<p><strong>ಬೆಂಗಳೂರು:</strong> ನೆಲಮಂಗಲದ ಹನುಮಂತಗೌಡ ಪಾಳ್ಯದಲ್ಲಿರುವ ಇಟ್ಟಿಗೆ ತಯಾರಿಕಾ ಘಟಕವೊಂದರ ಮೇಲೆ ದಾಳಿ ಮಾಡಿದ್ದ ಜಿಲ್ಲಾಡಳಿತ, ಘಟಕದಲ್ಲಿ ಜೀತ ಕಾರ್ಮಿಕರಾಗಿದ್ದ ದಂಪತಿಯನ್ನು ರಕ್ಷಿಸಿದೆ.</p>.<p>ತಮಿಳುನಾಡಿನ ಧರ್ಮಪುರಿಯ ನೈನಾರ್ ಮತ್ತು ಪತ್ನಿ ರಾಜತಿ ಅವರನ್ನು ಕಳ್ಳ ಸಾಗಣೆ ಮೂಲಕ ನಗರಕ್ಕೆ ಕರೆತಂದಿದ್ದ ಮೇಸ್ತ್ರಿ ಹಾಲಿಮುತ್ತು ಎಂಬಾತ, ಸರಿಯಾದ ಸಂಬಳ ಕೊಡದೇ ದುಡಿಸಿಕೊಳ್ಳುತ್ತಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ನೆಲಮಂಗಲ ತಹಶೀಲ್ದಾರ್ ರಾಜಶೇಖರ್ ಹಾಗೂ ಸಬ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡ, ಇದೇ 27ರಂದು ದಾಳಿ ಮಾಡಿ ಮೇಸ್ತ್ರಿಯನ್ನು ಬಂಧಿಸಿದೆ.</p>.<p>‘ಇರುಳರ್ ಬುಡಕಟ್ಟಿನ ದಂಪತಿಗೆ10 ತಿಂಗಳ ಕೂಸು ಹಾಗೂ 4 ವರ್ಷದ ಮಕ್ಕಳಿದ್ದಾರೆ. ಒಂದೂವರೆ ವರ್ಷದಿಂದ ದಂಪತಿಯನ್ನು ಜೀತ ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿತ್ತು. ವಾರಕ್ಕೆ ಇಬ್ಬರಿಗೆ ತಲಾ ₹ 500 ವೇತನ ನೀಡಲಾಗುತ್ತಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಉತ್ತಮ ವೇತನ ಹಾಗೂ ವಸತಿ ಸೌಲಭ್ಯ ನೀಡುವುದಾಗಿ ಹೇಳಿದ್ದ ಮೇಸ್ತ್ರೀ, ದಂಪತಿಯನ್ನು ಬೆಂಗಳೂರಿಗೆ ಕರೆತಂದಿದ್ದ. ಗಲೀಜಾದ ಸ್ಥಳವನ್ನು ದಂಪತಿಯ ವಾಸಕ್ಕೆ ನೀಡಲಾಗಿತ್ತು. ಅವರಿಗೆ ಯಾವುದೇ ಮೂಲ ಸೌಕರ್ಯಗಳನ್ನೂ ಕಲ್ಪಿಸಿರಲಿಲ್ಲ’ ಎಂದರು.</p>.<p>‘ನಿತ್ಯವೂ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಂಪತಿ ಇಟ್ಟಿಗೆ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ನಂತರ, ಟ್ರಕ್ಗಳಿಗೆ ಇಟ್ಟಿಗೆ ತುಂಬಿಸುವ ಕೆಲಸ ನಿರ್ವಹಿಸುತ್ತಿದ್ದರು. ದಂಪತಿ ಎಲ್ಲಿಯಾದರೂ ಹೊರಟರೆ, ಮಾಲೀಕನ ಕಡೆಯವರು ಹಿಂಬಾಲಿಸುತ್ತಿದ್ದರು. ಓಡಾಡಲು ಸಹ ಅವರಿಗೆ ಸ್ವಾತಂತ್ರ್ಯವಿರಲಿಲ್ಲ’ ಎಂದು ಅಧಿಕಾರಿ ಹೇಳಿದರು.</p>.<p>‘ದಂಪತಿಯನ್ನು ಕೆಲಸಕ್ಕೆ ಕರೆದುಕೊಂಡು ಬರುವ ವೇಳೆಯಲ್ಲಿ ₹ 28,000 ನೀಡಲಾಗಿತ್ತು. ಕಾರ್ಮಿಕರು ಮನೆಗೆ ವಾಪಸ್ ತೆರಳಲು ಅನುಮತಿ ಕೇಳಿದಾಗಲೆಲ್ಲ ಹಣವನ್ನು ವಾಪಸ್ ಕೊಡುವಂತೆ ಮೇಸ್ತ್ರೀ ಪೀಡಿಸುತ್ತಿದ್ದ’ ಎಂದರು.</p>.<p>‘ಜೀತಕ್ಕಾಗಿ ಮಕ್ಕಳು ಅಥವಾ ವ್ಯಕ್ತಿಗಳನ್ನು ಖರೀದಿಸುವುದು (ಐಪಿಸಿ 370) ಹಾಗೂ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನ) ಕಾಯ್ದೆ ಅಡಿ ಮೇಸ್ತ್ರೀ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಂಪತಿ ಹಾಗೂ ಅವರ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.</p>.<p>‘ಇಟ್ಟಿಗೆ ತಯಾರಿಕಾ ಘಟಕವನ್ನು ಮೇಸ್ತ್ರೀಯೇ ಲೀಸ್ಗೆ ಪಡೆದಿದ್ದ.ಜೀತಕ್ಕೆ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದ ವಿಷಯ ಘಟಕದ ಮೂಲ ಮಾಲೀಕರಿಗೆ ಗೊತ್ತಿರಲಿಲ್ಲ. ಆ ಸಂಬಂಧ ಅವರ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನೆಲಮಂಗಲದ ಹನುಮಂತಗೌಡ ಪಾಳ್ಯದಲ್ಲಿರುವ ಇಟ್ಟಿಗೆ ತಯಾರಿಕಾ ಘಟಕವೊಂದರ ಮೇಲೆ ದಾಳಿ ಮಾಡಿದ್ದ ಜಿಲ್ಲಾಡಳಿತ, ಘಟಕದಲ್ಲಿ ಜೀತ ಕಾರ್ಮಿಕರಾಗಿದ್ದ ದಂಪತಿಯನ್ನು ರಕ್ಷಿಸಿದೆ.</p>.<p>ತಮಿಳುನಾಡಿನ ಧರ್ಮಪುರಿಯ ನೈನಾರ್ ಮತ್ತು ಪತ್ನಿ ರಾಜತಿ ಅವರನ್ನು ಕಳ್ಳ ಸಾಗಣೆ ಮೂಲಕ ನಗರಕ್ಕೆ ಕರೆತಂದಿದ್ದ ಮೇಸ್ತ್ರಿ ಹಾಲಿಮುತ್ತು ಎಂಬಾತ, ಸರಿಯಾದ ಸಂಬಳ ಕೊಡದೇ ದುಡಿಸಿಕೊಳ್ಳುತ್ತಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ನೆಲಮಂಗಲ ತಹಶೀಲ್ದಾರ್ ರಾಜಶೇಖರ್ ಹಾಗೂ ಸಬ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡ, ಇದೇ 27ರಂದು ದಾಳಿ ಮಾಡಿ ಮೇಸ್ತ್ರಿಯನ್ನು ಬಂಧಿಸಿದೆ.</p>.<p>‘ಇರುಳರ್ ಬುಡಕಟ್ಟಿನ ದಂಪತಿಗೆ10 ತಿಂಗಳ ಕೂಸು ಹಾಗೂ 4 ವರ್ಷದ ಮಕ್ಕಳಿದ್ದಾರೆ. ಒಂದೂವರೆ ವರ್ಷದಿಂದ ದಂಪತಿಯನ್ನು ಜೀತ ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿತ್ತು. ವಾರಕ್ಕೆ ಇಬ್ಬರಿಗೆ ತಲಾ ₹ 500 ವೇತನ ನೀಡಲಾಗುತ್ತಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>‘ಉತ್ತಮ ವೇತನ ಹಾಗೂ ವಸತಿ ಸೌಲಭ್ಯ ನೀಡುವುದಾಗಿ ಹೇಳಿದ್ದ ಮೇಸ್ತ್ರೀ, ದಂಪತಿಯನ್ನು ಬೆಂಗಳೂರಿಗೆ ಕರೆತಂದಿದ್ದ. ಗಲೀಜಾದ ಸ್ಥಳವನ್ನು ದಂಪತಿಯ ವಾಸಕ್ಕೆ ನೀಡಲಾಗಿತ್ತು. ಅವರಿಗೆ ಯಾವುದೇ ಮೂಲ ಸೌಕರ್ಯಗಳನ್ನೂ ಕಲ್ಪಿಸಿರಲಿಲ್ಲ’ ಎಂದರು.</p>.<p>‘ನಿತ್ಯವೂ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಂಪತಿ ಇಟ್ಟಿಗೆ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ನಂತರ, ಟ್ರಕ್ಗಳಿಗೆ ಇಟ್ಟಿಗೆ ತುಂಬಿಸುವ ಕೆಲಸ ನಿರ್ವಹಿಸುತ್ತಿದ್ದರು. ದಂಪತಿ ಎಲ್ಲಿಯಾದರೂ ಹೊರಟರೆ, ಮಾಲೀಕನ ಕಡೆಯವರು ಹಿಂಬಾಲಿಸುತ್ತಿದ್ದರು. ಓಡಾಡಲು ಸಹ ಅವರಿಗೆ ಸ್ವಾತಂತ್ರ್ಯವಿರಲಿಲ್ಲ’ ಎಂದು ಅಧಿಕಾರಿ ಹೇಳಿದರು.</p>.<p>‘ದಂಪತಿಯನ್ನು ಕೆಲಸಕ್ಕೆ ಕರೆದುಕೊಂಡು ಬರುವ ವೇಳೆಯಲ್ಲಿ ₹ 28,000 ನೀಡಲಾಗಿತ್ತು. ಕಾರ್ಮಿಕರು ಮನೆಗೆ ವಾಪಸ್ ತೆರಳಲು ಅನುಮತಿ ಕೇಳಿದಾಗಲೆಲ್ಲ ಹಣವನ್ನು ವಾಪಸ್ ಕೊಡುವಂತೆ ಮೇಸ್ತ್ರೀ ಪೀಡಿಸುತ್ತಿದ್ದ’ ಎಂದರು.</p>.<p>‘ಜೀತಕ್ಕಾಗಿ ಮಕ್ಕಳು ಅಥವಾ ವ್ಯಕ್ತಿಗಳನ್ನು ಖರೀದಿಸುವುದು (ಐಪಿಸಿ 370) ಹಾಗೂ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನ) ಕಾಯ್ದೆ ಅಡಿ ಮೇಸ್ತ್ರೀ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಂಪತಿ ಹಾಗೂ ಅವರ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.</p>.<p>‘ಇಟ್ಟಿಗೆ ತಯಾರಿಕಾ ಘಟಕವನ್ನು ಮೇಸ್ತ್ರೀಯೇ ಲೀಸ್ಗೆ ಪಡೆದಿದ್ದ.ಜೀತಕ್ಕೆ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದ ವಿಷಯ ಘಟಕದ ಮೂಲ ಮಾಲೀಕರಿಗೆ ಗೊತ್ತಿರಲಿಲ್ಲ. ಆ ಸಂಬಂಧ ಅವರ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>