<p>ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಘಾಟ್ ದಾಟಿ ಸಕಲೇಶಪುರಕ್ಕೆ ಒಂದೆರಡು ಕಿಲೋ ಮೀಟರುಗಳಿರುವಾಗ ಆನೇ ಮಹಲ್ ಎಂಬ ಊರು ಸಿಗುತ್ತದೆ. ಊರಿನ ಎರಡೂ ಮಗ್ಗುಲಿನ ರಸ್ತೆ ಬದಿಯಲ್ಲಿ ವಿವಿಧ ಆಕೃತಿಯ ಕಾಷ್ಠ ಕಲಾಕೃತಿಗಳು ಈ ರಸ್ತೆಯಲ್ಲಿ ಪ್ರಯಾಣ ಮಾಡುವವರ ಗಮನ ಸೆಳೆಯುತ್ತವೆ.<br /> <br /> ಇವು ಕಾಫಿಗಿಡದ ಬೇರು, ರೆಂಬೆ ಕೊಂಬೆಗಳಿಂದ ಮಾಡಿದ ವಿಶಿಷ್ಟ ಕಲಾಕೃತಿಗಳು ಹಾಗೂ ಪೀಠೋಪಕರಣಗಳು. ಉರುವಲಾಗಿ ಒಲೆಗೆ ಸೇರುತ್ತಿದ್ದ ಒಣ ಕಾಫಿಗಿಡಗಳು ಕಲಾವಿದನ ಕಣ್ಣಿಗೆ ಬಿದ್ದು ಸುಂದರ ಕಲಾಕೃತಿಗಳಾಗಿ ರೂಪುಗೊಂಡಿವೆ. <br /> <br /> ಕಾಫಿ ಗಿಡಗಳ ಆಯುಷ್ಯ ಕೆಲ ವರ್ಷಗಳು. ನಂತರ ಆ ಗಿಡಗಳಲ್ಲಿ ಇಳುವರಿ ನಿರೀಕ್ಷಿಸುವುದು ಕಷ್ಟ. ಹಳೆಯ ಗಿಡಗಳನ್ನು ಕಿತ್ತು ಹೊಸ ಸಸಿಗಳನ್ನು ನೆಡುತ್ತಾರೆ. ಹಳೆಯ ಗಿಡಗಳನ್ನು ಕರಕುಶಲ ವಸ್ತುಗಳನ್ನು ತಯಾರಿಸುವವರು ಖರೀದಿಸುತ್ತಾರೆ. <br /> <br /> ರೋಬಸ್ಟಾ ಕಾಫಿ ಗಿಡಗಳು ಕಲಾಕೃತಿಗಳನ್ನು ತಯಾರಿಸಲು ಹೆಚ್ಚು ಸೂಕ್ತ. ಕಾಫಿ ಎಸ್ಟೇಟ್ನಿಂದ ಕಿತ್ತು ತಂದ ಗಿಡಗಳನ್ನು ರಾಶಿ ಹಾಕುತ್ತಾರೆ. ಈ ಗಿಡಗಳ ಬೇರು, ಕಾಂಡಗಳನ್ನು ಪರಿಶೀಲಿಸಿ ಅವುಗಳಲ್ಲಿ ನಾನಾ ನಮೂನೆಯ ಕಲಾಕೃತಿಗಳನ್ನು ರೂಪಿಸುತ್ತಾರೆ. ನೂರು ರೂಗಳಿಂದ ಹಿಡಿದು ಸಾವಿರಾರು ರೂ.ವರೆಗೆ ಇವುಗಳನ್ನು ಮಾರಾಟ ಮಾಡುತ್ತಾರೆ.<br /> <br /> `ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಸಕಲೇಶಪುರ ಸುತ್ತಮುತ್ತಲಿನ ಕಾಫಿ ಎಸ್ಟೇಟ್ಗಳಿಂದ ಒಣಗಿದ ಕಾಫಿ ಗಿಡಗಳನ್ನು ತರುತ್ತೇವೆ. ನಂತರ ಅವನ್ನು ಕತ್ತರಿಸಿ ಕಲಾಕೃತಿಗಳನ್ನಾಗಿಸುತ್ತೇವೆ. ಅವಕ್ಕೆ ವಾರ್ನಿಶ್ ಹಚ್ಚಿ ಆಕರ್ಷಕವಾಗಿ ಜೋಡಿಸುತ್ತೇವೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವವರು ಅವನ್ನು ಖರೀದಿಸುತ್ತಾರೆ ಎನ್ನುತ್ತಾರೆ ಕರಕುಶಲ ವ್ಯಾಪಾರಿ ರಿಯಾಝ್.<br /> <br /> ಕಾಫಿ ಗಿಡದ ಕಾಂಡ, ಬೇರುಗಳನ್ನು ನೋಡಿದಾಗ ಅದರಿಂದ ಏನು ಮಾಡಬಹುದು ಎಂದು ನಮಗೆ ಹೊಳೆಯುತ್ತದೆ. ಅವುಗಳನ್ನು ಕತ್ತರಿಸಿ ಜೋಡಿಸುವುದೇ ಕಲಾವಿದನ ಕೆಲಸ ಎನ್ನುತ್ತಾರೆ ಕರಕುಶಲ ಕಲೆಯಲ್ಲಿ ಪಳಗಿದ ವಿನ್ಯಾಸಗಾರ ಆರಿಫ್. <br /> <br /> ಕಾಫಿ ಕಾಷ್ಠದಲ್ಲಿ ತಯಾರಿಸಿದ ಕಲಾಕೃತಿಗಳು ಬಹಳ ವಿಶಿಷ್ಟವಾದುದು. ಕೆಲವು ಬೇರುಗಳು ಅನೇಕ ಪ್ರಾಣಿಗಳನ್ನು ಹೋಲುತ್ತವೆ. ಅನೇಕ ಕಲಾಕೃತಿಗಳು ಮೊದಲ ನೋಟಕ್ಕೆ ಸೆಳೆಯುತ್ತವೆ ಎನ್ನುತ್ತಾರೆ ಬೆಂಗಳೂರಿನ ಗೃಹಿಣಿ ಸುಷ್ಮಾ. <br /> <br /> ಕಾಫಿ ಗಿಡಗಳ ಬೇರು, ಕಾಂಡ ಬಳಸಿ ಟೀಪಾಯ್ ಮಾಡಬಹುದು. ಬಲಿತ ಕಾಂಡಗಳಿಂದ ಆನೆ, ಮೀನು, ಮನುಷ್ಯನ ಆ ಅಕೃತಿಗಳನ್ನೂ ಮಾಡಬಹುದು. ಒಟ್ಟಿನಲ್ಲಿ ಇವು ಜನರಿಗೆ ಇಷ್ಟವಾಗುತ್ತವೆ. ಚೌಕಾಶಿ ಮಾಡಿದರೆ ಕಡಿಮೆ ಬೆಲೆಗೂ ಸಿಗುತ್ತವೆ ಎನ್ನುವುದು ಅನೇಕರ ಅನುಭವ.<br /> <br /> ಹೆದ್ದಾರಿ ಪ್ರವಾಸಿಗರೇ ಈ ಕಲಾಕೃತಿಗಳ ಗಿರಾಕಿಗಳು. ಕೆಲವರಿಗೆ ಟೀಪಾಯ್ ಇಷ್ಟವಾಗದರೆ ಇನ್ನು ಕೆಲವರಿಗೆ ಟಿ.ವಿ. ಶೋಕೇಸ್ ಇಷ್ಟವಾಗುತ್ತದೆ. ಆನೇಮಹಲ್ ಗ್ರಾಮದ ಉದ್ದಕ್ಕೂ ಇಂತಹ ಹಲವು ಕರ ಕುಶಲ ವಸ್ತುಗಳ ಮಳಿಗೆಗಳಿವೆ.<br /> <br /> ಈ ಗ್ರಾಮದ ಹಲವು ಕುಟುಂಬಗಳ ಕಸುಬು ಇದೇ ಆಗಿದೆ. ಬೆಳಿಗ್ಗೆ ಎದ್ದು ಮಳಿಗೆ ತೆರೆದು ಕಲಾಕೃತಿಗಳನ್ನು ಆಕರ್ಷಕವಾಗಿ ಜೋಡಿಸಿ ರಾತ್ರಿ ವರೆಗೆ ವ್ಯಾಪಾರ ಮಾಡುತ್ತಾರೆ. 