<p>1942ರಲ್ಲಿ ನಮ್ಮ ದೇಶದ ಮತ್ತು ಜಾಗತಿಕ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ಇತಿಹಾಸದ ಪುಟಗಳಲ್ಲಿ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ಆ ಕಾಲದ ಸನ್ನಿವೇಶಗಳನ್ನು ಹಾಸ್ಯಮಯವಾಗಿ ರಂಗದ ಮೇಲೆ ತಂದರೆ ಹೇಗಿರುತ್ತದೆ? ಅಂತಹ ಪ್ರಯತ್ನವನ್ನು ಸಮಷ್ಟಿ ರಂಗತಂಡ ಮಾಡುತ್ತಿದೆ. ಈ ತಂಡ ನಿರೂಪಿಸುತ್ತಿರುವ ‘ಮುಕ್ಕಾಮ್ಪೋಸ್ಟ್ ಬೊಂಬಿಲ್ ವಾಡಿ’ ರಂಗರೂಪಕ ‘ನಾಟಕ ಬೆಂಗ್ಳೂರು’ ದಶಮಾನೋತ್ಸವ ಸಂಭ್ರಮದಲ್ಲಿ ಪ್ರದರ್ಶನಗೊಳ್ಳುತ್ತಿದೆ.</p>.<p>‘ದೇಶದಲ್ಲಿ 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿ ಮತ್ತು ಜಗತ್ತಿನಲ್ಲಿ ಎರಡನೆ ಮಹಾಯುದ್ಧದ ಪರ್ವಕಾಲ. ಅಂದಿನ ಕಾಲದ ರಂಗತಂಡವೊಂದು ನಾಟಕದ ತಾಲೀಮು ಮಾಡುತ್ತಿರುತ್ತದೆ. ಆ ತಂಡದ ಮೇಲೆ ಸ್ವಾತಂತ್ರ್ಯ ಚಳವಳಿ ಪ್ರಭಾವ ಬೀರುತ್ತದೆ. ಅದರಿಂದಾಗಿ ರಂಗಕಲಾವಿದರು ಬ್ರಿಟಿಷ್ ಪೊಲೀಸ್ ಚೌಕಿ ಮೇಲೆ ಧ್ವಜಾರೋಹಣ ಮಾಡಲು ಮುಂದಾಗುತ್ತಾರೆ. ಅದಕ್ಕಾಗಿ ಅವರು ಪಡುವ ಪರಿಪಾಟಲು ಹಾಸ್ಯ ರೂಪದಲ್ಲಿ ನಿರೂಪಿತವಾಗಿದೆ’ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪೂಜಾರಿ.</p>.<p>‘ಹಿಟ್ಲರ್ ಮತ್ತು ಅವನ ಆಪ್ತ ಗೊಬೆಲ್ನ ಹಾಸ್ಯಮಯ ಸಂಭಾಷಣೆಗಳು ಉತ್ತರ ಕರ್ನಾಟಕದ ಭಾಷೆಯಲ್ಲಿ ಈ ನಾಟಕದಲ್ಲಿವೆ. ಅಂದಿನ ಕಾಲಕ್ಕೆ ಕ್ರಿಕೆಟ್ ಬಗ್ಗೆ ಜನರ ಅಭಿಪ್ರಾಯಗಳು, ವ್ಯಕ್ತಿಯೊಬ್ಬ ಹೆಸರು ಬದಲಾಯಿಸಲು ಪಡುವ ಬವಣೆ ಇದರಲ್ಲಿ ನಗೆಯಾಗಿ ಮೂಡಿದೆ. ಊಹಿಸಲಾಗದಷ್ಟು ವ್ಯಂಗ್ಯದ ಸಂಭಾಷಣೆಗಳು ಇವೆ’ ಎಂಬುದು ಸಮಷ್ಟಿ ಸಂಚಾಲಕ ಗಂಗಾಧರ ಕರಿಕೆರೆ ಅವರ ಮಾತು.</p>.