‘ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್ಸಿ) ನಿಯಮಾವಳಿಗೆ ಅನುಗುಣವಾಗಿಯೇ ಸೇತುವೆ ವಿನ್ಯಾಸ ಇದೆ. ನಿರ್ಮಾಣವನ್ನು ತಡ ಮಾಡಿದರೆ ಅದರ ಯೋಜನಾ ವೆಚ್ಚ ಹೆಚ್ಚುತ್ತದೆ. ಅಂತೆಯೇ ಈ ಮಾರ್ಗದ ಪ್ರಯಾಣಿಕರ ಬವಣೆ ನೀಗುವುದೂ ಇನ್ನಷ್ಟು ತಡವಾಗುತ್ತದೆ. ಆದ್ದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪರ ಹಿರಿಯ ವಕೀಲ ಡಿ.ಎನ್.ನಂಜುಂಡರೆಡ್ಡಿ ಮಂಡಿಸಿರುವ ವಾದ ಸಮರ್ಪಕವಾಗಿದೆ’ ಎಂದು ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ.