ಶೃಂಗೇರಿ: ಕುಟುಂಬದ ಹಿತಕ್ಕಾಗಿ ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ಮಾಡಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನಿರ್ಧರಿಸಿದ್ದು, ಅವರ ಕುಟುಂಬ ಬುಧವಾರದಿಂದ 12 ದಿನ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಲಿದೆ.
ದೇವೇಗೌಡ, ಪತ್ನಿ ಚೆನ್ನಮ್ಮ ಹಾಗೂ ಪುತ್ರ ರೇವಣ್ಣ ಅವರು ಇಲ್ಲಿನ ಶಾರದಾ ಮಠಕ್ಕೆ ಮಂಗಳವಾರ ಭೇಟಿ ನೀಡಿ ನರಸಿಂಹವನದ ಗುರು ನಿವಾಸದಲ್ಲಿ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಸ್ವಾಮೀಜಿ ಅವರ ಆರ್ಶೀವಚನ ಪಡೆದರು.
‘ಶಾರದಾ ಮಠದಲ್ಲಿ 12 ದಿನ ಕುಟುಂಬದ ಹಿತಕ್ಕಾಗಿ ಅತಿರುದ್ರ ಮಹಾಯಾಗ ಮಾಡಲು ನಿಶ್ಚಯಿಸಿದ್ದೇವೆ’ ಎಂದು ಎಚ್.ಡಿ.ರೇವಣ್ಣ ತಿಳಿಸಿದರು.