‘ಯಾರೂ ಸಹ ಆತಂಕಪಡುವುದು ಬೇಡ. ಉಳಿದ ಹೆಸರುಗಳು ಪರಿಶೀಲನೆಯ ವಿವಿಧ ಹಂತಗಳಲ್ಲಿವೆ. ಸುಪ್ರೀಂ ಕೋರ್ಟ್ ಮಾರ್ಗದರ್ಶನದ ಅನುಸಾರ ನಾವು ಮುಂದಿನ ಕರಡು ಬಿಡುಗಡೆಗೊಳಿಸುತ್ತೇವೆ. ದೋಷರಹಿತ ಕರಡು ಪ್ರಕಟಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ವರ್ಷಾಂತ್ಯದಲ್ಲಿ ಎನ್ಆರ್ಸಿ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ’ ಎಂದು ಭಾರತದ ಮಹಾನೋಂದಣಿ ಅಧಿಕಾರಿ ಶೈಲೇಶ್ ತಿಳಿಸಿದ್ದಾರೆ.