ಛತ್ ಹಬ್ಬದ ಅಂಗವಾಗಿ ಸೂರ್ಯನಿಗೆ ಪೂಜೆ ಸಲ್ಲಿಸಿ ಹಿಂದಿರುಗುವ ವೇಳೆ, ಚೌಧರಿ ಹೆಣ್ಣಿನ ಕುಟುಂಬದ ಸದಸ್ಯರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮರೇಂದ್ರ ಕುಮಾರ್ ಹೇಳಿದ್ದಾರೆ.
ಚೌಧರಿ ಆಕೆಯನ್ನು ಪ್ರೀತಿಸುತ್ತಿದ್ದು, ಕುಟುಂಬಸ್ಥರು ಸಂಬಂಧಕ್ಕೆ ನಕಾರ ವ್ಯಕ್ತಪಡಿಸಿದ್ದರಿಂದ ನೋಂದುಕೊಂಡಿದ್ದ. ಹೀಗಾಗಿ ದಾಳಿ ನಡೆಸಿ, ಸ್ಥಳದಿಂದ ಪಾರಾರಿಯಾಗಿದ್ದ. ಗಾಯಗೊಂಡವರನ್ನು ಉನ್ನತ ಚಿಕಿತ್ಸೆಗಾಗಿ ಪಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಂದನ್ ಝಾ ಹಾಗೂ ರಾಜೇಂದ್ರ ಝಾ ಮೃತಪಟ್ಟಿದ್ದು, ಇಬ್ಬರೂ ಸಹೋದರರು. ಗಾಯಗೊಂಡವರಲ್ಲಿ ಅವರ ಸಹೋದರಿ ದುರ್ಗಾ ಝಾ ಹಾಗೂ ತಂದೆ ಶಶಿಭೂಷಣ್ ಝಾ ಸೇರಿದ್ದಾರೆ.
ಮೃತ ಸಹೋದರರ ಪೈಕಿ ಒಬ್ಬರ ಪತ್ನಿಯಾದ ಲವ್ಲೀ ದೇವಿ ಹಾಗೂ ಆಪ್ತ ಸಂಬಂಧಿ ಪ್ರೀತಿ ದೇವಿಗೆ ಗಾಯಗಳಾಗಿವೆ. ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.