<p>2000ರಲ್ಲಿ ಕಟ್ಟಿದ ಸಮಷ್ಟಿ ತಂಡದಲ್ಲಿ ಈಗ ನೂರಕ್ಕೂ ಹೆಚ್ಚು ಹವ್ಯಾಸಿ ರಂಗಕಲಾವಿದರಿದ್ದಾರೆ. ಜನಖ್ಯಾತಿ ಪಡೆದ ನಾಟಕಪಠ್ಯಗಳನ್ನು ಬಿಟ್ಟು, ಅಪರೂಪದ ಕಥಾಹಂದರದ ಅಪ್ಪಟ ಮನರಂಜನಾತ್ಮಕ ರೂಪಕಗಳನ್ನು ಪ್ರದರ್ಶನಕ್ಕೆ ಅಣಿ ಮಾಡುವುದು ಈ ಹವ್ಯಾಸಿ ತಂಡದ ಹವ್ಯಾಸವಾಗಿದೆ. ‘ಸಂದೇಶಕ್ಕಿಂದ ಹಾಸ್ಯಕ್ಕೆ ನಮ್ಮ ಆದ್ಯತೆ’ ಎಂಬುದು ನಿರ್ದೇಶಕರ ನುಡಿ.</p>.<p>‘ಮೀಸ್ ಸುಧಾರಮೆ’, ‘ನೀರು ಕುಡಿಸಿದ ನೀರೆಯರು’ ನಾಟಕಗಳಿಂದ ಪ್ರೇಕ್ಷಕರನ್ನು ನಗಿಸಿ ಹಗುರಾಗಿಸಿದ ಈ ತಂಡ ಈಗ ಬ್ರಿಟಿಷ್ ಕಾಲದ ಪರಿಸ್ಥಿತಿ, ಅಂದಿನ ಅಧಿಕಾರಿಗಳ ಮನಸ್ಥಿತಿ, ಚಳವಳಿಗಾರರ ದುಸ್ಥಿತಿಯನ್ನು ಎರಡು ಗಂಟೆಗಳ ಹಾಸ್ಯದ ಮೂಲಕ ಪ್ರಸ್ತುತ ಪಡಿಸಲಿದೆ.</p>.<p>ಪರೇಶ ಮೊಕಾಶಿ ಮರಾಠಿಯಲ್ಲಿ ರಚಿಸಿದ್ದ ಈ ನಾಟಕವನ್ನು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಕೆ.ಆರ್.ಓಂಕಾರ್ ಕನ್ನಡಿಕರಣ ಮಾಡಿದ್ದಾರೆ. ಇದನ್ನು ನಿನಾಸಂ ತಂಡ ಏಳು ವರ್ಷಗಳ ಹಿಂದೆ ವರ್ಷದ ತಿರುಗಾಟದ ನಾಟಕವಾಗಿ ಪ್ರದರ್ಶಿಸಿತ್ತು.</p>.<p>**</p>.<p><strong>ನಾಟಕದ ಕುರಿತು</strong></p>.<p><strong>* ನಾಟಕ:</strong> ಮುಕ್ಕಾಮ್ಪೋಸ್ಟ್ ಬೊಂಬಿಲ್ ವಾಡಿ</p>.<p><strong>* ತಂಡ:</strong> ಸಮಷ್ಟಿ</p>.<p><strong>* ರಚನೆ: </strong>ಪರೇಶ ಮೊಕಾಶಿ (ಮೂಲ–ಮರಾಠಿ) ಕನ್ನಡಕ್ಕೆ–ಕೆ.ಆರ್.ಓಂಕಾರ್</p>.<p><strong>* ನಿರ್ದೇಶನ: </strong>ರವೀಂದ್ರ ಪೂಜಾರಿ</p>.<p><strong>* ಪ್ರದರ್ಶನ ದಿನ: </strong>ಜನವರಿ 8</p>.<p><strong>* ಸಮಯ: </strong>ಸಂಜೆ 7</p>.<p><strong>* ಸ್ಥಳ: </strong>ಕಲಾಗ್ರಾಮ, ಮಲ್ಲತ್ತಹಳ್ಳಿ</p>.