<p>ಕದನ ಹೆಲಿಕಾಪ್ಟರ್ಗಳು, ಟ್ಯಾಂಕ್ಗಳು ಮತ್ತು ಕಾಲಾಳು ಸೈನಿಕರನ್ನು ಬಳಸಿಕೊಂಡು ವೈರಿ ಪಡೆಯ ಮೇಲೆ ದಾಳಿ ನಡೆಸುವ ‘ಏರ್ ಕ್ಯಾವಲ್ರಿ’ ಯುದ್ಧತಂತ್ರವನ್ನು ಆಧರಿಸಿ ಭಾರತೀಯ ಸೇನೆಯು ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಈಚೆಗೆ ಅಣಕು ಕಾರ್ಯಾಚರಣೆ ನಡೆಸಿದೆ.</p>.<p>1970ರ ದಶಕದಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯರ ಗೆರಿಲ್ಲಾ ತಂತ್ರಕ್ಕೆ ಪ್ರತಿಯಾಗಿ ಅಮೆರಿಕದ ಸೇನೆ ‘ಏರ್ ಕ್ಯಾವಲ್ರಿ’ಯನ್ನು ಬಳಸಿತ್ತು. ಆ ತಂತ್ರವನ್ನೇ ತುಸು ಮಾರ್ಪಡಿಸಿ ತನ್ನ ಕದನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಸೇನೆ ಮುಂದಾಗಿದೆ. </p>.<p>ಸಾಮಾನ್ಯವಾಗಿ ಯುದ್ಧದ ಸಂದರ್ಭದಲ್ಲಿ ಭೂಸೇನೆಯ ಟ್ಯಾಂಕ್ ಮತ್ತು ಕಾಲಾಳು ತುಕಡಿಗಳು ವೈರಿ ಪಡೆಯ ಮೇಲೆ ಜಂಟಿಯಾಗಿ ಮುಗಿಬೀಳುತ್ತವೆ. ವೈರಿಗಳನ್ನು ಹಿಮ್ಮೆಟ್ಟಿಸಲು ಈ ಎರಡೂ ತುಕಡಿಗಳಿಗೆ ಸಾಧ್ಯವಾಗದಿದ್ದಾಗ ಕದನ ಹೆಲಿಕಾಪ್ಟರ್ಗಳ ತುಕಡಿಯನ್ನು ಯುದ್ಧಕ್ಕೆ ನಿಯೋಜಿಸಲಾಗುತ್ತದೆ. ಆದರೆ ‘ಏರ್ ಕ್ಯಾವಲ್ರಿ’ ಯುದ್ಧತಂತ್ರದ ಪ್ರಕಾರ ಟ್ಯಾಂಕ್, ಕಾಲಾಳು ಮತ್ತು ಕದನ ಹೆಲಿಕಾಪ್ಟರ್ಗಳನ್ನು ಒಳಗೊಂಡ ತುಕಡಿ ಒಟ್ಟಾಗಿಯೇ ದಾಳಿ ನಡೆಸುತ್ತದೆ.</p>.<p>ಲಘು ಕದನ ಹೆಲಿಕಾಪ್ಟರ್ಗಳನ್ನು ಬಳಸಿಕೊಂಡು ವೈರಿ ಪಡೆಯ ಮೇಲೆ ದಾಳಿ ನಡೆಸಲಾಗುತ್ತದೆ. ಸೈನಿಕರನ್ನು ಮತ್ತು ಸೇನಾ ವಾಹನಗಳನ್ನು ಏರ್ಡ್ರಾಪ್ ಮಾಡಲೂ ಇವು ಬಳಕೆಯಾಗುತ್ತವೆ. ಸೇನಾ ವಾಹನಗಳಿಗಿಂತ ಕ್ಷಿಪ್ರವಾಗಿ ಸೈನಿಕರನ್ನು ವೈರಿ ನೆಲೆಯತ್ತ ಕರೆದೊಯ್ಯಲು ಸಾಧ್ಯವಾಗುತ್ತದೆ</p>.<p>* ಕಾಲಾಳುಗಳು ದಾಳಿ ಮುಂದುವರಿಸುತ್ತಾರೆ</p>.<p>* ಕಾಲಾಳುಗಳಿಗೆ ರಕ್ಷಣೆ ಒದಗಿಸುವುದರ ಜತೆಗೆ ಟ್ಯಾಂಕ್ಗಳು ಎದುರಾಳಿಗಳ ಮೇಲೆ ದಾಳಿ ನಡೆಸುತ್ತವೆ</p>.<p>* ಇವೆಲ್ಲವುಗಳಿಗಿಂತ ಮುಂಬದಿಯಲ್ಲಿರುವ ಕದನ ಹೆಲಿಕಾಪ್ಟರ್ಗಳು ವೈರಿ ಪಡೆಗಳ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸುತ್ತಾ, ತುಕಡಿಯನ್ನು ಮುನ್ನಡೆಸುತ್ತವೆ</p>.<p>* ಯುದ್ಧಗಳಲ್ಲಿ ಕದನ ಹೆಲಿಕಾಪ್ಟರ್ಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳಲು, ತರಬೇತಿ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.</p>.<p>* ಅತ್ಯಾಧುನಿಕ ಅಪಾಚೆ ಕದನ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗುತ್ತಿದೆ. ಅವನ್ನು ಏರ್ ಕ್ಯಾವಲ್ರಿಯಲ್ಲಿ ಬಳಸಲಾಗುತ್ತದೆ.</p>.<p>* ಅಗತ್ಯ ಸಂದರ್ಭಗಳಲ್ಲಿ ಏರ್ ಕ್ಯಾವಲ್ರಿ ತುಕಡಿಗಳನ್ನು ದೇಶದ ಪಶ್ಚಿಮ ಮತ್ತು ಪೂರ್ವಗಡಿ ಗಳಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.</p>.<p>* ಈ ಯುದ್ಧತಂತ್ರವನ್ನು ಅನುಕರಿಸುವುದರಿಂದ ಯಾವುದೇ ಕಾರ್ಯಾಚರಣೆಯನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ.</p>.<p>* ಕಾರ್ಯಾಚರಣೆ ವೇಳೆಯಲ್ಲಿ ಟ್ಯಾಂಕ್ಗಳು, ಹೆಲಿಕಾಪ್ಟರ್ಗಳು ಮತ್ತು ಕಾಲಾಳುಗಳ ಮಧ್ಯೆ ಗರಿಷ್ಠ ಮಟ್ಟದ ಸಹಕಾರ ಇರಬೇಕಾಗುತ್ತದೆ.</p>.<p>* ಕಾರ್ಯಾಚರಣೆಗಳು ಪೂರ್ವ ಯೋಜಿತವಾಗಿ ನಡೆಯುವುದರಿಂದ ಹಣ, ಸಮಯ ಉಳಿತಾಯ ಸಾಧ್ಯ. ಪ್ರಾಣ ಹಾನಿ ತಗ್ಗಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕದನ ಹೆಲಿಕಾಪ್ಟರ್ಗಳು, ಟ್ಯಾಂಕ್ಗಳು ಮತ್ತು ಕಾಲಾಳು ಸೈನಿಕರನ್ನು ಬಳಸಿಕೊಂಡು ವೈರಿ ಪಡೆಯ ಮೇಲೆ ದಾಳಿ ನಡೆಸುವ ‘ಏರ್ ಕ್ಯಾವಲ್ರಿ’ ಯುದ್ಧತಂತ್ರವನ್ನು ಆಧರಿಸಿ ಭಾರತೀಯ ಸೇನೆಯು ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಈಚೆಗೆ ಅಣಕು ಕಾರ್ಯಾಚರಣೆ ನಡೆಸಿದೆ.</p>.<p>1970ರ ದಶಕದಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಸ್ಥಳೀಯರ ಗೆರಿಲ್ಲಾ ತಂತ್ರಕ್ಕೆ ಪ್ರತಿಯಾಗಿ ಅಮೆರಿಕದ ಸೇನೆ ‘ಏರ್ ಕ್ಯಾವಲ್ರಿ’ಯನ್ನು ಬಳಸಿತ್ತು. ಆ ತಂತ್ರವನ್ನೇ ತುಸು ಮಾರ್ಪಡಿಸಿ ತನ್ನ ಕದನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಸೇನೆ ಮುಂದಾಗಿದೆ. </p>.<p>ಸಾಮಾನ್ಯವಾಗಿ ಯುದ್ಧದ ಸಂದರ್ಭದಲ್ಲಿ ಭೂಸೇನೆಯ ಟ್ಯಾಂಕ್ ಮತ್ತು ಕಾಲಾಳು ತುಕಡಿಗಳು ವೈರಿ ಪಡೆಯ ಮೇಲೆ ಜಂಟಿಯಾಗಿ ಮುಗಿಬೀಳುತ್ತವೆ. ವೈರಿಗಳನ್ನು ಹಿಮ್ಮೆಟ್ಟಿಸಲು ಈ ಎರಡೂ ತುಕಡಿಗಳಿಗೆ ಸಾಧ್ಯವಾಗದಿದ್ದಾಗ ಕದನ ಹೆಲಿಕಾಪ್ಟರ್ಗಳ ತುಕಡಿಯನ್ನು ಯುದ್ಧಕ್ಕೆ ನಿಯೋಜಿಸಲಾಗುತ್ತದೆ. ಆದರೆ ‘ಏರ್ ಕ್ಯಾವಲ್ರಿ’ ಯುದ್ಧತಂತ್ರದ ಪ್ರಕಾರ ಟ್ಯಾಂಕ್, ಕಾಲಾಳು ಮತ್ತು ಕದನ ಹೆಲಿಕಾಪ್ಟರ್ಗಳನ್ನು ಒಳಗೊಂಡ ತುಕಡಿ ಒಟ್ಟಾಗಿಯೇ ದಾಳಿ ನಡೆಸುತ್ತದೆ.