<p><strong>ಹಾನಗಲ್:</strong> ‘ತಾಲ್ಲೂಕಿನಲ್ಲಿ ಎಸ್.ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ₹15 ಕೋಟಿ ಬಿಡುಗಡೆಯಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಡಾಂಬರೀಕರಣಕ್ಕಾಗಿ ₹15 ಕೋಟಿ ಜೊತೆಗೆ ಹೆಚ್ಚುವರಿಯಾಗಿ ₹15 ಕೋಟಿ ಅನುದಾನಯಾಗಿದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್ ಹೇಳಿದರು.</p>.<p>ತಾಲ್ಲೂಕಿನ ಆರೆಗೊಪ್ಪ ಗ್ರಾಮದಲ್ಲಿ ಭಾನುವಾರ ₹ 93 ಲಕ್ಷದಲ್ಲಿ ಚಿಕ್ಕೇರಿಹೊಸಳ್ಳಿ–ಆರೆಗೊಪ್ಪ ರಸ್ತೆ ಡಾಂಬರೀಕರಣ ಮತ್ತು ಪಕ್ಕದ ಇಡ್ಲಿಬಟ್ಟಿ ಓಣಿಯಲ್ಲಿ ₹ 13.27 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಜಿಲ್ಲಾ ಪಂಚಾಯ್ತಿ ಕೃಷಿ, ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ತಹಸೀಲ್ದಾರ್ ಮಾತನಾಡಿ, ‘ರಾಜ್ಯ ಸರ್ಕಾರದ ಬೆಳೆಸಾಲ ಮನ್ನಾ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 4510 ರೈತರಿಗೆ ಲಾಭ ತಟ್ಟಿದೆ. ₹11.99 ಕೋಟಿ ಸಾಲ ಮನ್ನಾ ಸೌಲಭ್ಯ ದಕ್ಕಿದೆ. ಈ ಪೈಕಿ ಮೊದಲ ಹಂತದಲ್ಲಿ ಈಗಾಗಲೇ 1918 ರೈತರ ₹ 4 ಕೋಟಿ ಸಾಲಮನ್ನಾ ಆಗಿದೆ’ ಎಂದು ಮಾಹಿತಿ ನೀಡಿದರು.</p>.<p>ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಸದಸ್ಯೆ ಸರೋಜವ್ವ ಹೊಸಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಗೌರಾಪೂರ, ಉಪಾಧ್ಯಕ್ಷ ಅಣ್ಣಪ್ಪ ಚವ್ಹಾಣ, ಮುಖಂಡರಾದ ಆರ್.ಎಸ್.ಪಾಟೀಲ, ವಿಷ್ಣುಕಾಂತ ಜಾಧವ, ಪ್ರಭು ದೊಡ್ಡಕುರುಬರ, ಲೋಕೋಪಯೋಗಿ ಎಂಜಿನಿಯರ್ ಗೋವಿಂದ ಚಪ್ಪರ, ಮಹಾಬಲೇಶ್ವರ ಇದ್ದರು.</p>.<p><strong>ಅಂಕಿ–ಅಂಶ:</strong><br /> ತಾಲ್ಲೂಕಿನ ಬೆಳೆಸಾಲ ಮನ್ನಾ ವಿವರ<br /> *4510 ರೈತ ಫಲಾನುಭವಿಗಳು<br /> *ಒಟ್ಟು ₹11.99 ಕೋಟಿ ಸಾಲ ಮನ್ನಾ<br /> *ಸದ್ಯ 1918 ರೈತರ ₹ 4 ಕೋಟಿ ಸಾಲ ಮನ್ನಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ‘ತಾಲ್ಲೂಕಿನಲ್ಲಿ ಎಸ್.ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ₹15 ಕೋಟಿ ಬಿಡುಗಡೆಯಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಡಾಂಬರೀಕರಣಕ್ಕಾಗಿ ₹15 ಕೋಟಿ ಜೊತೆಗೆ ಹೆಚ್ಚುವರಿಯಾಗಿ ₹15 ಕೋಟಿ ಅನುದಾನಯಾಗಿದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್ ಹೇಳಿದರು.</p>.<p>ತಾಲ್ಲೂಕಿನ ಆರೆಗೊಪ್ಪ ಗ್ರಾಮದಲ್ಲಿ ಭಾನುವಾರ ₹ 93 ಲಕ್ಷದಲ್ಲಿ ಚಿಕ್ಕೇರಿಹೊಸಳ್ಳಿ–ಆರೆಗೊಪ್ಪ ರಸ್ತೆ ಡಾಂಬರೀಕರಣ ಮತ್ತು ಪಕ್ಕದ ಇಡ್ಲಿಬಟ್ಟಿ ಓಣಿಯಲ್ಲಿ ₹ 13.27 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಜಿಲ್ಲಾ ಪಂಚಾಯ್ತಿ ಕೃಷಿ, ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ತಹಸೀಲ್ದಾರ್ ಮಾತನಾಡಿ, ‘ರಾಜ್ಯ ಸರ್ಕಾರದ ಬೆಳೆಸಾಲ ಮನ್ನಾ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 4510 ರೈತರಿಗೆ ಲಾಭ ತಟ್ಟಿದೆ. ₹11.99 ಕೋಟಿ ಸಾಲ ಮನ್ನಾ ಸೌಲಭ್ಯ ದಕ್ಕಿದೆ. ಈ ಪೈಕಿ ಮೊದಲ ಹಂತದಲ್ಲಿ ಈಗಾಗಲೇ 1918 ರೈತರ ₹ 4 ಕೋಟಿ ಸಾಲಮನ್ನಾ ಆಗಿದೆ’ ಎಂದು ಮಾಹಿತಿ ನೀಡಿದರು.</p>.<p>ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಸದಸ್ಯೆ ಸರೋಜವ್ವ ಹೊಸಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಗೌರಾಪೂರ, ಉಪಾಧ್ಯಕ್ಷ ಅಣ್ಣಪ್ಪ ಚವ್ಹಾಣ, ಮುಖಂಡರಾದ ಆರ್.ಎಸ್.ಪಾಟೀಲ, ವಿಷ್ಣುಕಾಂತ ಜಾಧವ, ಪ್ರಭು ದೊಡ್ಡಕುರುಬರ, ಲೋಕೋಪಯೋಗಿ ಎಂಜಿನಿಯರ್ ಗೋವಿಂದ ಚಪ್ಪರ, ಮಹಾಬಲೇಶ್ವರ ಇದ್ದರು.</p>.<p><strong>ಅಂಕಿ–ಅಂಶ:</strong><br /> ತಾಲ್ಲೂಕಿನ ಬೆಳೆಸಾಲ ಮನ್ನಾ ವಿವರ<br /> *4510 ರೈತ ಫಲಾನುಭವಿಗಳು<br /> *ಒಟ್ಟು ₹11.99 ಕೋಟಿ ಸಾಲ ಮನ್ನಾ<br /> *ಸದ್ಯ 1918 ರೈತರ ₹ 4 ಕೋಟಿ ಸಾಲ ಮನ್ನಾ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>