<p>ಅಣ್ಣಮ್ಮ ಬೆಂಗಳೂರು ನಗರ ದೇವತೆ. ನಗರದ ಹೃದಯ ಭಾಗ ಎಂದೇ ಪರಿಗಣಿಸಿರುವ ಗಾಂಧಿ ನಗರದಲ್ಲಿರುವ ಅಣ್ಣಮ್ಮ ದೇವಸ್ಥಾನ ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಒಂದು.<br /> <br /> ಕೆಂಪೇಗೌಡ ವೃತ್ತದಿಂದ ಕೂಗಳತೆ ದೂರದಲ್ಲಿರುವ ಅಣ್ಣಮ್ಮದೇವಿ ದೇವಾಲಯ 10ನೇ ಶತಮಾನದಲ್ಲಿ ನಿರ್ಮಾಣವಾಯಿತು ಎಂಬ ಮಾಹಿತಿ ಇತಿಹಾಸದಲ್ಲಿ ಉಲ್ಲೇಖವಾಗಿದೆ. <br /> <br /> ದೇವಸ್ಥಾನದ ಹೊರಗೋಡೆಯ ಮೇಲೆ ಅಣ್ಣಮ್ಮ ದೇವಿಯ ಸಪ್ತ ಅವತಾರಗಳ ಉಬ್ಬುಶಿಲ್ಪಗಳಿವೆ. ಈ ಶಿಲ್ಪಗಳು ಆಕರ್ಷಕವಾಗಿವೆ. ನಗರದ ಅತ್ಯಂತ ಜನದಟ್ಟಣೆಯ ಪ್ರದೇಶದಲ್ಲಿ ದೇವಸ್ಥಾನ ಇರುವುದು ಹೊಸಬರಿಗೆ ಗೊತ್ತೇ ಆಗುವುದಿಲ್ಲ.<br /> <br /> <strong> ಇತಿಹಾಸ:</strong> ಕೆಲವು ಶತಮಾನಗಳ ಹಿಂದೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಎಂಬ ಸೋದರರ ಕನಸಿನಲ್ಲಿ ಅಣ್ಣಮ್ಮ ದೇವಿ ಕಾಣಿಸಿಕೊಂಡು ನಾವು ಏಳು ಮಂದಿ ಅಕ್ಕತಂಗಿಯರಿದ್ದೇವೆ. ನಾನು ನಿಮ್ಮ ಜಮೀನಿನಲ್ಲಿ ಒಡಮೂಡುತ್ತೇನೆ. ನನ್ನನ್ನು ಆರಾಧಿಸಿದರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದಳಂತೆ. <br /> <br /> ಅದರಂತೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಅವರ ಜಮೀನಿನಲ್ಲಿ ಅಣ್ಣಮ್ಮ ದೇವಿ ಮೂರ್ತಿ ಉದ್ಭವವಾದಳು. ಅಂದಿನಿಂದ ಅಣ್ಣಮ್ಮನನ್ನು ನಮ್ಮ ಕುಟುಂಬದವರುಪೂಜಿಸಿಕೊಂಡು ಬರುತ್ತಿದ್ದಾರೆ ಎನ್ನುತ್ತಾರೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಕುಟುಂಬದ ವಾರಸುದಾರರಾದ ಮೋಹನ್.<br /> <br /> ಚೈತ್ರ, ವೈಶಾಖ ಮಾಸಗಳಲ್ಲಿ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಅವರು ತಮ್ಮ ಇಷ್ಟಾರ್ಥಗಳಿಗಾಗಿ ಹರಕೆ ಮಾಡಿಕೊಳ್ಳುವ ಸಂಪ್ರದಾಯ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ.<br /> <br /> ಬೆಂಗಳೂರು ಸಣ್ಣ ಗ್ರಾಮವಾಗಿದ್ದಾಗ ಗ್ರಾಮ ದೇವತೆ ಎಂದೇ ಕರೆಸಿಕೊಳ್ಳುತ್ತಿದ್ದ ಅಣ್ಣಮ್ಮ ದೇವಿ ನಗರ ಬೆಳೆದಂತೆ ಈಗ ನಗರ ದೇವತೆಯಾಗಿದ್ದಾಳೆ. ಅಣ್ಣಮ್ಮ ದೇವಿಗೆ ಮಂಗಳವಾರ, ಶುಕ್ರವಾರದಂದು ವಿಶೇಷ ಪೂಜೆ ನಡೆಯುತ್ತದೆ. <br /> <br /> ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಜೊತೆಗೆ ರಾಜರಾಜೇಶ್ವರಿ, ಶೃಂಗೇರಿ ಶಾರದೆ ಹೀಗೆ ವಿವಿಧ ರೂಪಗಳಲ್ಲಿ ಅಲಂಕಾರ ಮಾಡಲಾಗುತ್ತದೆ. ಮಕ್ಕಳಿಗೆ `ಅಮ್ಮ~ ಬಂದರೆ ವಾಸಿಯಾಗಲೆಂದು ಮತ್ತು ಸಂತಾನಕ್ಕಾಗಿ ಹರಕೆ ಮಾಡಿಕೊಳ್ಳುತ್ತಾರೆ. <br /> <br /> ತಮ್ಮ ಕಷ್ಟ ಪರಿಹಾರವಾದರೆ ದೇವಿಗೆ ಕೋಳಿ, ಕುರಿ ಹಾಗೂ ಮೇಕೆಯನ್ನು ಬಿಡುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಕಷ್ಟ ಪರಿಹಾರವಾದರೆ ಅವನ್ನು ಜೀವಂತವಾಗಿ ದೇವಾಲಯಕ್ಕೆ ತಂದು ಬಿಡುವ ಸಂಪ್ರದಾಯವೂ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.