<p>ಭಾನುವಾರ ಬೀದರ್ನಲ್ಲಿ ‘ಬೀದರ್ ಉತ್ಸವ’. ಹಿನ್ನೆಲೆ ಗಾಯಕ ಶಾನ್ ಅವರ ಸಂಗೀತ ರಸಮಂಜರಿ ಇದರ ಪ್ರಧಾನ ಆಕರ್ಷಣೆ. ಅದಕ್ಕಿಂತಲೂ ಇನ್ನೊಂದು ವಿಶೇಷವೂ ಇಲ್ಲಿದೆ. ಶಾನ್ ಜತೆ ಮೊದಲ ಬಾರಿಗೆ ಬೆಂಗಳೂರಿನ ಮೂವರು ಉತ್ಸಾಹಿ ಗಾಯಕ- ಗಾಯಕಿಯರು ವೇದಿಕೆ ಏರಿ ದನಿಗೂಡಿಸಲಿದ್ದಾರೆ.<br /> <br /> ದೇಸಿತಾರಾ.ಕಾಮ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಗೆದ್ದ ಶಂಕರ್, ಶೀಲೂ ಮೆಹ್ತಾ ಮತ್ತು ಶಶಿಕುಮಾರ್ ಅವರೇ ಈ ಅದೃಷ್ಟಶಾಲಿಗಳು. ಅವರಿಗೂ ಇದು ರೋಮಾಂಚನ ಉಂಟು ಮಾಡಿದೆ.<br /> <br /> ಕೇರಳದ ಕಲಾವಿದರ ಕುಟುಂಬದಲ್ಲಿ ಬೆಳೆದ ಶಂಕರ್ ಬಾಲ್ಯದಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ. <br /> <br /> ಬೆಂಗಳೂರಿನಲ್ಲಿ ಕಳೆದ 8 ವರ್ಷದಿಂದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸಂಗೀತದ ಮೇಲಿನ ವ್ಯಾಮೋಹದಿಂದ ವೃತ್ತಿ ಬಿಟ್ಟು ಹಾಡುವುದನ್ನೇ ವೃತ್ತಿ- ಪ್ರವೃತ್ತಿ ಮಾಡಿಕೊಂಡಿದ್ದಾರೆ.<br /> <br /> ಪುಣೆ ಮೂಲದ ಶೀಲು ಮೆಹ್ತಾ 21 ವರ್ಷದಿಂದ ಬೆಂಗಳೂರು ನಿವಾಸಿ. ಮದುವೆ ನಂತರ ಮನೆಯಲ್ಲಿಯೇ ಮಕ್ಕಳಿಗೆ ಸಂಗೀತ ಪಾಠ ಕಲಿಸುತ್ತಿದ್ದಾರೆ. <br /> </p>.<p>ಮೂಲತಃ ಶಿವಮೊಗ್ಗದ ಶಶಿಕುಮಾರ್ ವೃತ್ತಿಯಲ್ಲಿ ಎಚ್.ಆರ್. ಕನ್ಸಲ್ಟೆನ್ಸಿ ನಡೆಸುತ್ತಿದ್ದಾರೆ. ಇವರ ತಂದೆ ಗಂಗಾಧರ್ ಹಾರ್ಮೋನಿಯಂ ಕಲಾವಿದ. ತಾಯಿ ಕಮಲಾಬಾಯಿ ಕೂಡ ಕಲಾವಿದರು.<br /> <br /> ‘ದೇಸಿತಾರ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಒಂದೇ ನಗರದವರು ಆಯ್ಕೆಯಾಗಿದ್ದಾರೆ’ ಎನ್ನುತ್ತಾರೆ ದೇಸಿತಾರ.ಡಾಟ್.ಕಾಂ ಸಿಇಒ ಮನಸೂರ್ ಅಹಮದ್. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾನುವಾರ ಬೀದರ್ನಲ್ಲಿ ‘ಬೀದರ್ ಉತ್ಸವ’. ಹಿನ್ನೆಲೆ ಗಾಯಕ ಶಾನ್ ಅವರ ಸಂಗೀತ ರಸಮಂಜರಿ ಇದರ ಪ್ರಧಾನ ಆಕರ್ಷಣೆ. ಅದಕ್ಕಿಂತಲೂ ಇನ್ನೊಂದು ವಿಶೇಷವೂ ಇಲ್ಲಿದೆ. ಶಾನ್ ಜತೆ ಮೊದಲ ಬಾರಿಗೆ ಬೆಂಗಳೂರಿನ ಮೂವರು ಉತ್ಸಾಹಿ ಗಾಯಕ- ಗಾಯಕಿಯರು ವೇದಿಕೆ ಏರಿ ದನಿಗೂಡಿಸಲಿದ್ದಾರೆ.<br /> <br /> ದೇಸಿತಾರಾ.ಕಾಮ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಗೆದ್ದ ಶಂಕರ್, ಶೀಲೂ ಮೆಹ್ತಾ ಮತ್ತು ಶಶಿಕುಮಾರ್ ಅವರೇ ಈ ಅದೃಷ್ಟಶಾಲಿಗಳು. ಅವರಿಗೂ ಇದು ರೋಮಾಂಚನ ಉಂಟು ಮಾಡಿದೆ.<br /> <br /> ಕೇರಳದ ಕಲಾವಿದರ ಕುಟುಂಬದಲ್ಲಿ ಬೆಳೆದ ಶಂಕರ್ ಬಾಲ್ಯದಲ್ಲಿಯೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ. <br /> <br /> ಬೆಂಗಳೂರಿನಲ್ಲಿ ಕಳೆದ 8 ವರ್ಷದಿಂದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸಂಗೀತದ ಮೇಲಿನ ವ್ಯಾಮೋಹದಿಂದ ವೃತ್ತಿ ಬಿಟ್ಟು ಹಾಡುವುದನ್ನೇ ವೃತ್ತಿ- ಪ್ರವೃತ್ತಿ ಮಾಡಿಕೊಂಡಿದ್ದಾರೆ.<br /> <br /> ಪುಣೆ ಮೂಲದ ಶೀಲು ಮೆಹ್ತಾ 21 ವರ್ಷದಿಂದ ಬೆಂಗಳೂರು ನಿವಾಸಿ. ಮದುವೆ ನಂತರ ಮನೆಯಲ್ಲಿಯೇ ಮಕ್ಕಳಿಗೆ ಸಂಗೀತ ಪಾಠ ಕಲಿಸುತ್ತಿದ್ದಾರೆ. <br /> </p>.<p>ಮೂಲತಃ ಶಿವಮೊಗ್ಗದ ಶಶಿಕುಮಾರ್ ವೃತ್ತಿಯಲ್ಲಿ ಎಚ್.ಆರ್. ಕನ್ಸಲ್ಟೆನ್ಸಿ ನಡೆಸುತ್ತಿದ್ದಾರೆ. ಇವರ ತಂದೆ ಗಂಗಾಧರ್ ಹಾರ್ಮೋನಿಯಂ ಕಲಾವಿದ. ತಾಯಿ ಕಮಲಾಬಾಯಿ ಕೂಡ ಕಲಾವಿದರು.<br /> <br /> ‘ದೇಸಿತಾರ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಒಂದೇ ನಗರದವರು ಆಯ್ಕೆಯಾಗಿದ್ದಾರೆ’ ಎನ್ನುತ್ತಾರೆ ದೇಸಿತಾರ.ಡಾಟ್.ಕಾಂ ಸಿಇಒ ಮನಸೂರ್ ಅಹಮದ್. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>