<p>`ಕ್ರಿಕೆಟ್ ಅಂದರೆ ಇಷ್ಟ; ಆದರೆ ಸಿನಿಮಾ ಮಾತ್ರ ಬಹಳ ಕಷ್ಟ~... ಹೀಗೆಂದು ಹೇಳಿದ್ದು ನಟ, ನಿರ್ಮಾಪಕ ಕಿಚ್ಚ ಸುದೀಪ್. ಇವರು ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ನಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ. <br /> <br /> ಮೊದಲ ಸೆಲೆಬ್ರೆಟಿ ಕ್ರಿಕೆಟ್ ಲೀಗ್ನಲ್ಲಿ ಅವರ ತಂಡ ಸತತ ಎರಡು ಪಂದ್ಯಗಳಲ್ಲಿ ಜಯಗಳಿಸಿ ಲೀಗ್ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಖುಷಿ, ಅನುಭವ ಹಂಚಿಕೊಳ್ಳಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ `ನೀವು ಸಿನಿಮಾನೂ ಮಾಡಿದ್ದೀರಿ; ಕ್ರಿಕೆಟ್ ಕೂಡ ಆಡಿದ್ದೀರಿ. ಈ ಎರಡರಲ್ಲಿ ಯಾವುದು ಸುಲಭ~ ಎಂಬ ಪ್ರಶ್ನೆ ಎದುರಾದಾಗ ಪ್ರತಿಕ್ರಿಯಿಸಿದ್ದು ಹೀಗೆ.<br /> <br /> `ನಾನು ಅನೇಕ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಮಾ ನಿರ್ಮಿಸಿದ್ದೇನೆ. ಆದರೆ ಯಾವುದೇ ಸಿನಿಮಾ ಯಾಕೆ ಸೋಲುತ್ತದೆ, ಯಾಕೆ ಯಶಸ್ವಿಯಾಗುತ್ತದೆ ಎಂಬುದು ನನಗಂತೂ ಇದುವರೆಗೂ ಗೊತ್ತಾಗಿಲ್ಲ~. ಇದು ಅವರು ಕೊಟ್ಟ ಕಾರಣ.<br /> <br /> ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ದಿನ ಸುನೀಲ್ ಶೆಟ್ಟಿ ನಾಯಕತ್ವದ ಮುಂಬೈ ಹೀರೋಸ್ ವಿರುದ್ಧ ನಡೆದ ಪಂದ್ಯದಲ್ಲಿ ಹಾಗೂ ಚೆನ್ನೈನಲ್ಲಿ ನಡೆದ ಕಾಲಿವುಡ್ ಜತೆಗಿನ ಪಂದ್ಯದಲ್ಲಿ ಕರ್ನಾಟಕ ತಂಡ ಜಯಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. <br /> <br /> ಇನ್ನೇನು ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ಹಾದಿ ಸುಗಮವಾಗಿದೆ.<br /> `ಸಿನಿಮಾ ಮಂದಿಯ ಕ್ರಿಕೆಟನ್ನು ಅಭಿಮಾನಿಗಳು, ಕ್ರೀಡಾಸಕ್ತರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಅಳುಕು ನಮ್ಮಲ್ಲಿ ಮೂಡಿತ್ತು.<br /> <br /> ಜತೆಗೆ ಸಹಸ್ರಾರು ಕಂಗಳ ನಿರೀಕ್ಷೆ ಬೇರೆ. ಹಾಗಾಗಿ ನಮ್ಮ ನೆಲದಲ್ಲಿ ಭಯದಿಂದಲೇ ಆಡಿದೆವು. ಆದರೆ ಪ್ರೇಕ್ಷಕರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಉದ್ಯಮದ ಮಂದಿಯೂ ಬೆನ್ನು ತಟ್ಟಿದ್ದಾರೆ. ಅದಕ್ಕಾಗಿ ಅವರಿಗೆಲ್ಲ ಕೃತಜ್ಞತೆ~ ಎನ್ನುವಾಗ ಅವರು ಭಾವುಕರಾಗಿದ್ದರು.<br /> <br /> `ಸಿನಿಮಾದಲ್ಲಿ ಹೀರೋ ಆಗದವರೂ ಚೆನ್ನಾಗಿ ಆಡಿದರೆ ಕ್ರಿಕೆಟ್ ಕ್ಷೇತ್ರದಲ್ಲಿ ಹೀರೋ ಆಗಬಹುದು. ನಮ್ಮ ಹುಡುಗರಂತೂ ಹಗಲು ರಾತ್ರಿ ಎನ್ನದೇ ಅಭ್ಯಾಸ ಮಾಡಿ ಆಟವಾಡಿದ್ದಾರೆ. ಹಾಗಾಗಿ ಎರಡು ಪಂದ್ಯಗಳಲ್ಲಿ ಜಯಗಳಿಸಲು ಸಾಧ್ಯವಾಯಿತು~ ಎಂದರು.<br /> <br /> ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿದ ಅನುಭವ ಈಗ ಉಪಯೋಗಕ್ಕೆ ಬಂದಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸುವ ಸವಾಲೂ ಇತ್ತು ಎಂದು ಆ ಒತ್ತಡವನ್ನು ನೆನಪು ಮಾಡಿಕೊಂಡರು. ಎರಡೂ ಪಂದ್ಯದ ಜಯದಲ್ಲಿ ಪಾಲುದಾರರಾದ ಸಹ ಆಟಗಾರರು, ತಂಡದ ವೈದ್ಯ, ಕೋಚ್ ಸಹಾಯವನ್ನು ಸ್ಮರಿಸಲು ಮರೆಯಲಿಲ್ಲ.<br /> <br /> ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳೆರಡರ ಮಧ್ಯೆ ಆಯ್ಕೆ ವಿಷಯ ಬಂದಾಗ ಸಿನಿಮಾ ಕ್ಷೇತ್ರವೇ ನೆಚ್ಚಿನ ಕ್ಷೇತ್ರ ಎನ್ನುವುದನ್ನು ಮರೆಯಲಿಲ್ಲ. ಅಶೋಕ್ ಖೇಣಿ ಮಾಲೀಕತ್ವದ ತಂಡ ಲೀಗ್ ಹಂತಕ್ಕೆ ತಲುಪಿದ್ದು, ಜೂನ್12ರಂದು ಹೈದರಾಬಾದ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. <br /> <br /> ಒಟ್ಟಾರೆ ಮೇಕಪ್ ಮಾಡಿಕೊಂಡು ಸ್ಕ್ರೀನ್ ಮೇಲೆ ಹೀರೋ ಆಗುವ ನಟರು, ಮೈದಾನದಲ್ಲಿ ಬೆವರು ಸುರಿಸಿ ರಿಯಲ್ ಹೀರೋಗಳಾಗಲು ಹೊರಟಿದ್ದಾರೆ. ಫೈನಲ್ಸ್ನಲ್ಲೂ ಗೆಲ್ಲುವ ಉಮೇದಿನಲ್ಲಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಕ್ರಿಕೆಟ್ ಅಂದರೆ ಇಷ್ಟ; ಆದರೆ ಸಿನಿಮಾ ಮಾತ್ರ ಬಹಳ ಕಷ್ಟ~... ಹೀಗೆಂದು ಹೇಳಿದ್ದು ನಟ, ನಿರ್ಮಾಪಕ ಕಿಚ್ಚ ಸುದೀಪ್. ಇವರು ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ನಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ. <br /> <br /> ಮೊದಲ ಸೆಲೆಬ್ರೆಟಿ ಕ್ರಿಕೆಟ್ ಲೀಗ್ನಲ್ಲಿ ಅವರ ತಂಡ ಸತತ ಎರಡು ಪಂದ್ಯಗಳಲ್ಲಿ ಜಯಗಳಿಸಿ ಲೀಗ್ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಖುಷಿ, ಅನುಭವ ಹಂಚಿಕೊಳ್ಳಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ `ನೀವು ಸಿನಿಮಾನೂ ಮಾಡಿದ್ದೀರಿ; ಕ್ರಿಕೆಟ್ ಕೂಡ ಆಡಿದ್ದೀರಿ. ಈ ಎರಡರಲ್ಲಿ ಯಾವುದು ಸುಲಭ~ ಎಂಬ ಪ್ರಶ್ನೆ ಎದುರಾದಾಗ ಪ್ರತಿಕ್ರಿಯಿಸಿದ್ದು ಹೀಗೆ.<br /> <br /> `ನಾನು ಅನೇಕ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಮಾ ನಿರ್ಮಿಸಿದ್ದೇನೆ. ಆದರೆ ಯಾವುದೇ ಸಿನಿಮಾ ಯಾಕೆ ಸೋಲುತ್ತದೆ, ಯಾಕೆ ಯಶಸ್ವಿಯಾಗುತ್ತದೆ ಎಂಬುದು ನನಗಂತೂ ಇದುವರೆಗೂ ಗೊತ್ತಾಗಿಲ್ಲ~. ಇದು ಅವರು ಕೊಟ್ಟ ಕಾರಣ.<br /> <br /> ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ದಿನ ಸುನೀಲ್ ಶೆಟ್ಟಿ ನಾಯಕತ್ವದ ಮುಂಬೈ ಹೀರೋಸ್ ವಿರುದ್ಧ ನಡೆದ ಪಂದ್ಯದಲ್ಲಿ ಹಾಗೂ ಚೆನ್ನೈನಲ್ಲಿ ನಡೆದ ಕಾಲಿವುಡ್ ಜತೆಗಿನ ಪಂದ್ಯದಲ್ಲಿ ಕರ್ನಾಟಕ ತಂಡ ಜಯಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. <br /> <br /> ಇನ್ನೇನು ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ಹಾದಿ ಸುಗಮವಾಗಿದೆ.<br /> `ಸಿನಿಮಾ ಮಂದಿಯ ಕ್ರಿಕೆಟನ್ನು ಅಭಿಮಾನಿಗಳು, ಕ್ರೀಡಾಸಕ್ತರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಅಳುಕು ನಮ್ಮಲ್ಲಿ ಮೂಡಿತ್ತು.<br /> <br /> ಜತೆಗೆ ಸಹಸ್ರಾರು ಕಂಗಳ ನಿರೀಕ್ಷೆ ಬೇರೆ. ಹಾಗಾಗಿ ನಮ್ಮ ನೆಲದಲ್ಲಿ ಭಯದಿಂದಲೇ ಆಡಿದೆವು. ಆದರೆ ಪ್ರೇಕ್ಷಕರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಉದ್ಯಮದ ಮಂದಿಯೂ ಬೆನ್ನು ತಟ್ಟಿದ್ದಾರೆ. ಅದಕ್ಕಾಗಿ ಅವರಿಗೆಲ್ಲ ಕೃತಜ್ಞತೆ~ ಎನ್ನುವಾಗ ಅವರು ಭಾವುಕರಾಗಿದ್ದರು.<br /> <br /> `ಸಿನಿಮಾದಲ್ಲಿ ಹೀರೋ ಆಗದವರೂ ಚೆನ್ನಾಗಿ ಆಡಿದರೆ ಕ್ರಿಕೆಟ್ ಕ್ಷೇತ್ರದಲ್ಲಿ ಹೀರೋ ಆಗಬಹುದು. ನಮ್ಮ ಹುಡುಗರಂತೂ ಹಗಲು ರಾತ್ರಿ ಎನ್ನದೇ ಅಭ್ಯಾಸ ಮಾಡಿ ಆಟವಾಡಿದ್ದಾರೆ. ಹಾಗಾಗಿ ಎರಡು ಪಂದ್ಯಗಳಲ್ಲಿ ಜಯಗಳಿಸಲು ಸಾಧ್ಯವಾಯಿತು~ ಎಂದರು.<br /> <br /> ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿದ ಅನುಭವ ಈಗ ಉಪಯೋಗಕ್ಕೆ ಬಂದಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸುವ ಸವಾಲೂ ಇತ್ತು ಎಂದು ಆ ಒತ್ತಡವನ್ನು ನೆನಪು ಮಾಡಿಕೊಂಡರು. ಎರಡೂ ಪಂದ್ಯದ ಜಯದಲ್ಲಿ ಪಾಲುದಾರರಾದ ಸಹ ಆಟಗಾರರು, ತಂಡದ ವೈದ್ಯ, ಕೋಚ್ ಸಹಾಯವನ್ನು ಸ್ಮರಿಸಲು ಮರೆಯಲಿಲ್ಲ.<br /> <br /> ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳೆರಡರ ಮಧ್ಯೆ ಆಯ್ಕೆ ವಿಷಯ ಬಂದಾಗ ಸಿನಿಮಾ ಕ್ಷೇತ್ರವೇ ನೆಚ್ಚಿನ ಕ್ಷೇತ್ರ ಎನ್ನುವುದನ್ನು ಮರೆಯಲಿಲ್ಲ. ಅಶೋಕ್ ಖೇಣಿ ಮಾಲೀಕತ್ವದ ತಂಡ ಲೀಗ್ ಹಂತಕ್ಕೆ ತಲುಪಿದ್ದು, ಜೂನ್12ರಂದು ಹೈದರಾಬಾದ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. <br /> <br /> ಒಟ್ಟಾರೆ ಮೇಕಪ್ ಮಾಡಿಕೊಂಡು ಸ್ಕ್ರೀನ್ ಮೇಲೆ ಹೀರೋ ಆಗುವ ನಟರು, ಮೈದಾನದಲ್ಲಿ ಬೆವರು ಸುರಿಸಿ ರಿಯಲ್ ಹೀರೋಗಳಾಗಲು ಹೊರಟಿದ್ದಾರೆ. ಫೈನಲ್ಸ್ನಲ್ಲೂ ಗೆಲ್ಲುವ ಉಮೇದಿನಲ್ಲಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>