<p>ತುಮಕೂರಿನ ಸಿದ್ಧಗಂಗಾ ಕ್ಷೇತ್ರವೆಂದರೆ ತಟ್ಟನೆ ನೆನಪಾಗುವುದು 105 ವಯಸ್ಸಿನ, ನಡೆದಾಡುವ ದೇವರೆಂದೆ ಹೆಸರಾಗಿರುವ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಅವರು ಅನ್ನದಾನ, ವಿದ್ಯಾದಾನ ನೀಡಿ ಪೊರೆಯುತ್ತಿರುವ ಹತ್ತು ಸಾವಿರಕ್ಕೂ ಬಡ ಹೆಚ್ಚು ಮಕ್ಕಳು.<br /> <br /> ವಿವಿಧ ಆಕಾರದ ಕಲ್ಲು ಬಂಡೆಗಳ ನಡುವೆ ದಟ್ಟ್ಯೆಸಿರುವ ಪ್ರಾಕೃತಿಕ ಚೆಲುವಿನಿಂದ ತುಂಬಿದ ಈ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳ ಭಕ್ತರನ್ನೂ ಆಕರ್ಷಿಸುತ್ತಿದೆ. ಕ್ಷೇತ್ರದ ಪುಟ್ಟ ಬೆಟ್ಟದ 130 ಮೆಟ್ಟಿಲೇರಿದರೆ ಸಿದ್ಧಲಿಂಗೇಶ್ವರನ ದೇಗುಲವಿದೆ.<br /> <br /> ಒಂದೆರಡು ಹೆಜ್ಜೆ ಸನಿಹದಲ್ಲೇ ಪ್ರಾಚೀನ ಗವಿಯೊಳಗೆ ತೀರ್ಥೊದ್ಭವ ಬಾವಿಯಿದೆ. ಚರ್ಮವ್ಯಾಧಿ ಪೀಡಿತರು, ಕೆಟ್ಟದೃಷ್ಟಿ ಬಾಧಿತರು, ಕಂಕಣಭಾಗ್ಯ ಮತ್ತು ಸಂತಾನಭಾಗ್ಯ ವಂಚಿತರು ಈ ಗಂಗೆಯಲ್ಲಿ ಮಿಂದು ಸಿದ್ಧಲಿಂಗೇಶ್ವರನನ್ನು ಧ್ಯಾನಿಸಿದರೆ ಅಭೀಷ್ಟಗಳು ಈಡೇರುತ್ತವೆಂಬುದು ಭಕ್ತರ ಅಚಲ ನಂಬಿಕೆ.<br /> <br /> 13ನೇ ಶತಮಾನದಲ್ಲಿ ಹರದನಹಳ್ಳಿ ಶೂನ್ಯ ಪೀಠ ಪರಂಪರೆಯ ಗೋಸಲ ಸಿದ್ಧೇಶ್ವರರೆಂಬ ಯೋಗಿ ದೇಶ ಸಂಚಾರ ಮಾಡುತ್ತಾ, ಜನ ಜಾಗೃತಿ ಮೂಡಿಸುತ್ತ 101 ಶಿಷ್ಯರೊಂದಿಗೆ ಈ ಸ್ಥಳಕ್ಕೆ ಬರುತ್ತಾರೆ. ಇಲ್ಲೆೀ ತಪೋನಿಷ್ಠರಾಗಿ ಮಠ ಸ್ಥಾಪಿಸುತ್ತಾರೆ. ಇಲ್ಲಿನ ವಿವಿಧ ಗವಿಗಳಲ್ಲಿ ಧ್ಯಾನದಲ್ಲಿದ್ದ ವಿರಕ್ತರಲ್ಲಿ ಒಬ್ಬರಿಗೆ ಒಂದು ಮಧ್ಯರಾತ್ರಿ ತೀವ್ರ ಬಾಯಾರಿಕೆ ಆಗುತ್ತದೆ.