<br /> <br /> ಅಣ್ಣಮ್ಮ ದೇವತೆಯ ಉತ್ಸವ ಮೂರ್ತಿಯನ್ನು ನಗರದ ವಿವಿಧ ಭಾಗಗಳಿಗೆ ಕರೆದುಕೊಂಡು ಪೂಜಿಸಿ ಮೆರವಣಿಗೆ ಮಾಡುವ ಪರಿಪಾಠವಿದೆ. ಭಕ್ತರು ದೇವಿಗೆ ನಿಂಬೆಹಣ್ಣಿನ ಹಾರ, ಸೀರೆ ಇತ್ಯಾದಿಗಳನ್ನು ಅರ್ಪಿಸುತ್ತಾರೆ. <br /> <br /> ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳು ವಿಶೇಷ ಪೂಜೆ ನಡೆಯುತ್ತದೆ. ಕರಗ ಸಂದರ್ಭದಲ್ಲಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ.<br /> <br /> ಹೋಳಿ ಹಬ್ಬದ ಏಳನೇ ದಿನದಂದು ಮಾರ್ವಾಡಿ ಸಮುದಾಯದವರು ದೇವಿಗೆ ತಂಡಾಪೂಜೆ ಸಲ್ಲಿಸುತ್ತಾರೆ. ದೇವಾಲಯದಲ್ಲಿ ಭಕ್ತರಿಗೆ ನಿಂಬೆಹಣ್ಣು, ತಾಯತ ಕೊಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.<br /> <br /> <strong>ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್</strong> 98800 02221<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಣ್ಣಮ್ಮ ಬೆಂಗಳೂರು ನಗರ ದೇವತೆ. ನಗರದ ಹೃದಯ ಭಾಗ ಎಂದೇ ಪರಿಗಣಿಸಿರುವ ಗಾಂಧಿ ನಗರದಲ್ಲಿರುವ ಅಣ್ಣಮ್ಮ ದೇವಸ್ಥಾನ ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಒಂದು.<br /> <br /> ಕೆಂಪೇಗೌಡ ವೃತ್ತದಿಂದ ಕೂಗಳತೆ ದೂರದಲ್ಲಿರುವ ಅಣ್ಣಮ್ಮದೇವಿ ದೇವಾಲಯ 10ನೇ ಶತಮಾನದಲ್ಲಿ ನಿರ್ಮಾಣವಾಯಿತು ಎಂಬ ಮಾಹಿತಿ ಇತಿಹಾಸದಲ್ಲಿ ಉಲ್ಲೇಖವಾಗಿದೆ. <br /> <br /> ದೇವಸ್ಥಾನದ ಹೊರಗೋಡೆಯ ಮೇಲೆ ಅಣ್ಣಮ್ಮ ದೇವಿಯ ಸಪ್ತ ಅವತಾರಗಳ ಉಬ್ಬುಶಿಲ್ಪಗಳಿವೆ. ಈ ಶಿಲ್ಪಗಳು ಆಕರ್ಷಕವಾಗಿವೆ. ನಗರದ ಅತ್ಯಂತ ಜನದಟ್ಟಣೆಯ ಪ್ರದೇಶದಲ್ಲಿ ದೇವಸ್ಥಾನ ಇರುವುದು ಹೊಸಬರಿಗೆ ಗೊತ್ತೇ ಆಗುವುದಿಲ್ಲ.<br /> <br /> <strong> ಇತಿಹಾಸ:</strong> ಕೆಲವು ಶತಮಾನಗಳ ಹಿಂದೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಎಂಬ ಸೋದರರ ಕನಸಿನಲ್ಲಿ ಅಣ್ಣಮ್ಮ ದೇವಿ ಕಾಣಿಸಿಕೊಂಡು ನಾವು ಏಳು ಮಂದಿ ಅಕ್ಕತಂಗಿಯರಿದ್ದೇವೆ. ನಾನು ನಿಮ್ಮ ಜಮೀನಿನಲ್ಲಿ ಒಡಮೂಡುತ್ತೇನೆ. ನನ್ನನ್ನು ಆರಾಧಿಸಿದರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದಳಂತೆ. <br /> <br /> ಅದರಂತೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಅವರ ಜಮೀನಿನಲ್ಲಿ ಅಣ್ಣಮ್ಮ ದೇವಿ ಮೂರ್ತಿ ಉದ್ಭವವಾದಳು. ಅಂದಿನಿಂದ ಅಣ್ಣಮ್ಮನನ್ನು ನಮ್ಮ ಕುಟುಂಬದವರುಪೂಜಿಸಿಕೊಂಡು ಬರುತ್ತಿದ್ದಾರೆ ಎನ್ನುತ್ತಾರೆ ಮುನಿಸ್ವಾಮಣ್ಣ ಮತ್ತು ಅಣ್ಣೆಪ್ಪ ಕುಟುಂಬದ ವಾರಸುದಾರರಾದ ಮೋಹನ್.