<p><strong>ನವದೆಹಲಿ:</strong> ಕರ್ನಾಟಕ ಹೈಕೋರ್ಟ್ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಐವರು ವಕೀಲರ ಹೆಸರನ್ನು ಶಿಫಾರಸು ಮಾಡಿದೆ.</p>.<p>ಈ ಹೆಸರುಗಳಿಗೆ ಕರ್ನಾಟಕದ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಸಮ್ಮತಿಸಿಲ್ಲ. ಆದರೆ ಕೊಲಿಜಿಯಂ ಐವರು ವಕೀಲರ ಹೆಸರನ್ನು ಅಂತಿಮಗೊಳಿಸಿದೆ.</p>.<p>ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಹುದ್ದೆಗೆ ಅರ್ಹರ ಹೆಸರನ್ನು ಸುಪ್ರೀಂ ಕೋರ್ಟ್ನ ಸಮಿತಿ (ಕೊಲಿಜಿಯಂ) ಶಿಫಾರಸು ಮಾಡುತ್ತದೆ.</p>.<p>ಕರ್ನಾಟಕ ಹೈಕೋರ್ಟ್ ಒಟ್ಟು ಹತ್ತು ವಕೀಲರ ಹೆಸರನ್ನು ಜನವರಿ 13ರಂದು ಕೊಲಿಜಿಯಂಗೆ ಕಳುಹಿಸಿತ್ತು. ಆ ಪೈಕಿ ಐವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.</p>.<p>ನಾಲ್ವರ ಹೆಸರನ್ನು ಪುನರ್ ಪರಿಶೀಲನೆಗಾಗಿ ಸುಪ್ರೀಂ ಕೋರ್ಟ್ ವಾಪಸ್ ಕಳುಹಿಸಿದೆ. ಹುದ್ದೆಗೆ ಯೋಗ್ಯರಲ್ಲ ಎಂಬ ಕಾರಣ ನೀಡಿ ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ ಅವರ ಹೆಸರನ್ನು ತಿರಸ್ಕೃರಿಸಲಾಗಿದೆ.</p>.<p>ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ಈ ಐವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಿ ರಾಷ್ಟ್ರಪತಿ ಕಚೇರಿ ಆದೇಶ ಹೊರಡಿಸಲಿದೆ.</p>.<p>ಹೈಕೋರ್ಟ್ ಕೊಲಿಜಿಯಂ ಅಂತಿಮಗೊಳಿಸಿದ್ದ ಹತ್ತು ವಕೀಲರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮ್ಮತಿ ಇರಲಿಲ್ಲ. ರಾಜ್ಯಪಾಲರು, ಯಾರ ಹೆಸರನ್ನೂ ಪ್ರಸ್ತಾಪಿಸದೆ ಕೆಲವರ ಅರ್ಹತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.</p>.<p>‘ಆಯ್ಕೆಯಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಕ್ಕಿಲ್ಲ’ ಎಂದು ವಕೀಲರ ಸಂಘ, ಸಂಸ್ಥೆಗಳು ತಕರಾರು ಎತ್ತಿದ್ದವು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದವು.</p>.<p>ರಾಜ್ಯಪಾಲರ ಅಭಿಪ್ರಾಯವನ್ನು ಪರಿಗಣಿಸಿರುವ ಕೊಲಿಜಿಯಂ, ಅಭ್ಯರ್ಥಿಗಳ ಹಿನ್ನೆಲೆ, ಯೋಗ್ಯತೆ, ನಡತೆ, ಕಾರ್ಯಕ್ಷಮತೆ ಮಾನದಂಡಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ನೇಮಕಾತಿ ಮಾಡಲಾಗುವುದು ಎಂದು ಹೇಳಿದೆ.</p>.<p>ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಗುಪ್ತಚರ ಇಲಾಖೆ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕ ಹೈಕೋರ್ಟ್ ವಿದ್ಯಮಾನಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ನ್ಯಾಯಮುರ್ತಿಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತದೆ.</p>.<p>* ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ನರೇಂದ್ರ ಜಿ ಅವರನ್ನು ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.</p>.<p><strong>ಶಿಫಾರಸುಗೊಂಡ ಐವರು ವಕೀಲರು</strong></p>.<p><br /> ದೀಕ್ಷಿತ್ ಕೃಷ್ಣ ಶ್ರೀಪಾದ್</p>.<p>ಶಂಕರ್ ಗಣಪತಿ ಪಂಡಿತ್</p>.<p>ರಾಮಕೃಷ್ಣ ದೇವದಾಸ್</p>.<p>ಭೂತನಹೊಸೂರು ಮಲ್ಲಿಕಾರ್ಜುನ ಶ್ಯಾಮಪ್ರಸಾದ್</p>.<p>ಸಿದ್ಧಪ್ಪ ಸುನೀಲ್ ದತ್ ಯಾದವ್</p>.<p><strong>ಮರುಪರಿಶೀಲನೆಗೆ ಕಳಿಸಿದ ಹೆಸರು</strong></p>.<p>ಗುರುದಾಸ್ ಶ್ಯಾಮರಾವ್ ಕಣ್ಣೂರು</p>.<p>ಕೂಳೂರು ಅರವಿಂದ್ ಕಾಮತ್</p>.<p>ಕಾನಕಟ್ಟೆ ನಾರಾಯಣ (ಕೆ.ಎನ್.) ಫಣೀಂದ್ರ</p>.<p>ಮಹೇಶನ್ ನಾಗಪ್ರಸನ್ನ</p>.<p><strong>ತಿರಸ್ಕೃತಗೊಂಡ ಹೆಸರು</strong></p>.<p>ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕರ್ನಾಟಕ ಹೈಕೋರ್ಟ್ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಐವರು ವಕೀಲರ ಹೆಸರನ್ನು ಶಿಫಾರಸು ಮಾಡಿದೆ.</p>.<p>ಈ ಹೆಸರುಗಳಿಗೆ ಕರ್ನಾಟಕದ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಸಮ್ಮತಿಸಿಲ್ಲ. ಆದರೆ ಕೊಲಿಜಿಯಂ ಐವರು ವಕೀಲರ ಹೆಸರನ್ನು ಅಂತಿಮಗೊಳಿಸಿದೆ.</p>.<p>ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಹುದ್ದೆಗೆ ಅರ್ಹರ ಹೆಸರನ್ನು ಸುಪ್ರೀಂ ಕೋರ್ಟ್ನ ಸಮಿತಿ (ಕೊಲಿಜಿಯಂ) ಶಿಫಾರಸು ಮಾಡುತ್ತದೆ.</p>.<p>ಕರ್ನಾಟಕ ಹೈಕೋರ್ಟ್ ಒಟ್ಟು ಹತ್ತು ವಕೀಲರ ಹೆಸರನ್ನು ಜನವರಿ 13ರಂದು ಕೊಲಿಜಿಯಂಗೆ ಕಳುಹಿಸಿತ್ತು. ಆ ಪೈಕಿ ಐವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.</p>.<p>ನಾಲ್ವರ ಹೆಸರನ್ನು ಪುನರ್ ಪರಿಶೀಲನೆಗಾಗಿ ಸುಪ್ರೀಂ ಕೋರ್ಟ್ ವಾಪಸ್ ಕಳುಹಿಸಿದೆ. ಹುದ್ದೆಗೆ ಯೋಗ್ಯರಲ್ಲ ಎಂಬ ಕಾರಣ ನೀಡಿ ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ ಅವರ ಹೆಸರನ್ನು ತಿರಸ್ಕೃರಿಸಲಾಗಿದೆ.</p>.<p>ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ಈ ಐವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಿ ರಾಷ್ಟ್ರಪತಿ ಕಚೇರಿ ಆದೇಶ ಹೊರಡಿಸಲಿದೆ.</p>.<p>ಹೈಕೋರ್ಟ್ ಕೊಲಿಜಿಯಂ ಅಂತಿಮಗೊಳಿಸಿದ್ದ ಹತ್ತು ವಕೀಲರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮ್ಮತಿ ಇರಲಿಲ್ಲ. ರಾಜ್ಯಪಾಲರು, ಯಾರ ಹೆಸರನ್ನೂ ಪ್ರಸ್ತಾಪಿಸದೆ ಕೆಲವರ ಅರ್ಹತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.</p>.<p>‘ಆಯ್ಕೆಯಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಕ್ಕಿಲ್ಲ’ ಎಂದು ವಕೀಲರ ಸಂಘ, ಸಂಸ್ಥೆಗಳು ತಕರಾರು ಎತ್ತಿದ್ದವು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದವು.</p>.<p>ರಾಜ್ಯಪಾಲರ ಅಭಿಪ್ರಾಯವನ್ನು ಪರಿಗಣಿಸಿರುವ ಕೊಲಿಜಿಯಂ, ಅಭ್ಯರ್ಥಿಗಳ ಹಿನ್ನೆಲೆ, ಯೋಗ್ಯತೆ, ನಡತೆ, ಕಾರ್ಯಕ್ಷಮತೆ ಮಾನದಂಡಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ನೇಮಕಾತಿ ಮಾಡಲಾಗುವುದು ಎಂದು ಹೇಳಿದೆ.</p>.<p>ಅಭ್ಯರ್ಥಿಗಳ ಹಿನ್ನೆಲೆಯ ಬಗ್ಗೆ ಗುಪ್ತಚರ ಇಲಾಖೆ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕ ಹೈಕೋರ್ಟ್ ವಿದ್ಯಮಾನಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ನ್ಯಾಯಮುರ್ತಿಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತದೆ.</p>.<p>* ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ನರೇಂದ್ರ ಜಿ ಅವರನ್ನು ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.</p>.<p><strong>ಶಿಫಾರಸುಗೊಂಡ ಐವರು ವಕೀಲರು</strong></p>.<p><br /> ದೀಕ್ಷಿತ್ ಕೃಷ್ಣ ಶ್ರೀಪಾದ್</p>.<p>ಶಂಕರ್ ಗಣಪತಿ ಪಂಡಿತ್</p>.<p>ರಾಮಕೃಷ್ಣ ದೇವದಾಸ್</p>.<p>ಭೂತನಹೊಸೂರು ಮಲ್ಲಿಕಾರ್ಜುನ ಶ್ಯಾಮಪ್ರಸಾದ್</p>.<p>ಸಿದ್ಧಪ್ಪ ಸುನೀಲ್ ದತ್ ಯಾದವ್</p>.<p><strong>ಮರುಪರಿಶೀಲನೆಗೆ ಕಳಿಸಿದ ಹೆಸರು</strong></p>.<p>ಗುರುದಾಸ್ ಶ್ಯಾಮರಾವ್ ಕಣ್ಣೂರು</p>.<p>ಕೂಳೂರು ಅರವಿಂದ್ ಕಾಮತ್</p>.<p>ಕಾನಕಟ್ಟೆ ನಾರಾಯಣ (ಕೆ.ಎನ್.) ಫಣೀಂದ್ರ</p>.<p>ಮಹೇಶನ್ ನಾಗಪ್ರಸನ್ನ</p>.<p><strong>ತಿರಸ್ಕೃತಗೊಂಡ ಹೆಸರು</strong></p>.<p>ಕಾಸರವಳ್ಳಿ ಚೈತನ್ಯ ಕೇಶವಮೂರ್ತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>