<p><strong>ಮದ್ದೂರು:</strong> ಸಮೀಪದ ನಗರಕೆರೆ ಗ್ರಾಮದಲ್ಲಿ ಶುಕ್ರವಾರ ಗಂಡನ ಮನೆಯ ಅಸ್ತಿತ್ವಕ್ಕೆ ಆಗ್ರಹಿಸಿ ಗೃಹಿಣಿಯೊಬ್ಬರು ಮಾವನ ಮನೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.</p>.<p>ಗೌಡಯ್ಯನದೊಡ್ಡಿ ಗ್ರಾಮದ ಲಕ್ಷ್ಮಿ ಹಾಗೂ ಸಂಬಂಧಿಕರು ಧರಣಿ ಆರಂಭಿಸಿದ್ದು, ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಲಕ್ಷ್ಮಿ ತಿಳಿಸಿದ್ದಾರೆ.</p>.<p>ತಾಲ್ಲೂಕಿನ ಗೌಡಯ್ಯನದೊಡ್ಡಿ ಗ್ರಾಮದ ನಾಗಣ್ಣ ಪುಷ್ಪಾ ದಂಪತಿ ಮಗಳಾದ ಲಕ್ಷ್ಮಿ ಎಂಬವವರೊಂದಿಗೆ ನಗರಕೆರೆ ಗ್ರಾಮದ ಶಿವಲಿಂಗಯ್ಯ ಹಾಗೂ ಪುಷ್ಪಾಪವತಿ ದಂಪತಿ ಪುತ್ರ ಎನ್.ಎಸ್.ಜನಾರ್ದನ್ ಅವರೊಂದಿಗೆ 5 ವರ್ಷಗಳ ಹಿಂದೆ ವಿವಾಹವಾಗಿತ್ತು, ಇವರಿಗೆ 5 ವರ್ಷದ ಓನೀಶಾ ಎಂಬ ಪುತ್ರಿ ಇದ್ದಾಳೆ. ಇದೀಗ ಇವರು 9 ತಿಂಗಳ ಗರ್ಭಿಣಿಯಾಗಿದ್ದಾರೆ.</p>.<p>ಲಕ್ಷ್ಮಿ ಅವರ ಪತಿ ಜನಾರ್ದನ್ ದಸರಾದ ಆಯುಧಪೂಜೆ ಸಂದರ್ಭ ದಲ್ಲಿ ಕೊಲೆಯಾಗಿದ್ದಾರೆ. ತಿಥಿ ಕಾರ್ಯದ ಮುಗಿದ ನಂತರ ಲಕ್ಷ್ಮಿ ಅವರನ್ನು ಮನೆಯಿಂದ ಹೊರಹಾಕಿದ್ದರು.</p>.<p>‘ನನಗೆ ಹಾಗೂ ನನ್ನ ಮಗಳಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಬೇಕು. ಅಲ್ಲದೇ ತಮ್ಮ ಜೀವನ ನಿರ್ವಹಣೆಗೆ ಅಗತ್ಯ ಆಸ್ತಿ ನೀಡಬೇಕು’ ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ಸಮೀಪದ ನಗರಕೆರೆ ಗ್ರಾಮದಲ್ಲಿ ಶುಕ್ರವಾರ ಗಂಡನ ಮನೆಯ ಅಸ್ತಿತ್ವಕ್ಕೆ ಆಗ್ರಹಿಸಿ ಗೃಹಿಣಿಯೊಬ್ಬರು ಮಾವನ ಮನೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.</p>.<p>ಗೌಡಯ್ಯನದೊಡ್ಡಿ ಗ್ರಾಮದ ಲಕ್ಷ್ಮಿ ಹಾಗೂ ಸಂಬಂಧಿಕರು ಧರಣಿ ಆರಂಭಿಸಿದ್ದು, ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಲಕ್ಷ್ಮಿ ತಿಳಿಸಿದ್ದಾರೆ.</p>.<p>ತಾಲ್ಲೂಕಿನ ಗೌಡಯ್ಯನದೊಡ್ಡಿ ಗ್ರಾಮದ ನಾಗಣ್ಣ ಪುಷ್ಪಾ ದಂಪತಿ ಮಗಳಾದ ಲಕ್ಷ್ಮಿ ಎಂಬವವರೊಂದಿಗೆ ನಗರಕೆರೆ ಗ್ರಾಮದ ಶಿವಲಿಂಗಯ್ಯ ಹಾಗೂ ಪುಷ್ಪಾಪವತಿ ದಂಪತಿ ಪುತ್ರ ಎನ್.ಎಸ್.ಜನಾರ್ದನ್ ಅವರೊಂದಿಗೆ 5 ವರ್ಷಗಳ ಹಿಂದೆ ವಿವಾಹವಾಗಿತ್ತು, ಇವರಿಗೆ 5 ವರ್ಷದ ಓನೀಶಾ ಎಂಬ ಪುತ್ರಿ ಇದ್ದಾಳೆ. ಇದೀಗ ಇವರು 9 ತಿಂಗಳ ಗರ್ಭಿಣಿಯಾಗಿದ್ದಾರೆ.</p>.<p>ಲಕ್ಷ್ಮಿ ಅವರ ಪತಿ ಜನಾರ್ದನ್ ದಸರಾದ ಆಯುಧಪೂಜೆ ಸಂದರ್ಭ ದಲ್ಲಿ ಕೊಲೆಯಾಗಿದ್ದಾರೆ. ತಿಥಿ ಕಾರ್ಯದ ಮುಗಿದ ನಂತರ ಲಕ್ಷ್ಮಿ ಅವರನ್ನು ಮನೆಯಿಂದ ಹೊರಹಾಕಿದ್ದರು.</p>.<p>‘ನನಗೆ ಹಾಗೂ ನನ್ನ ಮಗಳಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಬೇಕು. ಅಲ್ಲದೇ ತಮ್ಮ ಜೀವನ ನಿರ್ವಹಣೆಗೆ ಅಗತ್ಯ ಆಸ್ತಿ ನೀಡಬೇಕು’ ಎಂದು ಲಕ್ಷ್ಮಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>