<p><strong>ಬೆಂಗಳೂರು: </strong>ಕಾಡುಕೋಣದ ಕೊಂಬು ಹಾಗೂ ಒಂಟೆ ಹಲ್ಲುಗಳ ಅಕ್ರಮ ಸಾಗಣೆಯನ್ನು ಪತ್ತೆ ಹಚ್ಚಿರುವ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದಾರೆ.</p>.<p>ಕ್ವಾಲಾಲಂಪುರದಿಂದ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ಮಂಜುನಾಥ್ ಎಂಬಾತನನ್ನು ಕಸ್ಟಮ್ಸ್ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಅವರ ಬ್ಯಾಗ್ನಲ್ಲಿ ಕಾಡುಕೋಣದ 24 ಕೆ.ಜಿ ತೂಕದ ಎರಡು ಕೊಂಬುಗಳು ಪತ್ತೆಯಾದವು.</p>.<p>ಇನ್ನೊಂದು ಪ್ರಕರಣದಲ್ಲಿ, ನಗರದಿಂದ ಬ್ಯಾಂಕಾಕ್ಗೆ ಹೊರಟಿದ್ದ ಮೈಸೂರಿನ ಮೋಹನ್ ಹಾಗೂ ಪಿ. ದೇವತಿ ಎಂಬುವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರ ಬ್ಯಾಗ್ನಲ್ಲಿ ಒಂಟೆಯ 71.26 ಕೆ.ಜಿ ತೂಕದ 50ಕ್ಕೂ ಹೆಚ್ಚು ಹಲ್ಲುಗಳಿರುವುದು ಗೊತ್ತಾಯಿತು.</p>.<p>‘ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದವೆ. ಕೊಂಬು ಹಾಗೂ ಹಲ್ಲುಗಳನ್ನು ಜಪ್ತಿ ಮಾಡಿದ್ದೇವೆ. ಅವುಗಳನ್ನು ಅವರು ಎಲ್ಲಿಂದ ತಂದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಕಸ್ಟಮ್ಸ್ ಹೆಚ್ಚುವರಿ ಆಯುಕ್ತ ಹರ್ಷವರ್ಧನ್ ಉಮ್ರೆ ತಿಳಿಸಿದರು.</p>.<p>ಸಿಹಿ ತಿನಿಸು ಡಬ್ಬಿಯಲ್ಲಿ ಮಾದಕ ವಸ್ತು: ಸಿಹಿ ತಿನಿಸುಗಳ ಡಬ್ಬಿಗಳಿದ್ದ ಬಾಕ್ಸ್ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ₹1 ಕೋಟಿ ಮೌಲ್ಯದ ಮಾದಕ ವಸ್ತು<br /> ವನ್ನು ಏರ್ ಇಂಟೆಲಿಜೆನ್ಸ್ ಹಾಗೂ ಏರ್ಪೋರ್ಟ್ ಕೊರಿಯರ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.</p>.<p>ಚೆನ್ನೈನ ಫೆಡೆಕ್ಸ್ ಕೊರಿಯರ್ ಕಂಪನಿಯು ಒಂದು ಬಾಕ್ಸ್ನಲ್ಲಿ 17 ಡಬ್ಬಿಗಳನ್ನು ಇಟ್ಟು ವಿಮಾನದ ಮೂಲಕಕ್ವಾಲಾಲಂಪುರಕ್ಕೆ ಕಳುಹಿಸುತ್ತಿತ್ತು. ಚೆನ್ನೈನಿಂದ ಬಂದ ಆ ಬಾಕ್ಸ್ನ್ನು ಸ್ಕ್ಯಾನಿಂಗ್ ಯಂತ್ರದಲ್ಲಿ ಪರಿಶೀಲಿಸಿ ಬೇರೊಂದು ವಿಮಾನಕ್ಕೆ ತುಂಬಿಸಲಾಗುತ್ತಿತ್ತು. ಅದೇ ವೇಳೆ ಬಾಕ್ಸ್ನಲ್ಲಿ ಮಾದಕ ವಸ್ತು ಕೆಟಾಮಿನ್ ಇರುವುದು ಗೊತ್ತಾಯಿತು.</p>.<p>‘ಬಾಕ್ಸ್ ಮೇಲೆ ಶ್ರೀ ಮಿಥೈ ಎಂಬ ಲೇಬಲ್ ಇತ್ತು. 