<br /> <br /> ಚೈತ್ರ, ವೈಶಾಖ ಮಾಸಗಳಲ್ಲಿ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಅವರು ತಮ್ಮ ಇಷ್ಟಾರ್ಥಗಳಿಗಾಗಿ ಹರಕೆ ಮಾಡಿಕೊಳ್ಳುವ ಸಂಪ್ರದಾಯ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ.<br /> <br /> ಬೆಂಗಳೂರು ಸಣ್ಣ ಗ್ರಾಮವಾಗಿದ್ದಾಗ ಗ್ರಾಮ ದೇವತೆ ಎಂದೇ ಕರೆಸಿಕೊಳ್ಳುತ್ತಿದ್ದ ಅಣ್ಣಮ್ಮ ದೇವಿ ನಗರ ಬೆಳೆದಂತೆ ಈಗ ನಗರ ದೇವತೆಯಾಗಿದ್ದಾಳೆ. ಅಣ್ಣಮ್ಮ ದೇವಿಗೆ ಮಂಗಳವಾರ, ಶುಕ್ರವಾರದಂದು ವಿಶೇಷ ಪೂಜೆ ನಡೆಯುತ್ತದೆ. <br /> <br /> ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಜೊತೆಗೆ ರಾಜರಾಜೇಶ್ವರಿ, ಶೃಂಗೇರಿ ಶಾರದೆ ಹೀಗೆ ವಿವಿಧ ರೂಪಗಳಲ್ಲಿ ಅಲಂಕಾರ ಮಾಡಲಾಗುತ್ತದೆ. ಮಕ್ಕಳಿಗೆ `ಅಮ್ಮ~ ಬಂದರೆ ವಾಸಿಯಾಗಲೆಂದು ಮತ್ತು ಸಂತಾನಕ್ಕಾಗಿ ಹರಕೆ ಮಾಡಿಕೊಳ್ಳುತ್ತಾರೆ. <br /> <br /> ತಮ್ಮ ಕಷ್ಟ ಪರಿಹಾರವಾದರೆ ದೇವಿಗೆ ಕೋಳಿ, ಕುರಿ ಹಾಗೂ ಮೇಕೆಯನ್ನು ಬಿಡುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಕಷ್ಟ ಪರಿಹಾರವಾದರೆ ಅವನ್ನು ಜೀವಂತವಾಗಿ ದೇವಾಲಯಕ್ಕೆ ತಂದು ಬಿಡುವ ಸಂಪ್ರದಾಯವೂ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.<br /> <br /> ಅಣ್ಣಮ್ಮ ದೇವತೆಯ ಉತ್ಸವ ಮೂರ್ತಿಯನ್ನು ನಗರದ ವಿವಿಧ ಭಾಗಗಳಿಗೆ ಕರೆದುಕೊಂಡು ಪೂಜಿಸಿ ಮೆರವಣಿಗೆ ಮಾಡುವ ಪರಿಪಾಠವಿದೆ. ಭಕ್ತರು ದೇವಿಗೆ ನಿಂಬೆಹಣ್ಣಿನ ಹಾರ, ಸೀರೆ ಇತ್ಯಾದಿಗಳನ್ನು ಅರ್ಪಿಸುತ್ತಾರೆ. <br /> <br /> ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳು ವಿಶೇಷ ಪೂಜೆ ನಡೆಯುತ್ತದೆ. ಕರಗ ಸಂದರ್ಭದಲ್ಲಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ.<br /> <br /> ಹೋಳಿ ಹಬ್ಬದ ಏಳನೇ ದಿನದಂದು ಮಾರ್ವಾಡಿ ಸಮುದಾಯದವರು ದೇವಿಗೆ ತಂಡಾಪೂಜೆ ಸಲ್ಲಿಸುತ್ತಾರೆ. ದೇವಾಲಯದಲ್ಲಿ ಭಕ್ತರಿಗೆ ನಿಂಬೆಹಣ್ಣು, ತಾಯತ ಕೊಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.<br /> <br /> <strong>ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್</strong> 98800 02221<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>