<p><strong>ಹಾಸನ: </strong>ನಗರದ ಸಂತೆಪೇಟೆ ನಗರಸಭೆ ಮೈದಾನದಲ್ಲಿ 10 ದಿನ ನಡೆಯುವ ಐತಿಹಾಸಿಕ ದನಗಳ ಜಾತ್ರೆಗೆ ಶಾಸಕ ಎಚ್.ಎಸ್. ಪ್ರಕಾಶ್ ಸೋಮವಾರ ಚಾಲನೆ ನೀಡಿದರು.</p>.<p>ಜಾತ್ರೆ ಪ್ರಯುಕ್ತ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ರಾಸುಗಳ ಮೆರವಣಿಗೆ ನಡೆಯಿತು. ವಿವಿಧ ತಳಿಯ ದನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮೆರವಣಿಗೆ ಎನ್.ಆರ್. ವೃತ್ತ, ಬಿ.ಎಂ.ರಸ್ತೆಯಲ್ಲಿ ಸಾಗಿ ದನಗಳ ಜಾತ್ರೆ ನಡೆಯುವ ಸಂತೆಪೇಟೆಯ ನಗರಸಭೆ ಮೈದಾನದಲ್ಲಿ ಅಂತ್ಯಗೊಂಡಿತು.</p>.<p>ಜೋಡಿ ಎತ್ತುಗಳು, ಎತ್ತಿನಗಾಡಿ, ನಂದಿಧ್ವಜ ಹಾಗೂ ವಿವಿಧ ಜಾನಪದ ಕಲಾತಂಡಗಳು ಗಮನಸೆಳೆದವು. 1990ರಲ್ಲಿ ಹಾಸನ ದನಗಳ ಜಾತ್ರೆ ನಿಂತು ಹೋಗಿತ್ತು. ಆದರೆ, ನಗರಸಭೆ ವತಿಯಿಂದ ವೈಭವದಿಂದ ಕಳೆದ ವರ್ಷದಿಂದ ಮತ್ತೆ ಜಾತ್ರೆ ಆರಂಭವಾಗಿದೆ. ಇದರಿಂದಾಗಿ ರೈತರು ಸಂತಸಗೊಂಡಿದ್ದಾರೆ.</p>.<p>ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳ ರೈತರು ತಮ್ಮ ಒಡನಾಡಿಗಳಾದ ಲಕ್ಷಾಂತರ ರೂ. ಮೌಲ್ಯದ ಸುಂದರ, ಸದೃಢ ಮೈಕಟ್ಟಿನ ಜೋಡಿ ಎತ್ತುಗಳನ್ನು ನಗರಸಭೆ ಹಿಂಭಾಗದಲ್ಲಿ ಇರುವ ವಿಶಾಲ ಮೈದಾನದಲ್ಲಿ ಜಾತ್ರಾ ಸ್ಥಳಕ್ಕೆ ಕರೆತಂದಿದ್ದಾರೆ.</p>.<p>ಎತ್ತುಗಳೊಂದಿಗೆ ಬರುವ ರೈತರಿಗೆ ಮೂಲಸೌಕರ್ಯ ಮತ್ತು ರಾಸುಗಳಿಗೆ ಮೇವು, ನೀರು ಒದಗಿಸಲು ನಗರಸಭೆ ಕ್ರಮ ಕೈಗೊಂಡಿದೆ. ಅಂತ್ಯದಲ್ಲಿ ಅತ್ಯುತ್ತಮ ಎತ್ತುಗಳಿಗೆ ಬಹುಮಾನ, ಭಾಗವಹಿಸುವ ಎಲ್ಲರಿಗೆ ಸಮಾಧಾನಕರ ಬಹುಮಾನವಿದೆ.</p>.<p>ದಶಕದ ಹಿಂದೆ ರೈತರು ಎತ್ತಿನ ಗಾಡಿಗಳಿಗೆ ಅಲಂಕಾರ ಮಾಡಿಕೊಂಡು ಮೆರವಣಿಗೆ ಮೂಲಕ ಬರುತ್ತಿದ್ದರು. ಹಾಸನ ಜಿಲ್ಲೆಯಲ್ಲಿ ಹಳ್ಳಿಕಾರ್ ತಳಿಯ ರಾಸುಗಳು ಹೆಚ್ಚಾಗಿದ್ದರಿಂದ ಉಳುಮೆ ಮಾಡಲು ಈ ತಳಿಯನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿತ್ತು. ಆದ್ದರಿಂದ ಈ ತಳಿಯ ರಾಸುಗಳನ್ನು ಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ರೈತರು ದನಗಳ ಜಾತ್ರೆಗೆ ಬರುತ್ತಿದ್ದರು.