ಓದುಗರ ಮನೋಬೀದಿಯಲ್ಲಿ ಸದಾ ಓಡಾಡಿಕೊಂಡಿರುವ ಹಲವು ಪಾತ್ರಗಳನ್ನು ಸೃಷ್ಟಿಸಿದ ಕನ್ನಡದ ಬಹುಮುಖ್ಯ ಕತೆಗಾರ, ಕವಿ ಜಯಂತ ಕಾಯ್ಕಿಣಿ. ಬರೀ ಓಡಾಡಿಕೊಂಡಿರುವುದಷ್ಟೇ ಅಲ್ಲ, ಆ ಚಲನೆಯ ಮೂಲಕವೇ ಚೈತನ್ಯಶೀಲತೆಯನ್ನೂ, ಅದೇ ಬದುಕನ್ನು ಹೊಸತಾಗಿ ನೋಡುವ ದೃಷ್ಟಿಕೋನವನ್ನೂ ಅವರ ಕೃತಿಗಳು ಓದುಗರಿಗೆ ದಯಪಾಲಿಸುತ್ತ ಬಂದಿವೆ.