<p><strong>ರಾಂಚಿ :</strong> ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಗುರುವಾರ ಸಚಿವ ಸಂಪುಟ ವಿಸ್ತರಿಸಿದ್ದು, 11 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.</p> <p>ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಆರು ಮತ್ತು ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್ನ ನಾಲ್ವರು ಮತ್ತು ಆರ್ಜೆಡಿ ಪಕ್ಷದ ಒಬ್ಬರು ಸಂಪುಟದಲ್ಲಿ ಸ್ಥಾನಪಡೆದರು. </p> <p>ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದಿತ್ತು. ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ನ.28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಮೈತ್ರಿಕೂಟವು 56 ಸ್ಥಾನಗಳನ್ನು ಪಡೆದಿತ್ತು.</p> <p>ಸಚಿವರಾದ 11 ಜನರಲ್ಲಿ ಆರು ಮಂದಿ ಹೊಸಬರು. ಉಳಿದಂತೆ ನಾಲ್ವರು ಎರಡನೇ ಬಾರಿಗೆ ಮತ್ತು ಒಬ್ಬರು ಮೂರನೇ ಬಾರಿಗೆ ಸಚಿವರಾಗಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.</p>.<p>ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗ್ಯಾಂಗ್ವಾರ್ ಅವರು ಪ್ರಮಾಣವಚನ ಬೋಧಿಸಿದರು. </p>.<p>ಜಾರ್ಖಂಡ್ ವಿಧಾನಸಭೆಯ ಅಧಿವೇಶನವು ಡಿಸೆಂಬರ್ 9 ರಿಂದ 12ರವರೆಗೂ ನಡೆಯಲಿದೆ. ಜೆಎಂಎಂ ಪಕ್ಷದ ಹಿರಿಯ ಶಾಸಕ ಸ್ಟೀಫನ್ ಮರಂಡಿ ಅವರು ಹಂಗಾಮಿ ಸ್ಪೀಕರ್ ಆಗಿ ಈಗಾಗಲೇ ನೇಮಕಗೊಂಡಿದ್ದಾರೆ.</p>.ಜಾರ್ಖಂಡ್: ನಾಳೆ ನೂತನ ಸಚಿವರ ಪ್ರಮಾಣವಚನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ :</strong> ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಗುರುವಾರ ಸಚಿವ ಸಂಪುಟ ವಿಸ್ತರಿಸಿದ್ದು, 11 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.</p> <p>ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಆರು ಮತ್ತು ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್ನ ನಾಲ್ವರು ಮತ್ತು ಆರ್ಜೆಡಿ ಪಕ್ಷದ ಒಬ್ಬರು ಸಂಪುಟದಲ್ಲಿ ಸ್ಥಾನಪಡೆದರು. </p> <p>ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದಿತ್ತು. ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ನ.28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಮೈತ್ರಿಕೂಟವು 56 ಸ್ಥಾನಗಳನ್ನು ಪಡೆದಿತ್ತು.</p> <p>ಸಚಿವರಾದ 11 ಜನರಲ್ಲಿ ಆರು ಮಂದಿ ಹೊಸಬರು. ಉಳಿದಂತೆ ನಾಲ್ವರು ಎರಡನೇ ಬಾರಿಗೆ ಮತ್ತು ಒಬ್ಬರು ಮೂರನೇ ಬಾರಿಗೆ ಸಚಿವರಾಗಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.</p>.<p>ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗ್ಯಾಂಗ್ವಾರ್ ಅವರು ಪ್ರಮಾಣವಚನ ಬೋಧಿಸಿದರು. </p>.<p>ಜಾರ್ಖಂಡ್ ವಿಧಾನಸಭೆಯ ಅಧಿವೇಶನವು ಡಿಸೆಂಬರ್ 9 ರಿಂದ 12ರವರೆಗೂ ನಡೆಯಲಿದೆ. ಜೆಎಂಎಂ ಪಕ್ಷದ ಹಿರಿಯ ಶಾಸಕ ಸ್ಟೀಫನ್ ಮರಂಡಿ ಅವರು ಹಂಗಾಮಿ ಸ್ಪೀಕರ್ ಆಗಿ ಈಗಾಗಲೇ ನೇಮಕಗೊಂಡಿದ್ದಾರೆ.</p>.ಜಾರ್ಖಂಡ್: ನಾಳೆ ನೂತನ ಸಚಿವರ ಪ್ರಮಾಣವಚನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>