365 ದಿನಗಳೂ ವ್ಯಾಪಾರ ನಡೆಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಘಾಟ್ ದಾಟಿ ಸಕಲೇಶಪುರಕ್ಕೆ ಒಂದೆರಡು ಕಿಲೋ ಮೀಟರುಗಳಿರುವಾಗ ಆನೇ ಮಹಲ್ ಎಂಬ ಊರು ಸಿಗುತ್ತದೆ. ಊರಿನ ಎರಡೂ ಮಗ್ಗುಲಿನ ರಸ್ತೆ ಬದಿಯಲ್ಲಿ ವಿವಿಧ ಆಕೃತಿಯ ಕಾಷ್ಠ ಕಲಾಕೃತಿಗಳು ಈ ರಸ್ತೆಯಲ್ಲಿ ಪ್ರಯಾಣ ಮಾಡುವವರ ಗಮನ ಸೆಳೆಯುತ್ತವೆ.<br /> <br /> ಇವು ಕಾಫಿಗಿಡದ ಬೇರು, ರೆಂಬೆ ಕೊಂಬೆಗಳಿಂದ ಮಾಡಿದ ವಿಶಿಷ್ಟ ಕಲಾಕೃತಿಗಳು ಹಾಗೂ ಪೀಠೋಪಕರಣಗಳು. ಉರುವಲಾಗಿ ಒಲೆಗೆ ಸೇರುತ್ತಿದ್ದ ಒಣ ಕಾಫಿಗಿಡಗಳು ಕಲಾವಿದನ ಕಣ್ಣಿಗೆ ಬಿದ್ದು ಸುಂದರ ಕಲಾಕೃತಿಗಳಾಗಿ ರೂಪುಗೊಂಡಿವೆ. <br /> <br /> ಕಾಫಿ ಗಿಡಗಳ ಆಯುಷ್ಯ ಕೆಲ ವರ್ಷಗಳು. ನಂತರ ಆ ಗಿಡಗಳಲ್ಲಿ ಇಳುವರಿ ನಿರೀಕ್ಷಿಸುವುದು ಕಷ್ಟ. ಹಳೆಯ ಗಿಡಗಳನ್ನು ಕಿತ್ತು ಹೊಸ ಸಸಿಗಳನ್ನು ನೆಡುತ್ತಾರೆ. ಹಳೆಯ ಗಿಡಗಳನ್ನು ಕರಕುಶಲ ವಸ್ತುಗಳನ್ನು ತಯಾರಿಸುವವರು ಖರೀದಿಸುತ್ತಾರೆ. <br /> <br /> ರೋಬಸ್ಟಾ ಕಾಫಿ ಗಿಡಗಳು ಕಲಾಕೃತಿಗಳನ್ನು ತಯಾರಿಸಲು ಹೆಚ್ಚು ಸೂಕ್ತ. ಕಾಫಿ ಎಸ್ಟೇಟ್ನಿಂದ ಕಿತ್ತು ತಂದ ಗಿಡಗಳನ್ನು ರಾಶಿ ಹಾಕುತ್ತಾರೆ. ಈ ಗಿಡಗಳ ಬೇರು, ಕಾಂಡಗಳನ್ನು ಪರಿಶೀಲಿಸಿ ಅವುಗಳಲ್ಲಿ ನಾನಾ ನಮೂನೆಯ ಕಲಾಕೃತಿಗಳನ್ನು ರೂಪಿಸುತ್ತಾರೆ. ನೂರು ರೂಗಳಿಂದ ಹಿಡಿದು ಸಾವಿರಾರು ರೂ.ವರೆಗೆ ಇವುಗಳನ್ನು ಮಾರಾಟ ಮಾಡುತ್ತಾರೆ.<br /> <br /> `ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಸಕಲೇಶಪುರ ಸುತ್ತಮುತ್ತಲಿನ ಕಾಫಿ ಎಸ್ಟೇಟ್ಗಳಿಂದ ಒಣಗಿದ ಕಾಫಿ ಗಿಡಗಳನ್ನು ತರುತ್ತೇವೆ. ನಂತರ ಅವನ್ನು ಕತ್ತರಿಸಿ ಕಲಾಕೃತಿಗಳನ್ನಾಗಿಸುತ್ತೇವೆ. ಅವಕ್ಕೆ ವಾರ್ನಿಶ್ ಹಚ್ಚಿ ಆಕರ್ಷಕವಾಗಿ ಜೋಡಿಸುತ್ತೇವೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವವರು ಅವನ್ನು ಖರೀದಿಸುತ್ತಾರೆ ಎನ್ನುತ್ತಾರೆ ಕರಕುಶಲ ವ್ಯಾಪಾರಿ ರಿಯಾಝ್.