ನೈರುತ್ಯ ದೆಹಲಿಯ ದ್ವಾರಕಾ ಮೋರ್ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ನವಾಡದ ಪ್ರವೀಣ್ ಗೆಹ್ಲೋಟ್, ವಿಕಾಸ್ ದಲಾಲ್ ಎಂಬುವವರು ಶೌಟೌಟ್ಗೆ ಬಲಿಯಾಗಿದ್ಧಾರೆ. ಈ ಇಬ್ಬರ ಮೇಲೂ ದೆಹಲಿ ಮತ್ತು ಹರಿಯಾಣದ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ಕಳ್ಳತನದ ಹಲವು ಕೇಸ್ಗಳು ಇದ್ದವು. ಈ ಪೈಕಿ ದಲಾಲ್ 2018ರಲ್ಲಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದ.