<p>ಪವಿತ್ರ ಪುಣ್ಯ ಕ್ಷೇತ್ರ ಅಲ್ಲದೇ, ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಕ್ಷೇತ್ರವಾಗಿ ಸೊರಬ ತಾಲ್ಲೂಕಿನ ಹಿರೇಮಾಗಡಿ ಸುಕ್ಷೇತ್ರ ತನ್ನದೇ ಆದ ಹಿರಿಮೆ-ಗರಿಮೆ ಹೊಂದಿದೆ.ಸುಮಾರು 1,500 ಜನಸಂಖ್ಯೆ ಇರುವ, ಹಂಚಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಗಡಿಭಾಗದಲ್ಲಿರುವ ಕ್ಷೇತ್ರಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. <br /> <br /> ದೊಡ್ಡ ಮಠ ಕ್ಷೇತ್ರದಲ್ಲಿ ಇರುವುದರಿಂದ, ಹಿರೇ ಮಾಗುಂಡಿ/ಮಾಗಡಿ ಹೆಸರಾಗಿದೆ ಎನ್ನಲಾಗಿದ್ದು, ಚಿತ್ರದುರ್ಗದ ಬೃಹನ್ಮಠದ ಚನ್ನಬಸವ ಮುರುಘರಾಜೇಂದ್ರ ಸ್ವಾಮೀಜಿ ಧರ್ಮ, ದೇವರು, ಅಹಿಂಸೆಯ ತತ್ವಗಳನ್ನು ಬೀರುತ್ತಾ ಪಾದಚಾರಿಯಾಗಿ ಗ್ರಾಮಕ್ಕೆ ಬಂದು, ಇಲ್ಲಿನ ಪವಿತ್ರವನದಲ್ಲಿ ತಪಸ್ಸು ಆಚರಿಸಿದರು.<br /> <br /> ಗ್ರಾಮದ ಹೊರಭಾಗದಲ್ಲಿ ಇರುವ ವನದಲ್ಲಿ 101 ಬಿಲ್ವಪತ್ರೆ ಗಿಡಗಳಿದ್ದವು. ಸ್ವಾಮೀಜಿ ದಯೆಯಿಂದ ಮಗನ ಕುಂಟುತನ ದೂರವಾದ ಹಿನ್ನೆಲೆಯಲ್ಲಿ ಗ್ರಾಮದ ಪಟೇಲರು ಸ್ವಾಮೀಜಿ ಬೇಡಿಕೆಯಂತೆ ಮಠವನ್ನು ಕಟ್ಟಿಸಿ ಕೊಟ್ಟರು. ಪಟೇಲರ ಕುಟುಂಬದವರ ಸಮಾಧಿ ಸ್ವಾಮೀಜಿ ಗದ್ದುಗೆಯ ಎದುರಿಗೆ ಇದೆ ಎನ್ನುತ್ತಾರೆ ಗ್ರಾಮಸ್ಥರು.<br /> <br /> ಈವರೆಗೆ ಮಠ 15- 20 ಮಠಾಧೀಶರನ್ನು ಕಂಡಿದ್ದು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಕಳೆದ 27 ವರ್ಷಗಳಿಂದ ಪಟ್ಟದಲ್ಲಿ ಇದ್ದಾರೆ. ಮಠದಲ್ಲಿ ಮುರುಘರಾಜೇಂದ್ರ ಕಾನ್ವೆಂಟ್ ಸ್ಥಾಪನೆಗೆ ಕಾರಣರಾಗಿದ್ದು, ವೃದ್ಧಾಶ್ರಮ, ಅನಾಥಾಶ್ರಮದ ಮೂಲಕ ಬಡ ಜನರ ಬದುಕಿಗೆ ಆಸರೆ ಆಗಿದ್ದಾರೆ. ಭಕ್ತರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪ್ರೇರೇಪಿಸಿದ್ದಾರೆ. <br /> <br /> ಮಠಕ್ಕೆ ತಾಲ್ಲೂಕು, ಜಿಲ್ಲೆ ಅಲ್ಲದೇ ದಾವಣಗೆರೆ, ಧಾರವಾಡ, ಗದಗ, ಹಾವೇರಿ ಮೊದಲಾದ ಕಡೆಗಳಿಂದ ಸಹಸ್ರಾರು ಭಕ್ತರಿದ್ದಾರೆ. ಪ್ರತಿ ವರ್ಷ ಕಡೆಯ ಕಾರ್ತಿಕ ಅಮಾವಾಸ್ಯೆಯಂದು ನಡೆಯುವ ಕಾರ್ತಿಕೋತ್ಸವ, ಯುಗಾದಿ ನಂತರದ ನವಮಿ, ದಶಮಿಯಂದು ನಡೆಯುವ ಜಾತ್ರೋತ್ಸವಕ್ಕೆ ಕಿಕ್ಕಿರಿದು ಸೇರುತ್ತಾರೆ.