ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ನರೇಗಾಕ್ಕೆ ನಾರಿಶಕ್ತಿ ಬಲ

Last Updated 25 ಜೂನ್ 2022, 20:36 IST
ಅಕ್ಷರ ಗಾತ್ರ

ಮಂಗಳೂರು: ದುರಿತ ಕಾಲದಲ್ಲಿ ದುಡಿಮೆಗೆ ಆಧಾರವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಪಡೆದಿದ್ದವೃತ್ತಿಪರ ಉದ್ಯೋಗಿಗಳು ಕೋವಿಡೋತ್ತರ ಕಾಲದಲ್ಲಿ ಮತ್ತೆ ಹಳೆಯ ಉದ್ಯೋಗಕ್ಕೆ ಮರಳಿದ್ದಾರೆ. ಆದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಕಾರ್ಡ್‌ಗಳ ಬೇಡಿಕೆ ತಗ್ಗಿಲ್ಲ.

ನರೇಗಾ ಯೋಜನೆಗೆ ನಾರಿಶಕ್ತಿಯ ಬಲ ಸೇರಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಾರ್ಡ್ ಪಡೆಯುತ್ತಿದ್ದು, 10,419 ಹೊಸ ಕಾರ್ಡ್‌ಗಳು ವಿತರಣೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು 1.51 ಲಕ್ಷ ಉದ್ಯೋಗ ಕಾರ್ಡ್‌ಗಳು ವಿತರಣೆಯಾಗಿವೆ.

ಕಾಮಗಾರಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ 42ರಷ್ಟು ಇತ್ತು. ಈಗ ಈ ಪ್ರಮಾಣ ಶೇ 50ರ ಸನಿಹದಲ್ಲಿದೆ. ಪರಿಣಾಮವಾಗಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 16 ಲಕ್ಷ ಮಾನವ ದಿನಗಳ ಗುರಿ ಮೀರಿ, 17.15 ಲಕ್ಷ ಮಾನವ ದಿನಗಳು ಸೃಜನೆಯಾಗಿವೆ. ಈ ವರ್ಷ ಜಿಲ್ಲಾ ಪಂಚಾಯಿತಿ 18 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದೆ.

‘ನಾವು ಮಹಿಳೆಯರು ಒಟ್ಟಾಗಿ ಕೆಲಸ ಮಾಡುವುದರಿಂದ ಶ್ರಮದ ದುಡಿಮೆಯಾದರೂ ದಣಿವು ಮರೆಸುತ್ತದೆ. ಕೂಲಿಯ ಮೊತ್ತ ಹೆಚ್ಚಿದ್ದು ಅನುಕೂಲವಾಗಿದೆ. ಜಾಬ್‌ ಕಾರ್ಡ್‌ ಸಿಗಲು ಸಹ ಸಮಸ್ಯೆ ಆಗಲಿಲ್ಲ’ ಎನ್ನುತ್ತಾರೆ ಸುಳ್ಯದ ಕಮಲಾ ಬಾಳಿಗ.

‘ಕುಟುಂಬದಲ್ಲಿ ಎಲ್ಲ ಸದಸ್ಯರಿಗೆ ಜಾಬ್ ಕಾರ್ಡ್‌ಗಳು ಸಿಗುತ್ತವೆ. ಆದರೆ, ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗದ ಮಿತಿ ಇರುವುದರಿಂದ ಎಲ್ಲ ಸದಸ್ಯರು ಕಾರ್ಡ್‌ ಪಡೆದರೂ, ದಿನಗಳು ಹಂಚಿಕೆ ಆಗಿದ್ದರಿಂದ ಹೆಚ್ಚು ಪ್ರಯೋಜನ ಆಗಲಿಲ್ಲ’ ಎಂದು ಮಂಗಳೂರು ಸಮೀಪದ ಮೂಲ್ಕಿಯ ಮಹಿಳೆಯೊಬ್ಬರು ಬೇಸರಿಸಿಕೊಂಡರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷ 4,132 ಹೊಸ ಜಾಬ್ ಕಾರ್ಡ್ ವಿತರಣೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಾಕ್‌ಡೌನ್‌ ವೇಳೆ ಮಹಾನಗರ, ಹೊರರಾಜ್ಯಗಳಿಂದ ತವರಿಗೆ ಮರಳಿ ನರೇಗಾ ನೆಚ್ಚಿಕೊಂಡಿದ್ದವರು, ಕೆಲವು ಅತಿಥಿ ಶಿಕ್ಷಕರು, ಸಣ್ಣ ಕಂಪನಿಗಳ ಉದ್ಯೋಗಿಗಳು ಪುನಃ ಮೂಲ ಕೆಲಸಕ್ಕೆ ಮರಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT