‘ಈಗ ಮುಖ್ಯಮಂತ್ರಿಗಳು ಪಾಂಡವಪುರಕ್ಕೆ ಬಂದಿದ್ದಾರೆ, ಇನ್ನೇನು ಜಕ್ಕನಹಳ್ಳಿಗೆ ಬರುತ್ತಾರೆ. ಅಲ್ಲಿಂದ ನಾಗಮಂಗಲಕ್ಕೆ ಬರಲು 15 ನಿಮಿಷ’ ಎಂದು ಚಲುವರಾಯಸ್ವಾಮಿ ಹೇಳಿಯೇ 45 ನಿಮಿಷ ಕಳೆದಿತ್ತು. ‘ನನ್ನ ಮೇಲೆ ಪ್ರೀತಿ ಇದ್ದರೆ ಹೊಟ್ಟೆ ಹಸಿದರೂ, ಕಷ್ಟವಾದರೂ ಕೂರಬೇಕು. ನಿಮ್ಮ ಕೈಮುಗಿಯುತ್ತೇನೆ. ಇನ್ನು 10 ನಿಮಿಷ ಕಾಯಿರಿ. ನಿಮ್ಮ ಜೊತೆ ನಾನೂ ಹಸಿದಿದ್ದೇನೆ’ ಎಂದಾಗ ಜನರು ತಮ್ಮ ಹೊಟ್ಟೆ ಹಸಿವು ಮರೆತು, ‘ಅಯ್ಯೋ ಪಾಪ’ ಎಂದರು.