</p>.<p>ಲಘು ಕದನ ಹೆಲಿಕಾಪ್ಟರ್ಗಳನ್ನು ಬಳಸಿಕೊಂಡು ವೈರಿ ಪಡೆಯ ಮೇಲೆ ದಾಳಿ ನಡೆಸಲಾಗುತ್ತದೆ. ಸೈನಿಕರನ್ನು ಮತ್ತು ಸೇನಾ ವಾಹನಗಳನ್ನು ಏರ್ಡ್ರಾಪ್ ಮಾಡಲೂ ಇವು ಬಳಕೆಯಾಗುತ್ತವೆ. ಸೇನಾ ವಾಹನಗಳಿಗಿಂತ ಕ್ಷಿಪ್ರವಾಗಿ ಸೈನಿಕರನ್ನು ವೈರಿ ನೆಲೆಯತ್ತ ಕರೆದೊಯ್ಯಲು ಸಾಧ್ಯವಾಗುತ್ತದೆ</p>.<p>* ಕಾಲಾಳುಗಳು ದಾಳಿ ಮುಂದುವರಿಸುತ್ತಾರೆ</p>.<p>* ಕಾಲಾಳುಗಳಿಗೆ ರಕ್ಷಣೆ ಒದಗಿಸುವುದರ ಜತೆಗೆ ಟ್ಯಾಂಕ್ಗಳು ಎದುರಾಳಿಗಳ ಮೇಲೆ ದಾಳಿ ನಡೆಸುತ್ತವೆ</p>.<p>* ಇವೆಲ್ಲವುಗಳಿಗಿಂತ ಮುಂಬದಿಯಲ್ಲಿರುವ ಕದನ ಹೆಲಿಕಾಪ್ಟರ್ಗಳು ವೈರಿ ಪಡೆಗಳ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸುತ್ತಾ, ತುಕಡಿಯನ್ನು ಮುನ್ನಡೆಸುತ್ತವೆ</p>.<p>* ಯುದ್ಧಗಳಲ್ಲಿ ಕದನ ಹೆಲಿಕಾಪ್ಟರ್ಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳಲು, ತರಬೇತಿ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.</p>.<p>* ಅತ್ಯಾಧುನಿಕ ಅಪಾಚೆ ಕದನ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗುತ್ತಿದೆ. ಅವನ್ನು ಏರ್ ಕ್ಯಾವಲ್ರಿಯಲ್ಲಿ ಬಳಸಲಾಗುತ್ತದೆ.</p>.<p>* ಅಗತ್ಯ ಸಂದರ್ಭಗಳಲ್ಲಿ ಏರ್ ಕ್ಯಾವಲ್ರಿ ತುಕಡಿಗಳನ್ನು ದೇಶದ ಪಶ್ಚಿಮ ಮತ್ತು ಪೂರ್ವಗಡಿ ಗಳಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.</p>.<p>* ಈ ಯುದ್ಧತಂತ್ರವನ್ನು ಅನುಕರಿಸುವುದರಿಂದ ಯಾವುದೇ ಕಾರ್ಯಾಚರಣೆಯನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ.</p>.<p>* ಕಾರ್ಯಾಚರಣೆ ವೇಳೆಯಲ್ಲಿ ಟ್ಯಾಂಕ್ಗಳು, ಹೆಲಿಕಾಪ್ಟರ್ಗಳು ಮತ್ತು ಕಾಲಾಳುಗಳ ಮಧ್ಯೆ ಗರಿಷ್ಠ ಮಟ್ಟದ ಸಹಕಾರ ಇರಬೇಕಾಗುತ್ತದೆ.</p>.<p>* ಕಾರ್ಯಾಚರಣೆಗಳು ಪೂರ್ವ ಯೋಜಿತವಾಗಿ ನಡೆಯುವುದರಿಂದ ಹಣ, ಸಮಯ ಉಳಿತಾಯ ಸಾಧ್ಯ. ಪ್ರಾಣ ಹಾನಿ ತಗ್ಗಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>