<br /> <br /> ಆಗ ತಮ್ಮ ಗುರುಗಳಾದ ಗೋಸಲ ಸಿದ್ದೇಶ್ವರರನ್ನು ಧ್ಯಾನಿಸುತ್ತಾರೆ. ಗುರುಗಳು ಹಳೆಯ ಮಠದಿಂದ ಹೊರಟು ಈ ಮಹಾಗವಿಗೆ ಬಂದು ಮೊಳಕಾಲಿನಿಂದ ಬಂಡೆಗೆ ಅಪ್ಪಳಿಸಿದಾಗ ಅಲ್ಲಿ ಗಂಗೆ ಉದ್ಭವವಾಯಿತು. <br /> <br /> ಹೀಗೆ ಸಿದ್ಧರಿಂದ ಉದ್ಭವಿಸಿದ ಗಂಗೆಯೇ ನಂಬಿ ಬಂದ ಸಮಸ್ತ ಭಕ್ತರ ಅಭಿಲಾಷೆಗಳನ್ನು ನೆರವೇರಿಸುವ ಸಿದ್ಧಗಂಗೆ ಎಂದು ಪ್ರಸಿದ್ಧವಾಯಿತು. ಮುಂದೆ ಎಡೆಯೂರು ಸಿದ್ಧಲಿಂಗೇಶ್ವರರು ಕ್ರಿಶ 14 ಶತಮಾನದ ಉತ್ತರಾರ್ಧದಲ್ಲಿ ಇಲ್ಲಿ ತಪೋನುಷ್ಠಾನಗೈದರು ಎನ್ನುತ್ತದೆ ಸ್ಥಳ ಮಹಾತ್ಮೆ.<br /> <br /> ನಿತ್ಯ ಬೆಳಗಿನ 5.30ಕ್ಕೆ ವೇದಘೋಷದೊಂದಿಗೆ ಪೂಜಾ ಕೈಂಕರ್ಯ ಆರಂಭ. ಶಿವನ ದೇಗುಲವಾದ್ದರಿಂದ ಹೆಚ್ಚಿನ ಆಡಂಬರ, ಅಲಂಕಾರಕ್ಕೆ ಪ್ರಾಮುಖ್ಯತೆಯಿಲ್ಲ. ಆದರೆ ಧರ್ಮ, ಪುರಾತನ ಸಂಸ್ಕೃತಿ, ಪರಂಪರೆಗೆ ಒತ್ತುಕೊಟ್ಟು ಎಲ್ಲಾ ಆಚರಣೆಗಳನ್ನು ಸರಳವಾಗಿ ನಡೆಸಲಾಗುತ್ತದೆ.<br /> <br /> ಮಹಾನ್ ಸಿದ್ಧಪುರುಷರಿಂದ ಸಿದ್ಧಿಸಿದ ಶ್ರೀ ಕ್ಷೇತ್ರ ನಿತ್ಯ ದಾಸೋಹಕ್ಕೂ ಹೆಸರುವಾಸಿ. ಅಂದು ಹಚ್ಚಿದ ಒಲೆ ಇಂದಿಗೂ ಆರಿಲ್ಲ ಎನ್ನುತ್ತಾರೆ. ವಸತಿ ವ್ಯವಸ್ಥೆ ಇಲ್ಲಿ ಉಚಿತ.<br /> ವಿವರಗಳಿಗೆ ಅರ್ಚಕ ಚಂದ್ರಶೇಖರಯ್ಯ ಅವರ ಮೊಬೈಲ್ 98808 21117.</p>.<p><strong>ಸೇವೆಗಳು (ರೂಪಾಯಿ)<br /> </strong><br /> ರುದ್ರಾಭಿಷೇಕ 150<br /> ಅಷ್ಟೋತ್ತರ 10<br /> ಮಂಡೆ ಸೇವೆ 10<br /> ಕುಂಕುಮಾರ್ಚನೆ 10<br /> ಗಂಗಾಪೂಜೆ 10<br /> ಕ್ಷೀರಾಭಿಷೇಕ 1001<br /> (ವರ್ಷಕ್ಕೊಮ್ಮೆ ಮಾತ್ರ)<br /> ಅಮ್ಮನವರಿಗೆ ಅರ್ಚನೆ 101<br /> (ವರ್ಷಕ್ಕೊಮ್ಮೆ ಮಾತ್ರ)<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರಿನ ಸಿದ್ಧಗಂಗಾ ಕ್ಷೇತ್ರವೆಂದರೆ ತಟ್ಟನೆ ನೆನಪಾಗುವುದು 105 ವಯಸ್ಸಿನ, ನಡೆದಾಡುವ ದೇವರೆಂದೆ ಹೆಸರಾಗಿರುವ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಅವರು ಅನ್ನದಾನ, ವಿದ್ಯಾದಾನ ನೀಡಿ ಪೊರೆಯುತ್ತಿರುವ ಹತ್ತು ಸಾವಿರಕ್ಕೂ ಬಡ ಹೆಚ್ಚು ಮಕ್ಕಳು.<br /> <br /> ವಿವಿಧ ಆಕಾರದ ಕಲ್ಲು ಬಂಡೆಗಳ ನಡುವೆ ದಟ್ಟ್ಯೆಸಿರುವ ಪ್ರಾಕೃತಿಕ ಚೆಲುವಿನಿಂದ ತುಂಬಿದ ಈ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳ ಭಕ್ತರನ್ನೂ ಆಕರ್ಷಿಸುತ್ತಿದೆ. ಕ್ಷೇತ್ರದ ಪುಟ್ಟ ಬೆಟ್ಟದ 130 ಮೆಟ್ಟಿಲೇರಿದರೆ ಸಿದ್ಧಲಿಂಗೇಶ್ವರನ ದೇಗುಲವಿದೆ.<br /> <br /> ಒಂದೆರಡು ಹೆಜ್ಜೆ ಸನಿಹದಲ್ಲೇ ಪ್ರಾಚೀನ ಗವಿಯೊಳಗೆ ತೀರ್ಥೊದ್ಭವ ಬಾವಿಯಿದೆ. ಚರ್ಮವ್ಯಾಧಿ ಪೀಡಿತರು, ಕೆಟ್ಟದೃಷ್ಟಿ ಬಾಧಿತರು, ಕಂಕಣಭಾಗ್ಯ ಮತ್ತು ಸಂತಾನಭಾಗ್ಯ ವಂಚಿತರು ಈ ಗಂಗೆಯಲ್ಲಿ ಮಿಂದು ಸಿದ್ಧಲಿಂಗೇಶ್ವರನನ್ನು ಧ್ಯಾನಿಸಿದರೆ ಅಭೀಷ್ಟಗಳು ಈಡೇರುತ್ತವೆಂಬುದು ಭಕ್ತರ ಅಚಲ ನಂಬಿಕೆ.<br /> <br /> 13ನೇ ಶತಮಾನದಲ್ಲಿ ಹರದನಹಳ್ಳಿ ಶೂನ್ಯ ಪೀಠ ಪರಂಪರೆಯ ಗೋಸಲ ಸಿದ್ಧೇಶ್ವರರೆಂಬ ಯೋಗಿ ದೇಶ ಸಂಚಾರ ಮಾಡುತ್ತಾ, ಜನ ಜಾಗೃತಿ ಮೂಡಿಸುತ್ತ 101 ಶಿಷ್ಯರೊಂದಿಗೆ ಈ ಸ್ಥಳಕ್ಕೆ ಬರುತ್ತಾರೆ. ಇಲ್ಲೆೀ ತಪೋನಿಷ್ಠರಾಗಿ ಮಠ ಸ್ಥಾಪಿಸುತ್ತಾರೆ. ಇಲ್ಲಿನ ವಿವಿಧ ಗವಿಗಳಲ್ಲಿ ಧ್ಯಾನದಲ್ಲಿದ್ದ ವಿರಕ್ತರಲ್ಲಿ ಒಬ್ಬರಿಗೆ ಒಂದು ಮಧ್ಯರಾತ್ರಿ ತೀವ್ರ ಬಾಯಾರಿಕೆ ಆಗುತ್ತದೆ.