ಸೂಳೆಕೆರೆಗೆ ಹರಿದು ಬರುತ್ತಿರುವ ನೀರು ಕಲುಷಿತಗೊಂಡಿದ್ದು, ಕೊಕ್ಕರೆ ಹಾಗು ನೀರು ಕೋಳಿ ಸಾವಿಗೆ ಕಾರಣ ಇರಬಹುದು ಎಂದು ಸ್ಥಳಿಯರು ದೂರುತ್ತಾರೆ. ಮಂಡ್ಯ ನಗರದ ತ್ಯಾಜ್ಯವೆಲ್ಲವೂ ಸೂಳೆಕೆರೆಗೆ ಹರಿದು ಬರುತ್ತದೆ. ಮೈಷುಗರ್ ಕಾರ್ಖಾನೆಯ ತ್ಯಾಜ್ಯವೂ ಸೂಳೆಕೆರೆಗೆ ಸೇರುತ್ತದೆ. ಆದ್ದರಿಂದ ಸೂಳೆಕೆರೆಯ ನೀರು ದುರ್ವಾಸನೆ ಬೀರುತ್ತದೆ ಎಂದು ಅಂಬರಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಮನು ಹೇಳುತ್ತಾರೆ. ಸೂಳೆಕೆರೆಯ ಕಲುಷಿತ ನೀರನ್ನು ಸೇವಿಸುವುದರಿಂದ ಅಮೂಲ್ಯ ಪ್ರಾಣಿ ಪಕ್ಷಿಗಳ ಪ್ರಾಣ ಹರಣವಾಗುತ್ತಿದೆ ಎಂದು ಯುವ ಮುಖಂಡ ಮುಟ್ಟನಹಳ್ಳಿ ರಮೇಶ್ ಹೇಳುತ್ತಾರೆ.