<p><strong>ಪುಣೆ: </strong>ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ ಸ್ಮರಣಾರ್ಥ ಸೋಮವಾರ ಆಯೋಜಿಸಿದ್ದ 200ನೇ ವಿಜಯೋತ್ಸವದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಿದ್ದಾರೆ.</p>.<p>‘ಜಿಲ್ಲೆಯ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದವರು ಮಧ್ಯಾಹ್ನ ಯುದ್ಧ ಸ್ಮಾರಕದ ಬಳಿ ತೆರಳುತ್ತಿದ್ದಾಗ ಹಿಂಸಾ ಕೃತ್ಯಗಳು ನಡೆದಿವೆ. ಕೆಲ ಜನರು ಮತ್ತು ಒಂದು ಗುಂಪಿನ ಮಧ್ಯೆ ಯಾವುದೋ ವಿಷಯದ ಬಗ್ಗೆ ವಾಗ್ವಾದ ನಡೆದು ಗಲಾಟೆ ಆರಂಭವಾಗಿದೆ. ಸಮೀಪದಲ್ಲಿದ್ದ ಮನೆ, ವಾಹನಗಳನ್ನು ಹಾನಿಗೊಳಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಸೋಮವಾರ ಬೆಳಿಗ್ಗೆ ದಲಿತ ಮುಖಂಡ ಜಿಗ್ನೇಶ್ ಮೆವಾನಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದರು.</p>.<p></p><p>ಈ ಹಿಂಸಾಚಾರದ ನಂತರ ಪುಣೆ–ಅಹ್ಮದ್ನಗರ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸಂಜೆಯ ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ವದಂತಿಗಳು ಹರಡುವುದನ್ನು ತಡೆಯಲು ಕೆಲಕಾಲ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ವಿವರಿಸಿದ್ದಾರೆ.</p><p>ಅಹಿತಕರ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುವುದು. ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p><p><iframe allowfullscreen="true" allowtransparency="true" frameborder="0" height="308" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Fnilesh.borde.5%2Fvideos%2F961416877345711%2F&amp;show_text=0&amp;width=560" style="border:none;overflow:hidden" width="560"/></p><p>ಕೊರೆಗಾಂವ್ನ ಹಲವೆಡೆ ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.<br/>&#13; <iframe allowfullscreen="true" allowtransparency="true" frameborder="0" height="476" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Fambedkartv%2Fvideos%2F1981205545429417%2F&amp;show_text=0&amp;width=267" style="border:none;overflow:hidden" width="267"/><br/>&#13; 1818 ಜನವರಿ 1ರಂದು ಪೇಶ್ವೆಗಳ ವಿರುದ್ಧ ಸಿಡಿದೆದ್ದ ಕೊರೆಗಾಂವ್ನ ದಲಿತ ಯೋಧರು ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದರು. ಈ ಗೆಲುವಿಗೆ 2018ರ ಜನವರಿ 1ಕ್ಕೆ 200 ವರ್ಷ.</p><p>200ನೇ ವರ್ಷದ ವಿಜಯೋತ್ಸವದ ಅಂಗವಾಗಿ ಭಾನುವಾರ (2017ರ ಡಿ.31) ಪುಣೆಯ ಶನಿವಾರ್ ವಾಡಾದಲ್ಲಿ ಬೃಹತ್ ಸಮಾವೇಶ ಮತ್ತು ಭೀಮಾ ನದಿ ತೀರದ ಕೊರೆಗಾಂವ್ವರೆಗೆ 40 ಕಿ.ಮೀ. ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುಜರಾತ್ನ ಶಾಸಕ ಜಿಗ್ನೇಶ್ ಮೆವಾನಿ ಪಾಲ್ಗೊಂಡಿದ್ದರು.</p><p><strong>ವಿರೋಧಿಸಿದ್ದ ಬಲಪಂಥೀಯ ಸಂಘಟನೆಗಳು</strong><br/>&#13; ಈ ಸಮಾವೇಶಕ್ಕೆ ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಖಿಲ ಭಾರತೀಯ ಬ್ರಹ್ಮ ಮಹಾಸಭಾ, ರಾಷ್ಟ್ರೀಯ ಏಕಮತ ರಾಷ್ಟ್ರ ಅಭಿಯಾನ್, ಹಿಂದೂ ಅಘದಿ ಮತ್ತಿತರ ಬಲಪಂಥೀಯ ಸಂಘಟನೆಗಳು ವಿಜಯೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ್ದವು.</p><p><strong>ಇವನ್ನೂ ಓದಿ...<br/>&#13; <a href="http://www.prajavani.net/news/article/2014/12/28/288653.html">ಕೋರೆಗಾಂವ್ ಶೋಷಿತರ ವಿಜಯದ ರೂಪಕ</a><br/>&#13; <a href="http://www.prajavani.net/news/article/2017/12/28/543312.html">ಕೊರೆಗಾಂವ್ ದಲಿತರ ಹೋರಾಟಕ್ಕೆ 200 ವರ್ಷ: ಪುಣೆಯಲ್ಲಿ ಬೃಹತ್ ಜಾಥಾ</a></strong></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ: </strong>ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ ಸ್ಮರಣಾರ್ಥ ಸೋಮವಾರ ಆಯೋಜಿಸಿದ್ದ 200ನೇ ವಿಜಯೋತ್ಸವದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಿದ್ದಾರೆ.</p>.<p>‘ಜಿಲ್ಲೆಯ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದವರು ಮಧ್ಯಾಹ್ನ ಯುದ್ಧ ಸ್ಮಾರಕದ ಬಳಿ ತೆರಳುತ್ತಿದ್ದಾಗ ಹಿಂಸಾ ಕೃತ್ಯಗಳು ನಡೆದಿವೆ. ಕೆಲ ಜನರು ಮತ್ತು ಒಂದು ಗುಂಪಿನ ಮಧ್ಯೆ ಯಾವುದೋ ವಿಷಯದ ಬಗ್ಗೆ ವಾಗ್ವಾದ ನಡೆದು ಗಲಾಟೆ ಆರಂಭವಾಗಿದೆ. ಸಮೀಪದಲ್ಲಿದ್ದ ಮನೆ, ವಾಹನಗಳನ್ನು ಹಾನಿಗೊಳಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಸೋಮವಾರ ಬೆಳಿಗ್ಗೆ ದಲಿತ ಮುಖಂಡ ಜಿಗ್ನೇಶ್ ಮೆವಾನಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದರು.</p>.<p></p><p>ಈ ಹಿಂಸಾಚಾರದ ನಂತರ ಪುಣೆ–ಅಹ್ಮದ್ನಗರ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸಂಜೆಯ ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ವದಂತಿಗಳು ಹರಡುವುದನ್ನು ತಡೆಯಲು ಕೆಲಕಾಲ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ವಿವರಿಸಿದ್ದಾರೆ.</p><p>ಅಹಿತಕರ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುವುದು. ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p><p><iframe allowfullscreen="true" allowtransparency="true" frameborder="0" height="308" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Fnilesh.borde.5%2Fvideos%2F961416877345711%2F&amp;show_text=0&amp;width=560" style="border:none;overflow:hidden" width="560"/></p><p>ಕೊರೆಗಾಂವ್ನ ಹಲವೆಡೆ ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.<br/>&#13; <iframe allowfullscreen="true" allowtransparency="true" frameborder="0" height="476" scrolling="no" src="https://www.facebook.com/plugins/video.php?href=https%3A%2F%2Fwww.facebook.com%2Fambedkartv%2Fvideos%2F1981205545429417%2F&amp;show_text=0&amp;width=267" style="border:none;overflow:hidden" width="267"/><br/>&#13; 1818 ಜನವರಿ 1ರಂದು ಪೇಶ್ವೆಗಳ ವಿರುದ್ಧ ಸಿಡಿದೆದ್ದ ಕೊರೆಗಾಂವ್ನ ದಲಿತ ಯೋಧರು ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದರು. ಈ ಗೆಲುವಿಗೆ 2018ರ ಜನವರಿ 1ಕ್ಕೆ 200 ವರ್ಷ.</p><p>200ನೇ ವರ್ಷದ ವಿಜಯೋತ್ಸವದ ಅಂಗವಾಗಿ ಭಾನುವಾರ (2017ರ ಡಿ.31) ಪುಣೆಯ ಶನಿವಾರ್ ವಾಡಾದಲ್ಲಿ ಬೃಹತ್ ಸಮಾವೇಶ ಮತ್ತು ಭೀಮಾ ನದಿ ತೀರದ ಕೊರೆಗಾಂವ್ವರೆಗೆ 40 ಕಿ.ಮೀ. ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುಜರಾತ್ನ ಶಾಸಕ ಜಿಗ್ನೇಶ್ ಮೆವಾನಿ ಪಾಲ್ಗೊಂಡಿದ್ದರು.</p><p><strong>ವಿರೋಧಿಸಿದ್ದ ಬಲಪಂಥೀಯ ಸಂಘಟನೆಗಳು</strong><br/>&#13; ಈ ಸಮಾವೇಶಕ್ಕೆ ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಖಿಲ ಭಾರತೀಯ ಬ್ರಹ್ಮ ಮಹಾಸಭಾ, ರಾಷ್ಟ್ರೀಯ ಏಕಮತ ರಾಷ್ಟ್ರ ಅಭಿಯಾನ್, ಹಿಂದೂ ಅಘದಿ ಮತ್ತಿತರ ಬಲಪಂಥೀಯ ಸಂಘಟನೆಗಳು ವಿಜಯೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ್ದವು.</p><p><strong>ಇವನ್ನೂ ಓದಿ...<br/>&#13; <a href="http://www.prajavani.net/news/article/2014/12/28/288653.html">ಕೋರೆಗಾಂವ್ ಶೋಷಿತರ ವಿಜಯದ ರೂಪಕ</a><br/>&#13; <a href="http://www.prajavani.net/news/article/2017/12/28/543312.html">ಕೊರೆಗಾಂವ್ ದಲಿತರ ಹೋರಾಟಕ್ಕೆ 200 ವರ್ಷ: ಪುಣೆಯಲ್ಲಿ ಬೃಹತ್ ಜಾಥಾ</a></strong></p></p></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>