17 ಡಬ್ಬಿಗಳ ಪೈಕಿ 6ರಲ್ಲಿ ಸಿಹಿ ತಿನಿಸು ಹಾಗೂ ಉಳಿದ ಡಬ್ಬಿಗಳಲ್ಲಿ ಮಾದಕ ವಸ್ತು ಇತ್ತು. ಬೆಳ್ಳಿ ಬಣ್ಣದ ಡಬ್ಬಿಗಳ ಮೇಲ್ಭಾಗದಲ್ಲಿ ಮೆಣಸಿನಕಾಯಿ ಪುಡಿ ಸಿಂಪಡಣೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಫೆಡೆಕ್ಸ್ ಕೊರಿಯರ್ ಕಂಪನಿ ವ್ಯವಸ್ಥಾಪಕನಿಗೆ ಸಮನ್ಸ್ ಜಾರಿ ಮಾಡಿದ್ದೇವೆ’ ಎಂದು ಹರ್ಷವರ್ಧನ್ ಉಮ್ರೆ ಅವರು ಹೇಳಿದರು.</p>.<p>ಚಿನ್ನದ ಕಸೂತಿ ಸೀರೆ ಜಪ್ತಿ:ಚಿನ್ನದಿಂದ ಕಸೂತಿ ಮಾಡಿದ್ದ ಬುರ್ಖಾ ಹಾಗೂ ಸೀರೆಯನ್ನು ಜಪ್ತಿ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು, ಭಟ್ಕಳದ ಶಾಮಿಲ್ ಅಹ್ಮದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.</p>.<p>‘ದುಬೈನಿಂದ 6ಇ 096 ವಿಮಾನದಲ್ಲಿ ನಗರ ನಿಲ್ದಾಣಕ್ಕೆ ಬಂದಿಳಿದಿದ್ದ ಅವರನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಸೂಟ್ಕೇಸ್ನಲ್ಲಿ ಬುರ್ಖಾ ಹಾಗೂ ಸೀರೆ ಪತ್ತೆಯಾಯಿತು. ಕೆಲ ಚಿನ್ನದ ಆಭರಣಗಳು ಇದ್ದವು. ಅವರಿಂದ ₹15.13 ಲಕ್ಷ ಮೌಲ್ಯದ 498 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದೇವೆ’ ಎಂದು ಹರ್ಷವರ್ಧನ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಾಡುಕೋಣದ ಕೊಂಬು ಹಾಗೂ ಒಂಟೆ ಹಲ್ಲುಗಳ ಅಕ್ರಮ ಸಾಗಣೆಯನ್ನು ಪತ್ತೆ ಹಚ್ಚಿರುವ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದಾರೆ.</p>.<p>ಕ್ವಾಲಾಲಂಪುರದಿಂದ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ಮಂಜುನಾಥ್ ಎಂಬಾತನನ್ನು ಕಸ್ಟಮ್ಸ್ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಅವರ ಬ್ಯಾಗ್ನಲ್ಲಿ ಕಾಡುಕೋಣದ 24 ಕೆ.ಜಿ ತೂಕದ ಎರಡು ಕೊಂಬುಗಳು ಪತ್ತೆಯಾದವು.</p>.<p>ಇನ್ನೊಂದು ಪ್ರಕರಣದಲ್ಲಿ, ನಗರದಿಂದ ಬ್ಯಾಂಕಾಕ್ಗೆ ಹೊರಟಿದ್ದ ಮೈಸೂರಿನ ಮೋಹನ್ ಹಾಗೂ ಪಿ. ದೇವತಿ ಎಂಬುವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರ ಬ್ಯಾಗ್ನಲ್ಲಿ ಒಂಟೆಯ 71.26 ಕೆ.ಜಿ ತೂಕದ 50ಕ್ಕೂ ಹೆಚ್ಚು ಹಲ್ಲುಗಳಿರುವುದು ಗೊತ್ತಾಯಿತು.</p>.<p>‘ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದವೆ. ಕೊಂಬು ಹಾಗೂ ಹಲ್ಲುಗಳನ್ನು ಜಪ್ತಿ ಮಾಡಿದ್ದೇವೆ. ಅವುಗಳನ್ನು ಅವರು ಎಲ್ಲಿಂದ ತಂದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಕಸ್ಟಮ್ಸ್ ಹೆಚ್ಚುವರಿ ಆಯುಕ್ತ ಹರ್ಷವರ್ಧನ್ ಉಮ್ರೆ ತಿಳಿಸಿದರು.