ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡು, ದಿನದ ತುತ್ತಿಗೂ ಪರದಾಡ ಬೇಕಾದ ಸ್ಥಿತಿಗೆ ತಲುಪಿದ್ದ ವಲಸೆ ಕಾರ್ಮಿಕರು ಊರು ತಲುಪಿಕೊಳ್ಳುವ ಧಾವಂತದಲ್ಲಿ ಈ ಲಾರಿಗಳನ್ನು ಏರಿದ್ದರು. ಆದರೆ, 24 ಮಂದಿ ಮನೆಗೆ ಬದಲಾಗಿ ಮಸಣ ತಲುಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಸಮೀಪದ ಎರಡು ಪೊಲೀಸ್ ಠಾಣೆಗಳ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದೆ.