ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಪ್ರಾಣಿ ದಾಳಿ: ಜಾನುವಾರುಗಳ ಮಾಲೀಕರಿಗೆ ಭರ್ಜರಿ ಪರಿಹಾರ

Last Updated 21 ಏಪ್ರಿಲ್ 2021, 19:04 IST
ಅಕ್ಷರ ಗಾತ್ರ

ಬೆಂಗಳೂರು: ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ, ಅವುಗಳ ಮಾಲೀಕರಿಗೆ ನೀಡುತ್ತಿರುವ ಪರಿಹಾರಧನವನ್ನು ₹ 10 ಸಾವಿರದಿಂದ ಗರಿಷ್ಠ ₹ 75 ಸಾವಿರಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕುರಿ, ಮೇಕೆ ಅಥವಾ ಆಡು ಮೃತಪಟ್ಟರೆ ಪಾವತಿಸುವ ಪರಿಹಾರ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ತಕ್ಷಣವೇ ಪೂರ್ಣ ಮೊತ್ತ ಪಾವತಿಸಬಹುದು.

ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟ ತಕ್ಷಣ ಅವುಗಳ ಮಾಲೀಕರಿಗೆ ₹ 20 ಸಾವಿರ ಪರಿಹಾರ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಉಳಿದ ಮೊತ್ತವನ್ನು (ಗರಿಷ್ಠ ₹ 75 ಸಾವಿರ) ಪಶುಸಂಗೋಪನೆ ಇಲಾಖೆಯ ತಾಲ್ಲೂಕು ಅಧಿಕಾರಿಗಳ ಶಿಫಾರಸಿಗೆ ಅನುಗುಣವಾಗಿ ಪಾವತಿಸಬಹುದು.

2014 ಆಗಸ್ಟ್ 8ರಂದು ಪರಿಷ್ಕೃತ ಆದೇಶದಲ್ಲಿ ಮಾನವ–ವನ್ಯಜೀವಿ ಸಂಘರ್ಷದಿಂದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ ಅವುಗಳ ಮಾಲೀಕರಿಗೆ ₹ 10 ಸಾವಿರ, ಮೇಕೆ, ಕುರಿ ಮೃತಪಟ್ಟರೆ ₹ 5 ಸಾವಿರ ಪರಿಹಾರಧನ ನಿಗದಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT