ಸದ್ಯ ಹುಬ್ಬಳ್ಳಿ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಮನೆ–ಮನೆಗೆ ಕಾಂಗ್ರೆಸ್ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. ನಾನು ಹಾನಗಲ್ ಕ್ಷೇತ್ರದ ಪ್ರಬಲ ಮತ್ತು ಹಿರಿಯ ಆಕಾಂಕ್ಷಿ’ ಎಂದು ಸತೀಶ ಅವರು ಪ್ರತಿಪಾದಿಸಿದರು. ಮುಖಂಡರಾದ ಉಮೇಶ ಗೌಳಿ, ಎ.ಎಂ.ಮುಲ್ಲಾ, ಸುರೇಶ ದೊಡ್ಡಕುರುಬರ, ಗಿರೀಶಗೌಡ ಪಾಟೀಲ, ಸಂದೀಪ ಹುಲಗೂರ, ಎಂ.ಎನ್.ಸರಖಾಜಿ, ಬಿ.ಎಸ್.ಮೆಳ್ಳೆಳ್ಳಿ ಇದ್ದರು.