಗಳ ಮಾಲೀಕರಿಗೆ ₹ 20 ಸಾವಿರ ಪರಿಹಾರ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಉಳಿದ ಮೊತ್ತವನ್ನು (ಗರಿಷ್ಠ ₹ 75 ಸಾವಿರ) ಪಶುಸಂಗೋಪನೆ ಇಲಾಖೆಯ ತಾಲ್ಲೂಕು ಅಧಿಕಾರಿಗಳ ಶಿಫಾರಸಿಗೆ ಅನುಗುಣವಾಗಿ ಪಾವತಿಸಬಹುದು.</p>.<p>2014 ಆಗಸ್ಟ್ 8ರಂದು ಪರಿಷ್ಕೃತ ಆದೇಶದಲ್ಲಿ ಮಾನವ–ವನ್ಯಜೀವಿ ಸಂಘರ್ಷದಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ₹ 10 ಸಾವಿರ, ಮೇಕೆ, ಕುರಿ ಮೃತಪಟ್ಟರೆ ₹ 5 ಸಾವಿರ ಪರಿಹಾರಧನ ನಿಗದಿ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>