</p>.<p>ಶಾಸಕ ಎಚ್.ಎಸ್.ಪ್ರಕಾಶ್, ’ಹಾಸನದ ದನಗಳ ಜಾತ್ರೆ ಕಾರಣಾಂತರಗಳಿಂದ ಕೆಲ ವರ್ಷ ಸ್ಥಗಿತಗೊಂಡಿತ್ತು. ಕಳೆದ ವರ್ಷದಿಂದ ಪುನಾರಂಭವಾಗಿದೆ. ಈ ವರ್ಷ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ದನಗಳು ಆಗಮಿಸಿವೆ’ ಎಂದರು.</p>.<p>ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್, ಉಪಾಧ್ಯಕ್ಷೆ ಲೀಲಾವತಿ ವಾಸು, ಸದಸ್ಯರಾದ ಗೋಪಾಲ್, ವಿಜಯ್ ಕುಮಾರ್, ಇರ್ಷಾದ್ ಪಾಷ, ಸಮೀರ್, ಮಹೇಶ್, ಮುಖಂಡರಾದ ವಾಸುದೇವ್, ಎಸ್.ದ್ಯಾವೇಗೌಡ, ಜಿಪಂ ಮಾಜಿ ಸದಸ್ಯ ಲಕ್ಷ್ಮಣ್ ಇದ್ದರು.</p>.<p>‘ಜಾತ್ರೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುತ್ತದೆ.<br /> <strong>ಎಚ್.ಎಸ್. ಪ್ರಕಾಶ್</strong>, ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ನಗರದ ಸಂತೆಪೇಟೆ ನಗರಸಭೆ ಮೈದಾನದಲ್ಲಿ 10 ದಿನ ನಡೆಯುವ ಐತಿಹಾಸಿಕ ದನಗಳ ಜಾತ್ರೆಗೆ ಶಾಸಕ ಎಚ್.ಎಸ್. ಪ್ರಕಾಶ್ ಸೋಮವಾರ ಚಾಲನೆ ನೀಡಿದರು.</p>.<p>ಜಾತ್ರೆ ಪ್ರಯುಕ್ತ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ರಾಸುಗಳ ಮೆರವಣಿಗೆ ನಡೆಯಿತು. ವಿವಿಧ ತಳಿಯ ದನಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮೆರವಣಿಗೆ ಎನ್.ಆರ್. ವೃತ್ತ, ಬಿ.ಎಂ.ರಸ್ತೆಯಲ್ಲಿ ಸಾಗಿ ದನಗಳ ಜಾತ್ರೆ ನಡೆಯುವ ಸಂತೆಪೇಟೆಯ ನಗರಸಭೆ ಮೈದಾನದಲ್ಲಿ ಅಂತ್ಯಗೊಂಡಿತು.</p>.<p>ಜೋಡಿ ಎತ್ತುಗಳು, ಎತ್ತಿನಗಾಡಿ, ನಂದಿಧ್ವಜ ಹಾಗೂ ವಿವಿಧ ಜಾನಪದ ಕಲಾತಂಡಗಳು ಗಮನಸೆಳೆದವು. 1990ರಲ್ಲಿ ಹಾಸನ ದನಗಳ ಜಾತ್ರೆ ನಿಂತು ಹೋಗಿತ್ತು. ಆದರೆ, ನಗರಸಭೆ ವತಿಯಿಂದ ವೈಭವದಿಂದ ಕಳೆದ ವರ್ಷದಿಂದ ಮತ್ತೆ ಜಾತ್ರೆ ಆರಂಭವಾಗಿದೆ. ಇದರಿಂದಾಗಿ ರೈತರು ಸಂತಸಗೊಂಡಿದ್ದಾರೆ.</p>.<p>ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳ ರೈತರು ತಮ್ಮ ಒಡನಾಡಿಗಳಾದ ಲಕ್ಷಾಂತರ ರೂ. ಮೌಲ್ಯದ ಸುಂದರ, ಸದೃಢ ಮೈಕಟ್ಟಿನ ಜೋಡಿ ಎತ್ತುಗಳನ್ನು ನಗರಸಭೆ ಹಿಂಭಾಗದಲ್ಲಿ ಇರುವ ವಿಶಾಲ ಮೈದಾನದಲ್ಲಿ ಜಾತ್ರಾ ಸ್ಥಳಕ್ಕೆ ಕರೆತಂದಿದ್ದಾರೆ.</p>.<p>ಎತ್ತುಗಳೊಂದಿಗೆ ಬರುವ ರೈತರಿಗೆ ಮೂಲಸೌಕರ್ಯ ಮತ್ತು ರಾಸುಗಳಿಗೆ ಮೇವು, ನೀರು ಒದಗಿಸಲು ನಗರಸಭೆ ಕ್ರಮ ಕೈಗೊಂಡಿದೆ. ಅಂತ್ಯದಲ್ಲಿ ಅತ್ಯುತ್ತಮ ಎತ್ತುಗಳಿಗೆ ಬಹುಮಾನ, ಭಾಗವಹಿಸುವ ಎಲ್ಲರಿಗೆ ಸಮಾಧಾನಕರ ಬಹುಮಾನವಿದೆ.</p>.<p>ದಶಕದ ಹಿಂದೆ ರೈತರು ಎತ್ತಿನ ಗಾಡಿಗಳಿಗೆ ಅಲಂಕಾರ ಮಾಡಿಕೊಂಡು ಮೆರವಣಿಗೆ ಮೂಲಕ ಬರುತ್ತಿದ್ದರು. ಹಾಸನ ಜಿಲ್ಲೆಯಲ್ಲಿ ಹಳ್ಳಿಕಾರ್ ತಳಿಯ ರಾಸುಗಳು ಹೆಚ್ಚಾಗಿದ್ದರಿಂದ ಉಳುಮೆ ಮಾಡಲು ಈ ತಳಿಯನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿತ್ತು. ಆದ್ದರಿಂದ ಈ ತಳಿಯ ರಾಸುಗಳನ್ನು ಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ರೈತರು ದನಗಳ ಜಾತ್ರೆಗೆ ಬರುತ್ತಿದ್ದರು.</p>.<p>ಶಾಸಕ ಎಚ್.ಎಸ್.ಪ್ರಕಾಶ್, ’ಹಾಸನದ ದನಗಳ ಜಾತ್ರೆ ಕಾರಣಾಂತರಗಳಿಂದ ಕೆಲ ವರ್ಷ ಸ್ಥಗಿತಗೊಂಡಿತ್ತು. ಕಳೆದ ವರ್ಷದಿಂದ ಪುನಾರಂಭವಾಗಿದೆ. ಈ ವರ್ಷ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ದನಗಳು ಆಗಮಿಸಿವೆ’ ಎಂದರು.</p>.<p>ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್, ಉಪಾಧ್ಯಕ್ಷೆ ಲೀಲಾವತಿ ವಾಸು, ಸದಸ್ಯರಾದ ಗೋಪಾಲ್, ವಿಜಯ್ ಕುಮಾರ್, ಇರ್ಷಾದ್ ಪಾಷ, ಸಮೀರ್, ಮಹೇಶ್, ಮುಖಂಡರಾದ ವಾಸುದೇವ್, ಎಸ್.ದ್ಯಾವೇಗೌಡ, ಜಿಪಂ ಮಾಜಿ ಸದಸ್ಯ ಲಕ್ಷ್ಮಣ್ ಇದ್ದರು.</p>.<p>‘ಜಾತ್ರೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುತ್ತದೆ.<br /> <strong>ಎಚ್.ಎಸ್. ಪ್ರಕಾಶ್</strong>, ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>