<p><strong>ಬೆಂಗಳೂರು:</strong> ನಾಥ ಪಂಥದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಾದ ಅಗತ್ಯ ಇದೆ. ಇದಕ್ಕಾಗಿ ಆದಿಚುಂಚನಗಿರಿ ಮಠದಿಂದ ಅಥವಾ ವಿಶ್ವವಿದ್ಯಾಲಯದ ವತಿಯಿಂದ ನಾಥ ಸಂಪ್ರದಾಯ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್ ಹೇಳಿದರು.</p>.<p>ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಮಠದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಶಿವನ ಅಂಶವಾಗಿ ಹುಟ್ಟುವ ಭೈರವನೇ ನಾಥ ಸಂಪ್ರದಾಯದವರಿಗೆ ಆರಾಧಕ. ಇದನ್ನು ಶೈವ ಸಂಪ್ರದಾಯದ ಒಂದು ಕವಲು ಎಂದು ಭಾವಿಸುತ್ತೇವೆ. ನಾ ಎಂದರೆ ಅನಾದಿ ಭೂತ, ಥ ಎಂದರೆ ಮೂರು ಲೋಕದ ಸ್ಥಿತಿಗೆ ಕಾರಣರಾದ ಶಿವ ಎಂದರ್ಥ. ಅದರ ಪ್ರಕಾರ ಶಿವ ಈ ಸಂಪ್ರದಾಯದ ಮೂಲ ಪುರುಷ ಎನ್ನಬಹುದು ಎಂದು ಹೇಳಿದರು.</p>.<p>ಚಾರಿತ್ರಿಕವಾಗಿ ಈ ಸಂಪ್ರದಾಯದ ಮೂಲಪುರುಷ ಗೋರಖನಾಥ. ಅವರ ಕಾಲಘಟ್ಟದಲ್ಲಿಯೇ ಈ ಸಂಪ್ರದಾಯವು ಸಮಗ್ರ ಸ್ವರೂಪದಲ್ಲಿ ಕಾಣಿಸಿಕೊಂಡದ್ದು. ಅವರಿಗೆ ಸಂಬಂಧ ಪಟ್ಟ ದೇವಾಲಯಗಳು ಹಾಗೂ ಗುಹಾಂತರ ದೇವಾಲಯಗಳು ಹೆಚ್ಚಾಗಿ ಉತ್ತರ ಭಾರತದಲ್ಲಿವೆ ಎಂದು ವಿವರಿಸಿದರು.</p>.<p>ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿಯೇ ಶಿವನ ಆರಾಧನೆ ನಡೆಯುತ್ತಿದ್ದ ಬಗ್ಗೆ ಪುರಾವೆಗಳು ಲಭ್ಯ. ಗಂಗರ ಕಾಲದ ದೇವಾಲಯಗಳ ಗರ್ಭಗುಡಿಯಲ್ಲಿ ಭೈರವ ಪ್ರತಿಷ್ಠಾಪನೆಗೊಂಡಿದ್ದ. ಶಿವನ ಆರಾಧನೆ ಎಷ್ಟು ಪ್ರಾಚೀನವೋ ಭೈರವನ ಆರಾಧನೆಯೂ ಅಷ್ಟೇ ಪ್ರಾಚೀನ. ನಾಥ ಪಂಥಕ್ಕೂ ಅಷ್ಟೇ ಪ್ರಾಚೀನತೆ ಇದೆ ಎಂದರು.</p>.<p>ಅಧ್ಯಯನಕ್ಕೆ ನೆರವು: ‘ನಾಥ ಸಂಪ್ರದಾಯದ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಿದೆ. ಇದಕ್ಕೆ ಮಠದಿಂದ ಪ್ರೋತ್ಸಾಹ ನೀಡುತ್ತೇವೆ’ ಎಂದು ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.</p>.<p>‘ಗೋರಖನಾಥ ಅವರ ಹೆಸರನ್ನು ಬೇರೆಯವರ ಜತೆ ಹೋಲಿಕೆ ಮಾಡುವುದರಿಂದ ಈ ಸಂಪ್ರದಾಯ ಉಗಮದ ಕಾಲಘಟ್ಟವನ್ನು ನಿರ್ಧರಿಸಲು ಆಗುವುದಿಲ್ಲ. ಒಂದು ವೇಳೆ ಆ ರೀತಿ ಮಾಡಿದ್ದೆ ಆದಲ್ಲಿ ನಾವು ಸತ್ಯಶೋಧನೆಯಲ್ಲಿ ದಾರಿ ತಪ್ಪಿದಂತಾಗುತ್ತದೆ. ನಮ್ಮ ಸಂಪ್ರದಾಯದ ಬಗ್ಗೆ ಪ್ರಚಾರ ಮಾಡುತ್ತಾ, ನಮ್ಮ ಬಗ್ಗೆ ವೈಭವಿಕರಿಸಿಕೊಳ್ಳದೆ ಸತ್ಯ ಶೋಧನೆ ಮಾಡಿ ಜಗತ್ತಿಗೆ ತಿಳಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾಥ ಪಂಥದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಾದ ಅಗತ್ಯ ಇದೆ. ಇದಕ್ಕಾಗಿ ಆದಿಚುಂಚನಗಿರಿ ಮಠದಿಂದ ಅಥವಾ ವಿಶ್ವವಿದ್ಯಾಲಯದ ವತಿಯಿಂದ ನಾಥ ಸಂಪ್ರದಾಯ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್ ಹೇಳಿದರು.</p>.<p>ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಮಠದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಶಿವನ ಅಂಶವಾಗಿ ಹುಟ್ಟುವ ಭೈರವನೇ ನಾಥ ಸಂಪ್ರದಾಯದವರಿಗೆ ಆರಾಧಕ. ಇದನ್ನು ಶೈವ ಸಂಪ್ರದಾಯದ ಒಂದು ಕವಲು ಎಂದು ಭಾವಿಸುತ್ತೇವೆ. ನಾ ಎಂದರೆ ಅನಾದಿ ಭೂತ, ಥ ಎಂದರೆ ಮೂರು ಲೋಕದ ಸ್ಥಿತಿಗೆ ಕಾರಣರಾದ ಶಿವ ಎಂದರ್ಥ. ಅದರ ಪ್ರಕಾರ ಶಿವ ಈ ಸಂಪ್ರದಾಯದ ಮೂಲ ಪುರುಷ ಎನ್ನಬಹುದು ಎಂದು ಹೇಳಿದರು.</p>.<p>ಚಾರಿತ್ರಿಕವಾಗಿ ಈ ಸಂಪ್ರದಾಯದ ಮೂಲಪುರುಷ ಗೋರಖನಾಥ. ಅವರ ಕಾಲಘಟ್ಟದಲ್ಲಿಯೇ ಈ ಸಂಪ್ರದಾಯವು ಸಮಗ್ರ ಸ್ವರೂಪದಲ್ಲಿ ಕಾಣಿಸಿಕೊಂಡದ್ದು. ಅವರಿಗೆ ಸಂಬಂಧ ಪಟ್ಟ ದೇವಾಲಯಗಳು ಹಾಗೂ ಗುಹಾಂತರ ದೇವಾಲಯಗಳು ಹೆಚ್ಚಾಗಿ ಉತ್ತರ ಭಾರತದಲ್ಲಿವೆ ಎಂದು ವಿವರಿಸಿದರು.</p>.<p>ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿಯೇ ಶಿವನ ಆರಾಧನೆ ನಡೆಯುತ್ತಿದ್ದ ಬಗ್ಗೆ ಪುರಾವೆಗಳು ಲಭ್ಯ. ಗಂಗರ ಕಾಲದ ದೇವಾಲಯಗಳ ಗರ್ಭಗುಡಿಯಲ್ಲಿ ಭೈರವ ಪ್ರತಿಷ್ಠಾಪನೆಗೊಂಡಿದ್ದ. ಶಿವನ ಆರಾಧನೆ ಎಷ್ಟು ಪ್ರಾಚೀನವೋ ಭೈರವನ ಆರಾಧನೆಯೂ ಅಷ್ಟೇ ಪ್ರಾಚೀನ. ನಾಥ ಪಂಥಕ್ಕೂ ಅಷ್ಟೇ ಪ್ರಾಚೀನತೆ ಇದೆ ಎಂದರು.</p>.<p>ಅಧ್ಯಯನಕ್ಕೆ ನೆರವು: ‘ನಾಥ ಸಂಪ್ರದಾಯದ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕಿದೆ. ಇದಕ್ಕೆ ಮಠದಿಂದ ಪ್ರೋತ್ಸಾಹ ನೀಡುತ್ತೇವೆ’ ಎಂದು ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.</p>.<p>‘ಗೋರಖನಾಥ ಅವರ ಹೆಸರನ್ನು ಬೇರೆಯವರ ಜತೆ ಹೋಲಿಕೆ ಮಾಡುವುದರಿಂದ ಈ ಸಂಪ್ರದಾಯ ಉಗಮದ ಕಾಲಘಟ್ಟವನ್ನು ನಿರ್ಧರಿಸಲು ಆಗುವುದಿಲ್ಲ. ಒಂದು ವೇಳೆ ಆ ರೀತಿ ಮಾಡಿದ್ದೆ ಆದಲ್ಲಿ ನಾವು ಸತ್ಯಶೋಧನೆಯಲ್ಲಿ ದಾರಿ ತಪ್ಪಿದಂತಾಗುತ್ತದೆ. ನಮ್ಮ ಸಂಪ್ರದಾಯದ ಬಗ್ಗೆ ಪ್ರಚಾರ ಮಾಡುತ್ತಾ, ನಮ್ಮ ಬಗ್ಗೆ ವೈಭವಿಕರಿಸಿಕೊಳ್ಳದೆ ಸತ್ಯ ಶೋಧನೆ ಮಾಡಿ ಜಗತ್ತಿಗೆ ತಿಳಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>