ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೆಂಡನ್ನು ಕೆಣಕದಿದ್ದರೆ ಅಪಾಯದಿಂದ ಪಾರು’

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಪುಟಿಯುವ ಕಾರಣ ಆಡಲು ಆಗದೇ ಇರುವ ಎಸೆತಗಳನ್ನು ಕೆಣಕದೇ ಬಿಡುವುದು ಒಳಿತು ಎಂದು ಭಾರತ ತಂಡದ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಹೇಳಿದರು.

‘ಭಾರತದ ಹೊರಗಿನ್ ಪಿಚ್‌ಗಳಲ್ಲಿ ಆಡಲು ವಿಶೇಷ ಸಾಮರ್ಥ್ಯ ಬೇಕು. ಅಲ್ಲಿ ಚೆಂಡು ಹೆಚ್ಚು ಪುಟಿತ ಕಾಣುತ್ತದೆ. ಅಂಥ ಎಸೆತಗಳನ್ನು ಕೆಣಕದೇ ಬಿಡುವವರು ಅಪಾಯದಿಂದ ಪಾರಾಗಬಲ್ಲರು’ ಎಂದು ಅವರು ಹೇಳಿದರು.

‘ತವರಿನಲ್ಲಿ ಶ್ರೀಲಂಕಾ ವಿರುದ್ಧ ಆಡುತ್ತಿದ್ದಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದ ಕುರಿತು ಯೋಚಿಸಿದ್ದೆವು. ಇಲ್ಲಿ ಆಡಲು ಅಲ್ಲೇ ಸಿದ್ಧತೆ ಮಾಡಿಕೊಂಡಿದ್ದೆವು. ಆದ್ದರಿಂದ ಇಲ್ಲಿ ತರಾತುರಿಯಲ್ಲಿ ಆಡುತ್ತಿಲ್ಲ. ತಂಡ ಚೆನ್ನಾಗಿ ಸಿದ್ಧಗೊಂಡೇ ಬಂದಿದೆ’ ಎಂದು ಪೂಜಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT