<p>ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ಐಬಿಎಸ್ ಅಲುಮ್ನಿ ಫೆಡರೇಷನ್ (ಐಬಿಎಸ್ಎಎಫ್) ಈ ಸಲ ಬೋಧನಾ ವಿಭಾಗದಲ್ಲಿ ಅಧ್ಯಾಪಕ ಪ್ರೊ.ಆರ್. ಹರೀಶ್ ಮತ್ತು ಸಮರ್ ಇಂಟರ್ನ್ಶಿಪ್ ಪ್ರಾಜೆಕ್ಟ್ನಲ್ಲಿ ವಿದ್ಯಾರ್ಥಿಗಳಾದ ರಾಬಿನ್ ಜೋಸೆಫ್ ಹಾಗೂ ಅನುರ್ಗಾ ಸೊಯಿನ್ ಅವರಿಗೆ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಿತು. <br /> <br /> ಬೋಧನಾ ಪ್ರಶಸ್ತಿ 1 ಲಕ್ಷ ರೂ. ನಗದು ಮತ್ತು ಸನ್ಮಾನ ಪತ್ರ, ಎಸ್ಐ ಪ್ರಶಸ್ತಿ 10 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿದೆ. <br /> <br /> ಕನಕಪುರ ರಸ್ತೆಯಲ್ಲಿನ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಕಾಲೇಜು ಐಬಿಎಸ್ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ರವಿ ವಾರಿಯರ್ ಪ್ರಶಸ್ತಿ ಪ್ರದಾನ ಮಾಡಿದರು. ಐಬಿಎಸ್ ಬೆಂಗಳೂರಿನ ಹಳೆಯ ವಿದ್ಯಾರ್ಥಿಗಳಾದ ರೈಟ್ ಹೊರೈಜನ್ಸ್ ಸಂಸ್ಥಾಪಕ ಅನಿಲ್ ರೇಗೊ, ಫಿನಾಕಲ್ ಸಿಇಒ ಸಿದ್ಧಾರ್ಥ ನಾಯರ್ ಹಾಜರಿದ್ದರು. <br /> <br /> ಉತ್ತಮ ಬೋಧನೆ ಮತ್ತು ಉತ್ತಮ ಕಲಿಕೆಗೆ ಪ್ರೇರಣೆ ನೀಡುವುದೇ ಐಬಿಎಸ್ನ ಧ್ಯೇಯ ಎಂದು ಬೆಂಗಳೂರು ಕೇಂದ್ರದ ನಿರ್ದೇಶಕಿ ಡಾ.ಲತಾ ಚಕ್ರವರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ಐಬಿಎಸ್ ಅಲುಮ್ನಿ ಫೆಡರೇಷನ್ (ಐಬಿಎಸ್ಎಎಫ್) ಈ ಸಲ ಬೋಧನಾ ವಿಭಾಗದಲ್ಲಿ ಅಧ್ಯಾಪಕ ಪ್ರೊ.ಆರ್. ಹರೀಶ್ ಮತ್ತು ಸಮರ್ ಇಂಟರ್ನ್ಶಿಪ್ ಪ್ರಾಜೆಕ್ಟ್ನಲ್ಲಿ ವಿದ್ಯಾರ್ಥಿಗಳಾದ ರಾಬಿನ್ ಜೋಸೆಫ್ ಹಾಗೂ ಅನುರ್ಗಾ ಸೊಯಿನ್ ಅವರಿಗೆ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಿತು. <br /> <br /> ಬೋಧನಾ ಪ್ರಶಸ್ತಿ 1 ಲಕ್ಷ ರೂ. ನಗದು ಮತ್ತು ಸನ್ಮಾನ ಪತ್ರ, ಎಸ್ಐ ಪ್ರಶಸ್ತಿ 10 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿದೆ. <br /> <br /> ಕನಕಪುರ ರಸ್ತೆಯಲ್ಲಿನ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಕಾಲೇಜು ಐಬಿಎಸ್ ಕ್ಯಾಂಪಸ್ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿ ರವಿ ವಾರಿಯರ್ ಪ್ರಶಸ್ತಿ ಪ್ರದಾನ ಮಾಡಿದರು. ಐಬಿಎಸ್ ಬೆಂಗಳೂರಿನ ಹಳೆಯ ವಿದ್ಯಾರ್ಥಿಗಳಾದ ರೈಟ್ ಹೊರೈಜನ್ಸ್ ಸಂಸ್ಥಾಪಕ ಅನಿಲ್ ರೇಗೊ, ಫಿನಾಕಲ್ ಸಿಇಒ ಸಿದ್ಧಾರ್ಥ ನಾಯರ್ ಹಾಜರಿದ್ದರು. <br /> <br /> ಉತ್ತಮ ಬೋಧನೆ ಮತ್ತು ಉತ್ತಮ ಕಲಿಕೆಗೆ ಪ್ರೇರಣೆ ನೀಡುವುದೇ ಐಬಿಎಸ್ನ ಧ್ಯೇಯ ಎಂದು ಬೆಂಗಳೂರು ಕೇಂದ್ರದ ನಿರ್ದೇಶಕಿ ಡಾ.ಲತಾ ಚಕ್ರವರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>