</p>.<p>ಸಿಹಿ ತಿನಿಸು ಡಬ್ಬಿಯಲ್ಲಿ ಮಾದಕ ವಸ್ತು: ಸಿಹಿ ತಿನಿಸುಗಳ ಡಬ್ಬಿಗಳಿದ್ದ ಬಾಕ್ಸ್ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ₹1 ಕೋಟಿ ಮೌಲ್ಯದ ಮಾದಕ ವಸ್ತು<br /> ವನ್ನು ಏರ್ ಇಂಟೆಲಿಜೆನ್ಸ್ ಹಾಗೂ ಏರ್ಪೋರ್ಟ್ ಕೊರಿಯರ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.</p>.<p>ಚೆನ್ನೈನ ಫೆಡೆಕ್ಸ್ ಕೊರಿಯರ್ ಕಂಪನಿಯು ಒಂದು ಬಾಕ್ಸ್ನಲ್ಲಿ 17 ಡಬ್ಬಿಗಳನ್ನು ಇಟ್ಟು ವಿಮಾನದ ಮೂಲಕಕ್ವಾಲಾಲಂಪುರಕ್ಕೆ ಕಳುಹಿಸುತ್ತಿತ್ತು. ಚೆನ್ನೈನಿಂದ ಬಂದ ಆ ಬಾಕ್ಸ್ನ್ನು ಸ್ಕ್ಯಾನಿಂಗ್ ಯಂತ್ರದಲ್ಲಿ ಪರಿಶೀಲಿಸಿ ಬೇರೊಂದು ವಿಮಾನಕ್ಕೆ ತುಂಬಿಸಲಾಗುತ್ತಿತ್ತು. ಅದೇ ವೇಳೆ ಬಾಕ್ಸ್ನಲ್ಲಿ ಮಾದಕ ವಸ್ತು ಕೆಟಾಮಿನ್ ಇರುವುದು ಗೊತ್ತಾಯಿತು.</p>.<p>‘ಬಾಕ್ಸ್ ಮೇಲೆ ಶ್ರೀ ಮಿಥೈ ಎಂಬ ಲೇಬಲ್ ಇತ್ತು. 17 ಡಬ್ಬಿಗಳ ಪೈಕಿ 6ರಲ್ಲಿ ಸಿಹಿ ತಿನಿಸು ಹಾಗೂ ಉಳಿದ ಡಬ್ಬಿಗಳಲ್ಲಿ ಮಾದಕ ವಸ್ತು ಇತ್ತು. ಬೆಳ್ಳಿ ಬಣ್ಣದ ಡಬ್ಬಿಗಳ ಮೇಲ್ಭಾಗದಲ್ಲಿ ಮೆಣಸಿನಕಾಯಿ ಪುಡಿ ಸಿಂಪಡಣೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಫೆಡೆಕ್ಸ್ ಕೊರಿಯರ್ ಕಂಪನಿ ವ್ಯವಸ್ಥಾಪಕನಿಗೆ ಸಮನ್ಸ್ ಜಾರಿ ಮಾಡಿದ್ದೇವೆ’ ಎಂದು ಹರ್ಷವರ್ಧನ್ ಉಮ್ರೆ ಅವರು ಹೇಳಿದರು.</p>.<p>ಚಿನ್ನದ ಕಸೂತಿ ಸೀರೆ ಜಪ್ತಿ:ಚಿನ್ನದಿಂದ ಕಸೂತಿ ಮಾಡಿದ್ದ ಬುರ್ಖಾ ಹಾಗೂ ಸೀರೆಯನ್ನು ಜಪ್ತಿ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು, ಭಟ್ಕಳದ ಶಾಮಿಲ್ ಅಹ್ಮದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.</p>.<p>‘ದುಬೈನಿಂದ 6ಇ 096 ವಿಮಾನದಲ್ಲಿ ನಗರ ನಿಲ್ದಾಣಕ್ಕೆ ಬಂದಿಳಿದಿದ್ದ ಅವರನ್ನು ಸಿಬ್ಬಂದಿ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಸೂಟ್ಕೇಸ್ನಲ್ಲಿ ಬುರ್ಖಾ ಹಾಗೂ ಸೀರೆ ಪತ್ತೆಯಾಯಿತು. ಕೆಲ ಚಿನ್ನದ ಆಭರಣಗಳು ಇದ್ದವು. ಅವರಿಂದ ₹15.13 ಲಕ್ಷ ಮೌಲ್ಯದ 498 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದೇವೆ’ ಎಂದು ಹರ್ಷವರ್ಧನ್ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>