ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಾಂತಿಪುರದ ಬಳಿಯ ಕುಪ್ಪಂ–ಪಲ್ಲಮನೇರು ಹೆದ್ದಾರಿ ಬಳಿ ತಮ್ಮ ನೆಚ್ಚಿನ ನಟನ ಜನ್ಮದಿನದ ಅಂಗವಾಗಿ ಬ್ಯಾನರ್ ಕಟ್ಟಲು ಹೋದ ಸೋಮಶೇಖರ್ (30), ಅವರ ಸಹೋದರ ರಾಜೇಂದ್ರ (32) ಮತ್ತು ಸ್ನೇಹಿತ ಅರುಣಾಚಲಂ (28) ನಿನ್ನೆ ಮೃತಪಟ್ಟಿದ್ದಾರೆ. ಹೆದ್ದಾರಿಯ ಬದಿ ಇದ್ದ 25 ಅಡಿ ಉದ್ದದ ವಿದ್ಯುತ್ ಕಂಬಕ್ಕೆ ಬ್ಯಾನರ್ ಕಟ್ಟುವ ವೇಳೆ ಈ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮೃತಪಟ್ಟವರು ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿಗಳು. ಜೊತೆಗೆ, ಜನಸೇನಾ ಪಕ್ಷದ ಕಾರ್ಯಕರ್ತರೂ ಹೌದು. 2018ರಲ್ಲಿಯೂ ಇಂತಹದ್ದೇ ದುರ್ಘಟನೆ ನಡೆದಿತ್ತು.