<br /> <br /> ಮಠದ ಆವರಣದಲ್ಲಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಿಗೆ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಗ್ರಾಮ ಹಾಗೂ ಸುತ್ತಮುತ್ತ ಸುಮಾರು 10ರಿಂದ 13ನೇ ಶತಮಾನದ ಅವಧಿಯ ಪ್ರಾಚೀನ ದೇಗುಲಗಳು, ಅವಶೇಷಗಳು ಕಂಡು ಬರುತ್ತವೆ.<br /> <br /> <strong>ಮೂಲಸೌಕರ್ಯ ಕೊರತೆ: </strong>ಸರ್ಕಾರದ ಸ್ಪಂದನೆ- ಗ್ರಾಮ ಹಾಗೂ ಮಠಕ್ಕೆ ಶತಮಾನಗಳ ಇತಿಹಾಸವಿದ್ದರೂ ಮೂಲಸೌಕರ್ಯ ಕೊರತೆ ಇನ್ನೂ ನೀಗಿಲ್ಲ. ರಸ್ತೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಇದು ಬಸ್ ಸಂಚಾರಕ್ಕೂ ಅಡ್ಡಿಯಾಗಿದ್ದು, ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು 10 ಕಿಮೀಗೂ ಹೆಚ್ಚು ಅಂತರದಿಂದ ನಡೆದುಕೊಂಡೇ ಮುಖ್ಯರಸ್ತೆ ಸೇರಬೇಕಿದೆ. <br /> <br /> ಗ್ರಾಮಸ್ಥರ ಮನವಿಗೆ ಸರ್ಕಾರ ಸ್ಪಂದಿಸಿದ್ದು, 10ನೇ ಮೈಲುಕಲ್ಲಿನಿಂದ ಹಿರೇಮಾಗಡಿ ಹಾಗೂ ಅಲ್ಲಿಂದ ಗಂಗೊಳ್ಳಿ ಗ್ರಾಮಕ್ಕೆ ಸಾಗುವ ರಸ್ತೆ ಅಭಿವೃದ್ಧಿಗೆ ಒಟ್ಟು ರೂ. 2 ಕೋಟಿ ಮಂಜೂರು ಮಾಡಿದೆ. ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಒಳಪಡಿಸಲಾಗಿದೆ. ಕುಗ್ರಾಮಕ್ಕೆ ವಸತಿಶಾಲೆಗಳನ್ನು ಮಂಜೂರು ಮಾಡುವ ಮೂಲಕ ಅಭಿವೃದ್ಧಿಗೆ ಮುಂದಾಗಿದೆ.<br /> <br /> <strong>ಆಸ್ಪತ್ರೆಗೆ ಬೇಡಿಕೆ:</strong> ಸುತ್ತ ಹತ್ತಾರು ಗ್ರಾಮಗಳಿದ್ದು, ಸಮೀಪದಲ್ಲಿ ಆಸ್ಪತ್ರೆ ಇಲ್ಲದಿರುವುದರಿಂದ ವೃದ್ಧರು ಹಾಗೂ ಮಹಿಳೆಯರಿಗೆ ಅತೀವ ತೊಂದರೆ ಆಗಿದೆ. ಶೀಘ್ರ ಸರ್ಕಾರಿ ಆರೋಗ್ಯ ಕೇಂದ್ರ ಆರಂಭಗೊಂಡಲ್ಲಿ ನಿವಾಸಿಗಳ ಅನೇಕ ವರ್ಷಗಳ ಬವಣೆ ನೀಗಿದಂತೆ ಆಗುತ್ತದೆ ಎಂಬುದು ಗ್ರಾಮಸ್ಥರು ಒಕ್ಕೊರಲ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪವಿತ್ರ ಪುಣ್ಯ ಕ್ಷೇತ್ರ ಅಲ್ಲದೇ, ಅನಾಥಾಶ್ರಮ, ವೃದ್ಧಾಶ್ರಮ, ಶಿಕ್ಷಣ ಕ್ಷೇತ್ರವಾಗಿ ಸೊರಬ ತಾಲ್ಲೂಕಿನ ಹಿರೇಮಾಗಡಿ ಸುಕ್ಷೇತ್ರ ತನ್ನದೇ ಆದ ಹಿರಿಮೆ-ಗರಿಮೆ ಹೊಂದಿದೆ.ಸುಮಾರು 1,500 ಜನಸಂಖ್ಯೆ ಇರುವ, ಹಂಚಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಗಡಿಭಾಗದಲ್ಲಿರುವ ಕ್ಷೇತ್ರಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. <br /> <br /> ದೊಡ್ಡ ಮಠ ಕ್ಷೇತ್ರದಲ್ಲಿ ಇರುವುದರಿಂದ, ಹಿರೇ ಮಾಗುಂಡಿ/ಮಾಗಡಿ ಹೆಸರಾಗಿದೆ ಎನ್ನಲಾಗಿದ್ದು, ಚಿತ್ರದುರ್ಗದ ಬೃಹನ್ಮಠದ ಚನ್ನಬಸವ ಮುರುಘರಾಜೇಂದ್ರ ಸ್ವಾಮೀಜಿ ಧರ್ಮ, ದೇವರು, ಅಹಿಂಸೆಯ ತತ್ವಗಳನ್ನು ಬೀರುತ್ತಾ ಪಾದಚಾರಿಯಾಗಿ ಗ್ರಾಮಕ್ಕೆ ಬಂದು, ಇಲ್ಲಿನ ಪವಿತ್ರವನದಲ್ಲಿ ತಪಸ್ಸು ಆಚರಿಸಿದರು.<br /> <br /> ಗ್ರಾಮದ ಹೊರಭಾಗದಲ್ಲಿ ಇರುವ ವನದಲ್ಲಿ 101 ಬಿಲ್ವಪತ್ರೆ ಗಿಡಗಳಿದ್ದವು. ಸ್ವಾಮೀಜಿ ದಯೆಯಿಂದ ಮಗನ ಕುಂಟುತನ ದೂರವಾದ ಹಿನ್ನೆಲೆಯಲ್ಲಿ ಗ್ರಾಮದ ಪಟೇಲರು ಸ್ವಾಮೀಜಿ ಬೇಡಿಕೆಯಂತೆ ಮಠವನ್ನು ಕಟ್ಟಿಸಿ ಕೊಟ್ಟರು. ಪಟೇಲರ ಕುಟುಂಬದವರ ಸಮಾಧಿ ಸ್ವಾಮೀಜಿ ಗದ್ದುಗೆಯ ಎದುರಿಗೆ ಇದೆ ಎನ್ನುತ್ತಾರೆ ಗ್ರಾಮಸ್ಥರು.<br /> <br /> ಈವರೆಗೆ ಮಠ 15- 20 ಮಠಾಧೀಶರನ್ನು ಕಂಡಿದ್ದು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಕಳೆದ 27 ವರ್ಷಗಳಿಂದ ಪಟ್ಟದಲ್ಲಿ ಇದ್ದಾರೆ. ಮಠದಲ್ಲಿ ಮುರುಘರಾಜೇಂದ್ರ ಕಾನ್ವೆಂಟ್ ಸ್ಥಾಪನೆಗೆ ಕಾರಣರಾಗಿದ್ದು, ವೃದ್ಧಾಶ್ರಮ, ಅನಾಥಾಶ್ರಮದ ಮೂಲಕ ಬಡ ಜನರ ಬದುಕಿಗೆ ಆಸರೆ ಆಗಿದ್ದಾರೆ. ಭಕ್ತರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪ್ರೇರೇಪಿಸಿದ್ದಾರೆ. <br /> <br /> ಮಠಕ್ಕೆ ತಾಲ್ಲೂಕು, ಜಿಲ್ಲೆ ಅಲ್ಲದೇ ದಾವಣಗೆರೆ, ಧಾರವಾಡ, ಗದಗ, ಹಾವೇರಿ ಮೊದಲಾದ ಕಡೆಗಳಿಂದ ಸಹಸ್ರಾರು ಭಕ್ತರಿದ್ದಾರೆ. ಪ್ರತಿ ವರ್ಷ ಕಡೆಯ ಕಾರ್ತಿಕ ಅಮಾವಾಸ್ಯೆಯಂದು ನಡೆಯುವ ಕಾರ್ತಿಕೋತ್ಸವ, ಯುಗಾದಿ ನಂತರದ ನವಮಿ, ದಶಮಿಯಂದು ನಡೆಯುವ ಜಾತ್ರೋತ್ಸವಕ್ಕೆ ಕಿಕ್ಕಿರಿದು ಸೇರುತ್ತಾರೆ.<br /> <br /> ಮಠದ ಆವರಣದಲ್ಲಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಿಗೆ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಗ್ರಾಮ ಹಾಗೂ ಸುತ್ತಮುತ್ತ ಸುಮಾರು 10ರಿಂದ 13ನೇ ಶತಮಾನದ ಅವಧಿಯ ಪ್ರಾಚೀನ ದೇಗುಲಗಳು, ಅವಶೇಷಗಳು ಕಂಡು ಬರುತ್ತವೆ.<br /> <br /> <strong>ಮೂಲಸೌಕರ್ಯ ಕೊರತೆ: </strong>ಸರ್ಕಾರದ ಸ್ಪಂದನೆ- ಗ್ರಾಮ ಹಾಗೂ ಮಠಕ್ಕೆ ಶತಮಾನಗಳ ಇತಿಹಾಸವಿದ್ದರೂ ಮೂಲಸೌಕರ್ಯ ಕೊರತೆ ಇನ್ನೂ ನೀಗಿಲ್ಲ. ರಸ್ತೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಇದು ಬಸ್ ಸಂಚಾರಕ್ಕೂ ಅಡ್ಡಿಯಾಗಿದ್ದು, ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು 10 ಕಿಮೀಗೂ ಹೆಚ್ಚು ಅಂತರದಿಂದ ನಡೆದುಕೊಂಡೇ ಮುಖ್ಯರಸ್ತೆ ಸೇರಬೇಕಿದೆ. <br /> <br /> ಗ್ರಾಮಸ್ಥರ ಮನವಿಗೆ ಸರ್ಕಾರ ಸ್ಪಂದಿಸಿದ್ದು, 10ನೇ ಮೈಲುಕಲ್ಲಿನಿಂದ ಹಿರೇಮಾಗಡಿ ಹಾಗೂ ಅಲ್ಲಿಂದ ಗಂಗೊಳ್ಳಿ ಗ್ರಾಮಕ್ಕೆ ಸಾಗುವ ರಸ್ತೆ ಅಭಿವೃದ್ಧಿಗೆ ಒಟ್ಟು ರೂ. 2 ಕೋಟಿ ಮಂಜೂರು ಮಾಡಿದೆ. ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಒಳಪಡಿಸಲಾಗಿದೆ. ಕುಗ್ರಾಮಕ್ಕೆ ವಸತಿಶಾಲೆಗಳನ್ನು ಮಂಜೂರು ಮಾಡುವ ಮೂಲಕ ಅಭಿವೃದ್ಧಿಗೆ ಮುಂದಾಗಿದೆ.<br /> <br /> <strong>ಆಸ್ಪತ್ರೆಗೆ ಬೇಡಿಕೆ:</strong> ಸುತ್ತ ಹತ್ತಾರು ಗ್ರಾಮಗಳಿದ್ದು, ಸಮೀಪದಲ್ಲಿ ಆಸ್ಪತ್ರೆ ಇಲ್ಲದಿರುವುದರಿಂದ ವೃದ್ಧರು ಹಾಗೂ ಮಹಿಳೆಯರಿಗೆ ಅತೀವ ತೊಂದರೆ ಆಗಿದೆ. ಶೀಘ್ರ ಸರ್ಕಾರಿ ಆರೋಗ್ಯ ಕೇಂದ್ರ ಆರಂಭಗೊಂಡಲ್ಲಿ ನಿವಾಸಿಗಳ ಅನೇಕ ವರ್ಷಗಳ ಬವಣೆ ನೀಗಿದಂತೆ ಆಗುತ್ತದೆ ಎಂಬುದು ಗ್ರಾಮಸ್ಥರು ಒಕ್ಕೊರಲ ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>