<p>ದೇಶದ ಅಪರೂಪದ ಕರೆನ್ಸಿಗಳ ಶ್ರೀಮಂತ ಇತಿಹಾಸ ಮತ್ತು ಪಯಣವನ್ನು ಬಿಂಬಿಸುವ ದಕ್ಷಿಣ ಭಾರತದ ಮೊದಲ ಕರೆನ್ಸಿ ಮ್ಯೂಸಿಯಂ 'ರೆಜ್ವಾನ್ ರಜಾಕ್ಸ್ ಮ್ಯೂಸಿಯಂ ಆಫ್ ಇಂಡಿಯನ್ ಪೇಪರ್ ಮನಿ' ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.</p>.<p>ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮಾಜಿ ಗವರ್ನರ್ ಡಾ.ಸಿ.ರಂಗರಾಜನ್ ಶನಿವಾರ ಮ್ಯೂಸಿಯಂ ಲೋಕಾರ್ಪಣೆ ಮಾಡಿದರು.</p>.<p>ಈ ಮ್ಯೂಸಿಯಂ ಪ್ರೆಸ್ಟೀಜ್ ಗ್ರೂಪ್ ಸಹ-ಸಂಸ್ಥಾಪಕ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರೆಜ್ವಾನ್ ರಜಾಕ್ ಅವರ ಕನಸಿನ ಕೂಸು. ಭಾರತದ ಕಾಗದ ಹಣದ ದೊಡ್ಡ ಸಂಗ್ರಹಾಕಾರರಾಗಿರುವ ಅವರು 50 ವರ್ಷಗಳಿಂದ ಜತನದಿಂದ ಸಂಗ್ರಹಿಸಿದ ಅಪರೂಪದ ಕರೆನ್ಸಿಗಳನ್ನು ಇಲ್ಲಿ ನೋಡಬಹುದು.</p>.<p>ಪ್ರೆಸ್ಟೀಜ್ ಫಾಲ್ಕನ್ ಟವರ್ಸ್ನ 2 ನೇ ಮಹಡಿಯಲ್ಲಿರುವ ಮ್ಯೂಸಿಯಂ ಮಂಗಳವಾರದಿಂದ (ಫೆ. 18) ಸಾರ್ವಜನಿಕರಿಗೆ ಆರಂಭವಾಗಲಿದೆ.ಜನರಿಗೆ ಮಾಹಿತಿ ನೀಡಲು ಮಾರ್ಗದರ್ಶಿಗಳನ್ನು ಕೂಡ ನೇಮಕ ಮಾಡಲಾಗಿದೆ.</p>.<p>ಪ್ರತಿ ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5.30ರವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಮ್ಯೂಸಿಯಂ ತೆರೆದಿರುತ್ತದೆ. ಸೋಮವಾರ ರಜಾ ದಿನ.</p>.<p class="Briefhead">ನೋಟುಗಳ ಪುಸ್ತಕ</p>.<p>ಭಾರತೀಯ ಕಾಗದ ಹಣದ ಬೈಬಲ್ ಎಂದು ಪರಿಗಣಿಸಲಾದ‘ದಿ ರಿವೈಸ್ಡ್ ಸ್ಟ್ಯಾಂಡರ್ಡ್ ರೆಫರೆನ್ಸ್ ಗೈಡ್ ಟು ಇಂಡಿಯನ್ ಪೇಪರ್ ಮನಿ’ ಎಂಬ ಪುಸ್ತಕವನ್ನು ಕೂಡಾ ಅವರು ರಚಿಸಿದ್ದಾರೆ. 2012 ರಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.</p>.<p>ಒಂದು ರೂಪಾಯಿ ನೋಟಿನ 100ನೇ ವಾರ್ಷಿಕೋತ್ಸವದ ನೆನಪಿಗಾಗಿ 2017 ರಲ್ಲಿ ರೆಜ್ವಾನ್ ತಮ್ಮ ಎರಡನೇ ಪುಸ್ತಕ ‘ಒಂದು ರೂಪಾಯಿ - ನೂರು ವರ್ಷ 1917-2017’ ಹೊರ ತಂದಿದ್ದಾರೆ.</p>.<p class="Briefhead">ನಮ್ಮ ಅಸ್ತಿತ್ವವೂ ಬೆಸೆದುಕೊಂಡಿದೆ: ರೆಜ್ವಾಕ್</p>.<p>‘ನಮ್ಮ ಅಸ್ತಿತ್ವದೊಂದಿಗೆ ಹಣದ ಕತೆಯೂ ಬೆಸೆದುಕೊಂಡಿದೆ. ಹಣ ನಮ್ಮನ್ನು ಒಂದುಗೂಡಿಸುತ್ತದೆ, ವಿಭಜಿಸುತ್ತದೆ ಮತ್ತು ನಮಗೆ ಅಸ್ತಿತ್ವ, ಗುರುತಿನ ಪ್ರಜ್ಞೆ ನೀಡುತ್ತದೆ’ ಎನ್ನುತ್ತಾರೆ ರೆಜ್ವಾಕ್ ರಜಾಕ್.</p>.<p>‘ಭಾರತದಕರೆನ್ಸಿ ಪ್ರಯಾಣದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಜನರಿಗೆ ತಿಳಿಸುವ ಪ್ರಯತ್ನದ ಫಲವೇ ಈ ಮ್ಯೂಸಿಯಂ. ಮ್ಯೂಸಿಯಂ ಸ್ಥಾಪನೆ ನನ್ನ ಬಹಳ ದಿನಗಳ ಕನಸು. ಇಂದು ನನಸಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.</p>.<p>‘ಇದು ಒಂದು ಪ್ರಮುಖ ರಾಷ್ಟ್ರೀಯ ಪರಂಪರೆಯ ಸಮಗ್ರ ಪುನರ್ ಸ್ಥಾಪನೆ ಮತ್ತು ಸಂರಕ್ಷಣೆ ಎಂದು ನಾನು ಭಾವಿಸುತ್ತೇನೆ. ನಾಣ್ಯಶಾಸ್ತ್ರಜ್ಞರು, ವಿದ್ಯಾರ್ಥಿಗಳು ಮತ್ತು ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತರಿಗೆ ಇದರ ಪ್ರಯೋಜನವಾಗಲಿದೆ’ ಎನ್ನುವುದು ರೆಜ್ವಾಕ್ ಅವರ ಅಭಿಪ್ರಾಯ.</p>.<p>‘ಈ ಕನಸನ್ನು ನನಸಾಗಿಸಲು ಸಾಧ್ಯವಾಗಿದ್ದಕ್ಕೆ ಎಂದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ರಾಷ್ಟ್ರೀಯ ಹೆಮ್ಮೆಯ ಈ ವಸ್ತುಸಂಗ್ರಹಾಲಯದ ಉದ್ದೇಶವನ್ನು ಸಂದರ್ಶಕರು ಅರ್ಥಮಾಡಿಕೊಳ್ಳುತ್ತಾರೆ, ಆನಂದಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶದ ಅಪರೂಪದ ಕರೆನ್ಸಿಗಳ ಶ್ರೀಮಂತ ಇತಿಹಾಸ ಮತ್ತು ಪಯಣವನ್ನು ಬಿಂಬಿಸುವ ದಕ್ಷಿಣ ಭಾರತದ ಮೊದಲ ಕರೆನ್ಸಿ ಮ್ಯೂಸಿಯಂ 'ರೆಜ್ವಾನ್ ರಜಾಕ್ಸ್ ಮ್ಯೂಸಿಯಂ ಆಫ್ ಇಂಡಿಯನ್ ಪೇಪರ್ ಮನಿ' ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.</p>.<p>ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮಾಜಿ ಗವರ್ನರ್ ಡಾ.ಸಿ.ರಂಗರಾಜನ್ ಶನಿವಾರ ಮ್ಯೂಸಿಯಂ ಲೋಕಾರ್ಪಣೆ ಮಾಡಿದರು.</p>.<p>ಈ ಮ್ಯೂಸಿಯಂ ಪ್ರೆಸ್ಟೀಜ್ ಗ್ರೂಪ್ ಸಹ-ಸಂಸ್ಥಾಪಕ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರೆಜ್ವಾನ್ ರಜಾಕ್ ಅವರ ಕನಸಿನ ಕೂಸು. ಭಾರತದ ಕಾಗದ ಹಣದ ದೊಡ್ಡ ಸಂಗ್ರಹಾಕಾರರಾಗಿರುವ ಅವರು 50 ವರ್ಷಗಳಿಂದ ಜತನದಿಂದ ಸಂಗ್ರಹಿಸಿದ ಅಪರೂಪದ ಕರೆನ್ಸಿಗಳನ್ನು ಇಲ್ಲಿ ನೋಡಬಹುದು.</p>.<p>ಪ್ರೆಸ್ಟೀಜ್ ಫಾಲ್ಕನ್ ಟವರ್ಸ್ನ 2 ನೇ ಮಹಡಿಯಲ್ಲಿರುವ ಮ್ಯೂಸಿಯಂ ಮಂಗಳವಾರದಿಂದ (ಫೆ. 18) ಸಾರ್ವಜನಿಕರಿಗೆ ಆರಂಭವಾಗಲಿದೆ.ಜನರಿಗೆ ಮಾಹಿತಿ ನೀಡಲು ಮಾರ್ಗದರ್ಶಿಗಳನ್ನು ಕೂಡ ನೇಮಕ ಮಾಡಲಾಗಿದೆ.</p>.<p>ಪ್ರತಿ ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5.30ರವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಮ್ಯೂಸಿಯಂ ತೆರೆದಿರುತ್ತದೆ. ಸೋಮವಾರ ರಜಾ ದಿನ.</p>.<p class="Briefhead">ನೋಟುಗಳ ಪುಸ್ತಕ</p>.<p>ಭಾರತೀಯ ಕಾಗದ ಹಣದ ಬೈಬಲ್ ಎಂದು ಪರಿಗಣಿಸಲಾದ‘ದಿ ರಿವೈಸ್ಡ್ ಸ್ಟ್ಯಾಂಡರ್ಡ್ ರೆಫರೆನ್ಸ್ ಗೈಡ್ ಟು ಇಂಡಿಯನ್ ಪೇಪರ್ ಮನಿ’ ಎಂಬ ಪುಸ್ತಕವನ್ನು ಕೂಡಾ ಅವರು ರಚಿಸಿದ್ದಾರೆ. 2012 ರಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.</p>.<p>ಒಂದು ರೂಪಾಯಿ ನೋಟಿನ 100ನೇ ವಾರ್ಷಿಕೋತ್ಸವದ ನೆನಪಿಗಾಗಿ 2017 ರಲ್ಲಿ ರೆಜ್ವಾನ್ ತಮ್ಮ ಎರಡನೇ ಪುಸ್ತಕ ‘ಒಂದು ರೂಪಾಯಿ - ನೂರು ವರ್ಷ 1917-2017’ ಹೊರ ತಂದಿದ್ದಾರೆ.</p>.<p class="Briefhead">ನಮ್ಮ ಅಸ್ತಿತ್ವವೂ ಬೆಸೆದುಕೊಂಡಿದೆ: ರೆಜ್ವಾಕ್</p>.<p>‘ನಮ್ಮ ಅಸ್ತಿತ್ವದೊಂದಿಗೆ ಹಣದ ಕತೆಯೂ ಬೆಸೆದುಕೊಂಡಿದೆ. ಹಣ ನಮ್ಮನ್ನು ಒಂದುಗೂಡಿಸುತ್ತದೆ, ವಿಭಜಿಸುತ್ತದೆ ಮತ್ತು ನಮಗೆ ಅಸ್ತಿತ್ವ, ಗುರುತಿನ ಪ್ರಜ್ಞೆ ನೀಡುತ್ತದೆ’ ಎನ್ನುತ್ತಾರೆ ರೆಜ್ವಾಕ್ ರಜಾಕ್.</p>.<p>‘ಭಾರತದಕರೆನ್ಸಿ ಪ್ರಯಾಣದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಜನರಿಗೆ ತಿಳಿಸುವ ಪ್ರಯತ್ನದ ಫಲವೇ ಈ ಮ್ಯೂಸಿಯಂ. ಮ್ಯೂಸಿಯಂ ಸ್ಥಾಪನೆ ನನ್ನ ಬಹಳ ದಿನಗಳ ಕನಸು. ಇಂದು ನನಸಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.</p>.<p>‘ಇದು ಒಂದು ಪ್ರಮುಖ ರಾಷ್ಟ್ರೀಯ ಪರಂಪರೆಯ ಸಮಗ್ರ ಪುನರ್ ಸ್ಥಾಪನೆ ಮತ್ತು ಸಂರಕ್ಷಣೆ ಎಂದು ನಾನು ಭಾವಿಸುತ್ತೇನೆ. ನಾಣ್ಯಶಾಸ್ತ್ರಜ್ಞರು, ವಿದ್ಯಾರ್ಥಿಗಳು ಮತ್ತು ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತರಿಗೆ ಇದರ ಪ್ರಯೋಜನವಾಗಲಿದೆ’ ಎನ್ನುವುದು ರೆಜ್ವಾಕ್ ಅವರ ಅಭಿಪ್ರಾಯ.</p>.<p>‘ಈ ಕನಸನ್ನು ನನಸಾಗಿಸಲು ಸಾಧ್ಯವಾಗಿದ್ದಕ್ಕೆ ಎಂದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ರಾಷ್ಟ್ರೀಯ ಹೆಮ್ಮೆಯ ಈ ವಸ್ತುಸಂಗ್ರಹಾಲಯದ ಉದ್ದೇಶವನ್ನು ಸಂದರ್ಶಕರು ಅರ್ಥಮಾಡಿಕೊಳ್ಳುತ್ತಾರೆ, ಆನಂದಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>