ಉತ್ತರ ನೀಡಿದ ಸಚಿವರು, ‘ನಾನು ಬಂದರೆ ಹುಲಿ ಸಿಗುವುದಾದರೆ ಬರಲು ಸಿದ್ಧ. ಆದರೆ, ನರಭಕ್ಷಕ ಹುಲಿ ಸೆರೆಗೆ ಈಗಾಗಲೇ ಕಾರ್ಯಾಚರಣೆ ಆರಂಭವಾಗಿದೆ. ಅನಿವಾರ್ಯ ಆದಲ್ಲಿ ಗುಂಡಿಕ್ಕುವುದಕ್ಕೂ ಆದೇಶ ನೀಡಿದ್ದೇನೆ. ನಾನು ಈಗ ಅಲ್ಲಿಗೆ ಭೇಟಿನೀಡುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಕಾರ್ಯಾಚರಣೆ ಮುಗಿದ ಬಳಿಕವೇ ಕೊಡಗು ಜಿಲ್ಲೆಗೆ ಬರುತ್ತೇನೆ’ ಎಂದರು.