<p><strong>ಸಾಗರ: </strong>ಮೌಲ್ಯ ಸೊಕೋಟನ್ ಕರಾಟೆ ಡು ಅಸೋಸಿಯೇಷ್ನಿಂದ ನೇಪಾಳದ ಕಠ್ಮಂಡುವಿನಲ್ಲಿ ಏಪ್ರಿಲ್ 22ರಂದು ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಇಲ್ಲಿನ ಕರಾಟೆ ಅಸೋಶಿಯೇಷನ್ನ 11 ಕರಾಟೆ ಪಟುಗಳು ಭಾಗವಹಿಸಲಿದ್ದಾರೆ ಎಂದು ಅಸೋಸಿಯೇಷನ್ನ ಅಧ್ಯಕ್ಷ ಹಾಗೂ ಕರಾಟೆ ತರಬೇತುದಾರ ಸನ್ಸೈನ್ ಪಂಚಪ್ಪ ತಿಳಿಸಿದ್ದಾರೆ.</p>.<p>14ರಿಂದ 21ವಯೋಮಿತಿಯವರಿಗಾಗಿ ಕಠ್ಮಂಡುವಿನಲ್ಲಿ ಕಟಾ ಮತ್ತು ಕಮತಿ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ತೂಕ ಮತ್ತು ವಯೋಮಾನವನ್ನು ಆಧರಿಸಿ ಸ್ಪರ್ಧಿಗಳ ವಿಭಾಗವನ್ನು ನಿಗದಿ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ತಾಲ್ಲೂಕಿನ ಸಾತ್ವಿಕ್.ಜಿ.ಎಸ್, ದೀಪ, ದೀಕ್ಷಿತ್.ಸಿ, ಛಾಯಾ.ಬಿ.ಆರ್, ಅಭಿರಾಮ.ಟಿ.ಎಸ್, ಫರ್ಮಾನ್ ಅಹಮ್ಮದ್, ಮೇಘನಾ.ಎಂ.ಬಿ, ಅಭಿಷೇಕ್.ಎ, ಮೇಘನಾ.ಡಿ, ಅರ್ಪಿತಾ, ವಿಘ್ನೇಶ್ ಇವರುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ 6 ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ ಎಂದು ತಿಳಿಸಿದರು.</p>.<p>ಉದಯೋನ್ಮುಖ ಕರಾಟೆ ಪಟುಗಳಿಗೆ ಸಾರ್ವಜನಿಕರು, ಸಂಘಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಿದರೆ ಅವರು ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು. ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಾದರೆ ಹೆಚ್ಚಿನ ಖರ್ಚು ವೆಚ್ಚ ಉಂಟಾಗುತ್ತಿದೆ. ಸದ್ಯಕ್ಕೆ ನಮ್ಮ ಸಂಸ್ಥೆಯೆ ಅದನ್ನು ಭರಿಸುತ್ತಿದೆ ಎಂದು ಹೇಳಿದರು.</p>.<p>ಪ್ರಜಾ ವಿಮೋಚನಾ ಸೇನೆ ಮಾನವತಾವಾದ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸ್ವಾಮಿ, ಇಮ್ತಿಯಾಜ್ ಅಹಮ್ಮದ್, ದೇವರಾಜ್.ಬಿ, ಹೊಳಿಯಪ್ಪ ಮುಂಬಾಳು ಹಾಗೂ ಕರಾಟೆ ಪಟುಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ: </strong>ಮೌಲ್ಯ ಸೊಕೋಟನ್ ಕರಾಟೆ ಡು ಅಸೋಸಿಯೇಷ್ನಿಂದ ನೇಪಾಳದ ಕಠ್ಮಂಡುವಿನಲ್ಲಿ ಏಪ್ರಿಲ್ 22ರಂದು ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಇಲ್ಲಿನ ಕರಾಟೆ ಅಸೋಶಿಯೇಷನ್ನ 11 ಕರಾಟೆ ಪಟುಗಳು ಭಾಗವಹಿಸಲಿದ್ದಾರೆ ಎಂದು ಅಸೋಸಿಯೇಷನ್ನ ಅಧ್ಯಕ್ಷ ಹಾಗೂ ಕರಾಟೆ ತರಬೇತುದಾರ ಸನ್ಸೈನ್ ಪಂಚಪ್ಪ ತಿಳಿಸಿದ್ದಾರೆ.</p>.<p>14ರಿಂದ 21ವಯೋಮಿತಿಯವರಿಗಾಗಿ ಕಠ್ಮಂಡುವಿನಲ್ಲಿ ಕಟಾ ಮತ್ತು ಕಮತಿ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ತೂಕ ಮತ್ತು ವಯೋಮಾನವನ್ನು ಆಧರಿಸಿ ಸ್ಪರ್ಧಿಗಳ ವಿಭಾಗವನ್ನು ನಿಗದಿ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ತಾಲ್ಲೂಕಿನ ಸಾತ್ವಿಕ್.ಜಿ.ಎಸ್, ದೀಪ, ದೀಕ್ಷಿತ್.ಸಿ, ಛಾಯಾ.ಬಿ.ಆರ್, ಅಭಿರಾಮ.ಟಿ.ಎಸ್, ಫರ್ಮಾನ್ ಅಹಮ್ಮದ್, ಮೇಘನಾ.ಎಂ.ಬಿ, ಅಭಿಷೇಕ್.ಎ, ಮೇಘನಾ.ಡಿ, ಅರ್ಪಿತಾ, ವಿಘ್ನೇಶ್ ಇವರುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ 6 ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ ಎಂದು ತಿಳಿಸಿದರು.</p>.<p>ಉದಯೋನ್ಮುಖ ಕರಾಟೆ ಪಟುಗಳಿಗೆ ಸಾರ್ವಜನಿಕರು, ಸಂಘಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಿದರೆ ಅವರು ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬಹುದು. ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಾದರೆ ಹೆಚ್ಚಿನ ಖರ್ಚು ವೆಚ್ಚ ಉಂಟಾಗುತ್ತಿದೆ. ಸದ್ಯಕ್ಕೆ ನಮ್ಮ ಸಂಸ್ಥೆಯೆ ಅದನ್ನು ಭರಿಸುತ್ತಿದೆ ಎಂದು ಹೇಳಿದರು.</p>.<p>ಪ್ರಜಾ ವಿಮೋಚನಾ ಸೇನೆ ಮಾನವತಾವಾದ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸ್ವಾಮಿ, ಇಮ್ತಿಯಾಜ್ ಅಹಮ್ಮದ್, ದೇವರಾಜ್.ಬಿ, ಹೊಳಿಯಪ್ಪ ಮುಂಬಾಳು ಹಾಗೂ ಕರಾಟೆ ಪಟುಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>