<p><strong>* ಟಿಕೆಟ್: </strong>www.bookmyshow.com (₹ 70)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1942ರಲ್ಲಿ ನಮ್ಮ ದೇಶದ ಮತ್ತು ಜಾಗತಿಕ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ಇತಿಹಾಸದ ಪುಟಗಳಲ್ಲಿ ಸಾಕಷ್ಟು ಮಾಹಿತಿ ಸಿಗುತ್ತದೆ. ಆದರೆ ಆ ಕಾಲದ ಸನ್ನಿವೇಶಗಳನ್ನು ಹಾಸ್ಯಮಯವಾಗಿ ರಂಗದ ಮೇಲೆ ತಂದರೆ ಹೇಗಿರುತ್ತದೆ? ಅಂತಹ ಪ್ರಯತ್ನವನ್ನು ಸಮಷ್ಟಿ ರಂಗತಂಡ ಮಾಡುತ್ತಿದೆ. ಈ ತಂಡ ನಿರೂಪಿಸುತ್ತಿರುವ ‘ಮುಕ್ಕಾಮ್ಪೋಸ್ಟ್ ಬೊಂಬಿಲ್ ವಾಡಿ’ ರಂಗರೂಪಕ ‘ನಾಟಕ ಬೆಂಗ್ಳೂರು’ ದಶಮಾನೋತ್ಸವ ಸಂಭ್ರಮದಲ್ಲಿ ಪ್ರದರ್ಶನಗೊಳ್ಳುತ್ತಿದೆ.</p>.<p>‘ದೇಶದಲ್ಲಿ 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿ ಮತ್ತು ಜಗತ್ತಿನಲ್ಲಿ ಎರಡನೆ ಮಹಾಯುದ್ಧದ ಪರ್ವಕಾಲ. ಅಂದಿನ ಕಾಲದ ರಂಗತಂಡವೊಂದು ನಾಟಕದ ತಾಲೀಮು ಮಾಡುತ್ತಿರುತ್ತದೆ. ಆ ತಂಡದ ಮೇಲೆ ಸ್ವಾತಂತ್ರ್ಯ ಚಳವಳಿ ಪ್ರಭಾವ ಬೀರುತ್ತದೆ. ಅದರಿಂದಾಗಿ ರಂಗಕಲಾವಿದರು ಬ್ರಿಟಿಷ್ ಪೊಲೀಸ್ ಚೌಕಿ ಮೇಲೆ ಧ್ವಜಾರೋಹಣ ಮಾಡಲು ಮುಂದಾಗುತ್ತಾರೆ. ಅದಕ್ಕಾಗಿ ಅವರು ಪಡುವ ಪರಿಪಾಟಲು ಹಾಸ್ಯ ರೂಪದಲ್ಲಿ ನಿರೂಪಿತವಾಗಿದೆ’ ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪೂಜಾರಿ.</p>.<p>‘ಹಿಟ್ಲರ್ ಮತ್ತು ಅವನ ಆಪ್ತ ಗೊಬೆಲ್ನ ಹಾಸ್ಯಮಯ ಸಂಭಾಷಣೆಗಳು ಉತ್ತರ ಕರ್ನಾಟಕದ ಭಾಷೆಯಲ್ಲಿ ಈ ನಾಟಕದಲ್ಲಿವೆ. ಅಂದಿನ ಕಾಲಕ್ಕೆ ಕ್ರಿಕೆಟ್ ಬಗ್ಗೆ ಜನರ ಅಭಿಪ್ರಾಯಗಳು, ವ್ಯಕ್ತಿಯೊಬ್ಬ ಹೆಸರು ಬದಲಾಯಿಸಲು ಪಡುವ ಬವಣೆ ಇದರಲ್ಲಿ ನಗೆಯಾಗಿ ಮೂಡಿದೆ. ಊಹಿಸಲಾಗದಷ್ಟು ವ್ಯಂಗ್ಯದ ಸಂಭಾಷಣೆಗಳು ಇವೆ’ ಎಂಬುದು ಸಮಷ್ಟಿ ಸಂಚಾಲಕ ಗಂಗಾಧರ ಕರಿಕೆರೆ ಅವರ ಮಾತು.</p>.<p>2000ರಲ್ಲಿ ಕಟ್ಟಿದ ಸಮಷ್ಟಿ ತಂಡದಲ್ಲಿ ಈಗ ನೂರಕ್ಕೂ ಹೆಚ್ಚು ಹವ್ಯಾಸಿ ರಂಗಕಲಾವಿದರಿದ್ದಾರೆ. ಜನಖ್ಯಾತಿ ಪಡೆದ ನಾಟಕಪಠ್ಯಗಳನ್ನು ಬಿಟ್ಟು, ಅಪರೂಪದ ಕಥಾಹಂದರದ ಅಪ್ಪಟ ಮನರಂಜನಾತ್ಮಕ ರೂಪಕಗಳನ್ನು ಪ್ರದರ್ಶನಕ್ಕೆ ಅಣಿ ಮಾಡುವುದು ಈ ಹವ್ಯಾಸಿ ತಂಡದ ಹವ್ಯಾಸವಾಗಿದೆ. ‘ಸಂದೇಶಕ್ಕಿಂದ ಹಾಸ್ಯಕ್ಕೆ ನಮ್ಮ ಆದ್ಯತೆ’ ಎಂಬುದು ನಿರ್ದೇಶಕರ ನುಡಿ.</p>.<p>‘ಮೀಸ್ ಸುಧಾರಮೆ’, ‘ನೀರು ಕುಡಿಸಿದ ನೀರೆಯರು’ ನಾಟಕಗಳಿಂದ ಪ್ರೇಕ್ಷಕರನ್ನು ನಗಿಸಿ ಹಗುರಾಗಿಸಿದ ಈ ತಂಡ ಈಗ ಬ್ರಿಟಿಷ್ ಕಾಲದ ಪರಿಸ್ಥಿತಿ, ಅಂದಿನ ಅಧಿಕಾರಿಗಳ ಮನಸ್ಥಿತಿ, ಚಳವಳಿಗಾರರ ದುಸ್ಥಿತಿಯನ್ನು ಎರಡು ಗಂಟೆಗಳ ಹಾಸ್ಯದ ಮೂಲಕ ಪ್ರಸ್ತುತ ಪಡಿಸಲಿದೆ.</p>.<p>ಪರೇಶ ಮೊಕಾಶಿ ಮರಾಠಿಯಲ್ಲಿ ರಚಿಸಿದ್ದ ಈ ನಾಟಕವನ್ನು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಕೆ.ಆರ್.ಓಂಕಾರ್ ಕನ್ನಡಿಕರಣ ಮಾಡಿದ್ದಾರೆ. ಇದನ್ನು ನಿನಾಸಂ ತಂಡ ಏಳು ವರ್ಷಗಳ ಹಿಂದೆ ವರ್ಷದ ತಿರುಗಾಟದ ನಾಟಕವಾಗಿ ಪ್ರದರ್ಶಿಸಿತ್ತು.</p>.<p>**</p>.<p><strong>ನಾಟಕದ ಕುರಿತು</strong></p>.<p><strong>* ನಾಟಕ:</strong> ಮುಕ್ಕಾಮ್ಪೋಸ್ಟ್ ಬೊಂಬಿಲ್ ವಾಡಿ</p>.<p><strong>* ತಂಡ:</strong> ಸಮಷ್ಟಿ</p>.<p><strong>* ರಚನೆ: </strong>ಪರೇಶ ಮೊಕಾಶಿ (ಮೂಲ–ಮರಾಠಿ) ಕನ್ನಡಕ್ಕೆ–ಕೆ.ಆರ್.ಓಂಕಾರ್</p>.<p><strong>* ನಿರ್ದೇಶನ: </strong>ರವೀಂದ್ರ ಪೂಜಾರಿ</p>.<p><strong>* ಪ್ರದರ್ಶನ ದಿನ: </strong>ಜನವರಿ 8</p>.<p><strong>* ಸಮಯ: </strong>ಸಂಜೆ 7</p>.<p><strong>* ಸ್ಥಳ: </strong>ಕಲಾಗ್ರಾಮ, ಮಲ್ಲತ್ತಹಳ್ಳಿ</p>.<p><strong>* ಟಿಕೆಟ್: </strong>www.bookmyshow.com (₹ 70)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>