<br /> <br /> ಆಗ ತಮ್ಮ ಗುರುಗಳಾದ ಗೋಸಲ ಸಿದ್ದೇಶ್ವರರನ್ನು ಧ್ಯಾನಿಸುತ್ತಾರೆ. ಗುರುಗಳು ಹಳೆಯ ಮಠದಿಂದ ಹೊರಟು ಈ ಮಹಾಗವಿಗೆ ಬಂದು ಮೊಳಕಾಲಿನಿಂದ ಬಂಡೆಗೆ ಅಪ್ಪಳಿಸಿದಾಗ ಅಲ್ಲಿ ಗಂಗೆ ಉದ್ಭವವಾಯಿತು. <br /> <br /> ಹೀಗೆ ಸಿದ್ಧರಿಂದ ಉದ್ಭವಿಸಿದ ಗಂಗೆಯೇ ನಂಬಿ ಬಂದ ಸಮಸ್ತ ಭಕ್ತರ ಅಭಿಲಾಷೆಗಳನ್ನು ನೆರವೇರಿಸುವ ಸಿದ್ಧಗಂಗೆ ಎಂದು ಪ್ರಸಿದ್ಧವಾಯಿತು. ಮುಂದೆ ಎಡೆಯೂರು ಸಿದ್ಧಲಿಂಗೇಶ್ವರರು ಕ್ರಿಶ 14 ಶತಮಾನದ ಉತ್ತರಾರ್ಧದಲ್ಲಿ ಇಲ್ಲಿ ತಪೋನುಷ್ಠಾನಗೈದರು ಎನ್ನುತ್ತದೆ ಸ್ಥಳ ಮಹಾತ್ಮೆ.<br /> <br /> ನಿತ್ಯ ಬೆಳಗಿನ 5.30ಕ್ಕೆ ವೇದಘೋಷದೊಂದಿಗೆ ಪೂಜಾ ಕೈಂಕರ್ಯ ಆರಂಭ. ಶಿವನ ದೇಗುಲವಾದ್ದರಿಂದ ಹೆಚ್ಚಿನ ಆಡಂಬರ, ಅಲಂಕಾರಕ್ಕೆ ಪ್ರಾಮುಖ್ಯತೆಯಿಲ್ಲ. ಆದರೆ ಧರ್ಮ, ಪುರಾತನ ಸಂಸ್ಕೃತಿ, ಪರಂಪರೆಗೆ ಒತ್ತುಕೊಟ್ಟು ಎಲ್ಲಾ ಆಚರಣೆಗಳನ್ನು ಸರಳವಾಗಿ ನಡೆಸಲಾಗುತ್ತದೆ.<br /> <br /> ಮಹಾನ್ ಸಿದ್ಧಪುರುಷರಿಂದ ಸಿದ್ಧಿಸಿದ ಶ್ರೀ ಕ್ಷೇತ್ರ ನಿತ್ಯ ದಾಸೋಹಕ್ಕೂ ಹೆಸರುವಾಸಿ. ಅಂದು ಹಚ್ಚಿದ ಒಲೆ ಇಂದಿಗೂ ಆರಿಲ್ಲ ಎನ್ನುತ್ತಾರೆ. ವಸತಿ ವ್ಯವಸ್ಥೆ ಇಲ್ಲಿ ಉಚಿತ.<br /> ವಿವರಗಳಿಗೆ ಅರ್ಚಕ ಚಂದ್ರಶೇಖರಯ್ಯ ಅವರ ಮೊಬೈಲ್ 98808 21117.</p>.<p><strong>ಸೇವೆಗಳು (ರೂಪಾಯಿ)<br /> </strong><br /> ರುದ್ರಾಭಿಷೇಕ 150<br /> ಅಷ್ಟೋತ್ತರ 10<br /> ಮಂಡೆ ಸೇವೆ 10<br /> ಕುಂಕುಮಾರ್ಚನೆ 10<br /> ಗಂಗಾಪೂಜೆ 10<br /> ಕ್ಷೀರಾಭಿಷೇಕ 1001<br /> (ವರ್ಷಕ್ಕೊಮ್ಮೆ ಮಾತ್ರ)<br /> ಅಮ್ಮನವರಿಗೆ ಅರ್ಚನೆ 101<br /> (ವರ್ಷಕ್ಕೊಮ್ಮೆ ಮಾತ್ರ)<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>