<p><strong>ಭಾರತ–ಪಾಕ್ ಮೈತ್ರಿಗಾಗಿ ಜೀವ ಮುಡಿಪಾಗಿಡಲು ಷೇಖ್ ಸಂಕಲ್ಪ</strong><br /> <strong>ನವದೆಹಲಿ, ಜ. 4–</strong> ‘ಭಾರತ–ಪಾಕಿಸ್ತಾನಗಳ ನಡುವಣ ಮೈತ್ರಿ ಮತ್ತು ಅಂತರ್ ಜನಾಂಗ ಹಾಗೂ ಧರ್ಮಗಳ ಐಕ್ಯಕ್ಕೆ ನನ್ನ ಜೀವಮಾನವನ್ನು ಮುಡಿಪಿಡುತ್ತೇನೆ’ ಎಂದು ಷೇಖ್ ಅಬ್ದುಲ್ಲಾ ಅವರು ಇಂದು ಇಲ್ಲಿ ಹೇಳಿದರು.</p>.<p>‘ಇಂಥ ಭಾರತ–ಪಾಕಿಸ್ತಾನಗಳ ಮೈತ್ರಿಯಲ್ಲಿಯೇ ನನ್ನ ರಾಜ್ಯದ ಶಾಂತಿ ಮತ್ತು ಸಂಪತ್ತು ಅಡಗಿದೆ’ ಎಂದೂ ಅವರು ಕಾಶ್ಮೀರದ ವಿಷಯ ಪ್ರಸ್ತಾಪಿಸಿ ನುಡಿದರು. ಎರಡು ದಿನಗಳ ಹಿಂದೆ ಬಿಡುಗಡೆಯಾದ ಅಬ್ದುಲ್ಲಾ ಅವರು ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಸಿದ್ಧಪಡಿಸಿದ ಹೇಳಿಕೆಯಲ್ಲಿ ಈ ಅಂಶವನ್ನು ತಿಳಿಸಿದರು.</p>.<p><strong>ವಿಶೇಷ ಅಂಚೆ ಚೀಟಿ ಮಾರಾಟ ರದ್ದು<br /> ಮದ್ರಾಸ್, ಜ. 4–</strong> ವಿಶ್ವ ತಮಿಳು ಸಮ್ಮೇಳನದ ಸಂದರ್ಭಕ್ಕೆ ಅಂಚೆ ಇಲಾಖೆ ಬಿಡುಗಡೆ ಮಾಡಿದ್ದ ಹದಿನೈದು ಪೈಸೆ ವಿಶೇಷ ಅಂಚೆ ಚೀಟಿಯ ಮಾರಾಟವನ್ನು ನಿಲ್ಲಿಸಲಾಗಿದೆ. ಈ ವಿಶೇಷ ಅಂಚೆ ಚೀಟಿ ಮಾರಾಟ ಗಲಭೆಗೆ ಕಾರಣವಾಗಬಹುದೆಂದು ಹೆದರಿ ಅಂಚೆ ಇಲಾಖೆ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತ–ಪಾಕ್ ಮೈತ್ರಿಗಾಗಿ ಜೀವ ಮುಡಿಪಾಗಿಡಲು ಷೇಖ್ ಸಂಕಲ್ಪ</strong><br /> <strong>ನವದೆಹಲಿ, ಜ. 4–</strong> ‘ಭಾರತ–ಪಾಕಿಸ್ತಾನಗಳ ನಡುವಣ ಮೈತ್ರಿ ಮತ್ತು ಅಂತರ್ ಜನಾಂಗ ಹಾಗೂ ಧರ್ಮಗಳ ಐಕ್ಯಕ್ಕೆ ನನ್ನ ಜೀವಮಾನವನ್ನು ಮುಡಿಪಿಡುತ್ತೇನೆ’ ಎಂದು ಷೇಖ್ ಅಬ್ದುಲ್ಲಾ ಅವರು ಇಂದು ಇಲ್ಲಿ ಹೇಳಿದರು.</p>.<p>‘ಇಂಥ ಭಾರತ–ಪಾಕಿಸ್ತಾನಗಳ ಮೈತ್ರಿಯಲ್ಲಿಯೇ ನನ್ನ ರಾಜ್ಯದ ಶಾಂತಿ ಮತ್ತು ಸಂಪತ್ತು ಅಡಗಿದೆ’ ಎಂದೂ ಅವರು ಕಾಶ್ಮೀರದ ವಿಷಯ ಪ್ರಸ್ತಾಪಿಸಿ ನುಡಿದರು. ಎರಡು ದಿನಗಳ ಹಿಂದೆ ಬಿಡುಗಡೆಯಾದ ಅಬ್ದುಲ್ಲಾ ಅವರು ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಸಿದ್ಧಪಡಿಸಿದ ಹೇಳಿಕೆಯಲ್ಲಿ ಈ ಅಂಶವನ್ನು ತಿಳಿಸಿದರು.</p>.<p><strong>ವಿಶೇಷ ಅಂಚೆ ಚೀಟಿ ಮಾರಾಟ ರದ್ದು<br /> ಮದ್ರಾಸ್, ಜ. 4–</strong> ವಿಶ್ವ ತಮಿಳು ಸಮ್ಮೇಳನದ ಸಂದರ್ಭಕ್ಕೆ ಅಂಚೆ ಇಲಾಖೆ ಬಿಡುಗಡೆ ಮಾಡಿದ್ದ ಹದಿನೈದು ಪೈಸೆ ವಿಶೇಷ ಅಂಚೆ ಚೀಟಿಯ ಮಾರಾಟವನ್ನು ನಿಲ್ಲಿಸಲಾಗಿದೆ. ಈ ವಿಶೇಷ ಅಂಚೆ ಚೀಟಿ ಮಾರಾಟ ಗಲಭೆಗೆ ಕಾರಣವಾಗಬಹುದೆಂದು ಹೆದರಿ ಅಂಚೆ ಇಲಾಖೆ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>