<br /> <br /> ಕಾಫಿ ಗಿಡದ ಕಾಂಡ, ಬೇರುಗಳನ್ನು ನೋಡಿದಾಗ ಅದರಿಂದ ಏನು ಮಾಡಬಹುದು ಎಂದು ನಮಗೆ ಹೊಳೆಯುತ್ತದೆ. ಅವುಗಳನ್ನು ಕತ್ತರಿಸಿ ಜೋಡಿಸುವುದೇ ಕಲಾವಿದನ ಕೆಲಸ ಎನ್ನುತ್ತಾರೆ ಕರಕುಶಲ ಕಲೆಯಲ್ಲಿ ಪಳಗಿದ ವಿನ್ಯಾಸಗಾರ ಆರಿಫ್. <br /> <br /> ಕಾಫಿ ಕಾಷ್ಠದಲ್ಲಿ ತಯಾರಿಸಿದ ಕಲಾಕೃತಿಗಳು ಬಹಳ ವಿಶಿಷ್ಟವಾದುದು. ಕೆಲವು ಬೇರುಗಳು ಅನೇಕ ಪ್ರಾಣಿಗಳನ್ನು ಹೋಲುತ್ತವೆ. ಅನೇಕ ಕಲಾಕೃತಿಗಳು ಮೊದಲ ನೋಟಕ್ಕೆ ಸೆಳೆಯುತ್ತವೆ ಎನ್ನುತ್ತಾರೆ ಬೆಂಗಳೂರಿನ ಗೃಹಿಣಿ ಸುಷ್ಮಾ. <br /> <br /> ಕಾಫಿ ಗಿಡಗಳ ಬೇರು, ಕಾಂಡ ಬಳಸಿ ಟೀಪಾಯ್ ಮಾಡಬಹುದು. ಬಲಿತ ಕಾಂಡಗಳಿಂದ ಆನೆ, ಮೀನು, ಮನುಷ್ಯನ ಆ ಅಕೃತಿಗಳನ್ನೂ ಮಾಡಬಹುದು. ಒಟ್ಟಿನಲ್ಲಿ ಇವು ಜನರಿಗೆ ಇಷ್ಟವಾಗುತ್ತವೆ. ಚೌಕಾಶಿ ಮಾಡಿದರೆ ಕಡಿಮೆ ಬೆಲೆಗೂ ಸಿಗುತ್ತವೆ ಎನ್ನುವುದು ಅನೇಕರ ಅನುಭವ.<br /> <br /> ಹೆದ್ದಾರಿ ಪ್ರವಾಸಿಗರೇ ಈ ಕಲಾಕೃತಿಗಳ ಗಿರಾಕಿಗಳು. ಕೆಲವರಿಗೆ ಟೀಪಾಯ್ ಇಷ್ಟವಾಗದರೆ ಇನ್ನು ಕೆಲವರಿಗೆ ಟಿ.ವಿ. ಶೋಕೇಸ್ ಇಷ್ಟವಾಗುತ್ತದೆ. ಆನೇಮಹಲ್ ಗ್ರಾಮದ ಉದ್ದಕ್ಕೂ ಇಂತಹ ಹಲವು ಕರ ಕುಶಲ ವಸ್ತುಗಳ ಮಳಿಗೆಗಳಿವೆ.<br /> <br /> ಈ ಗ್ರಾಮದ ಹಲವು ಕುಟುಂಬಗಳ ಕಸುಬು ಇದೇ ಆಗಿದೆ. ಬೆಳಿಗ್ಗೆ ಎದ್ದು ಮಳಿಗೆ ತೆರೆದು ಕಲಾಕೃತಿಗಳನ್ನು ಆಕರ್ಷಕವಾಗಿ ಜೋಡಿಸಿ ರಾತ್ರಿ ವರೆಗೆ ವ್ಯಾಪಾರ ಮಾಡುತ್ತಾರೆ. 365 ದಿನಗಳೂ ವ್ಯಾಪಾರ ನಡೆಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>