‘ರೆಹಮಾನ್ ಎಂಬುವರು 40 ವರ್ಷಗಳ ಹಿಂದೆ ನಿರ್ಮಿಸಿದ್ದ ಬಾಜಿ ಬಾಬಾದರ್ಗಾವನ್ನು ಕೆಡವಿ, ಆ ಸ್ಥಳದಲ್ಲಿ ಮಸೀದಿ ನಿರ್ಮಿಸುವ ಉದ್ದೇಶದಿಂದ ಕಾಂಪೌಂಡ್ ತೆರವು ಮಾಡಲಾಗುತ್ತಿದೆ. ಆದರೆ, ದೇವಸ್ಥಾನ ಧ್ವಂಸ ಮಾಡಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ’ ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ಮಸೀದಿ ನಿರ್ಮಿಸುವ ಬದಲು ದರ್ಗಾವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಸ್ಥಳೀಯರು ತಕರಾರು ತೆಗೆದಿದ್ದರಿಂದ ಕಟ್ಟಡ ತೆರವು ಕೆಲಸವನ್ನು ತಾತ್ಕಾಲಿಕವಾಗಿಸ್ಥಗಿತಗೊಳಿಸಲಾಗಿದೆ ಎಂದು ಲಾಲತ್ಪೇಟೆ ಠಾಣೆಯ ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ. ಈ ದರ್ಗಾದ ಕಮಾನಿನಲ್ಲಿ ನಾಗ, ಅರ್ಧಚಂದ್ರ ಹಾಗೂ ನಕ್ಷತ್ರದ ವಿನ್ಯಾಸವಿದೆ.